ಚಾಕೊಲೇಟ್ ಅಜ್ಜಿ ಲಕ್ಷ್ಮಮ್ಮನ ಜೀವನೋತ್ಸಾಹ ಎಲ್ಲರಿಗೂ ಮಾದರಿ
ಬೆಂಗಳೂರು: ನೀವಿಲ್ಲಿ ಕಾಣುತ್ತಿರುವ ಅಜ್ಜಿ ಲಕ್ಷ್ಮಮ್ಮ ಅಂತ ಇವರು ಅಂತಿಂಥ ಅಜ್ಜಿಯಲ್ಲ. ಇವರಿಗೆ 67 ವಯಸ್ಸು. ಈ ತಲೆಮಾರಿನ ಎಷ್ಟೋ ಯುವಕ-ಯುವತಿಯರಿಗಿಂತಲೂ ಫಿಟ್ ಆಗಿದ್ದಾರೆ. ಇವರ ವಯಸ್ಸಿನ ಎಷ್ಟೋ ಜನರು ಮನೆಯಲ್ಲಿ ನೆಮ್ಮದಿಯಾಗಿ ಇದ್ರೆ ಸಾಕು, ಚಳಿಯಲ್ಲಿ ಹೊರಗೆ ಯಾಕೆ ಹೋಗಬೇಕು ಎನ್ನುವ ಮನಸ್ಥಿತಿಯಲ್ಲಿರುತ್ತಾರೆ. ಅಂಥವರ ನಡುವೆ ಈ ಅಜ್ಜಿ ಡಿಫರೆಂಟ್ ಅನ್ನಿಸಿಕೊಳ್ತಾರೆ.(ಬರಹ: ಗೌತಮ್ ಹೆಗ್ಡೆ)
ಕೋರಮಂಗಲದ ವಿಪ್ರೋ ಪಾರ್ಕ್ ಬಳಿ ಮಾತಿಗೆ ಸಿಕ್ಕ ಈ ಅಜ್ಜಿ, ಪ್ರತಿದಿನ ಬೆಳಗ್ಗೆ 3:30ಕ್ಕೆ ಎದ್ದು ಮನೆ ಕೆಲಸ ಮುಗಿಸುತ್ತಾರೆ. ಆರೋಗ್ಯದ ಒಳಿತಿಗಾಗಿ ಒಂದು ಸಂಸ್ಥೆಯಲ್ಲಿ ಸ್ವಲ್ಪ ಸಮಯ ಕಳೆದು ತನ್ನ ಬಟ್ಟೆಯ ಕೈಚೀಲ ತುಂಬಾ ಚಾಕೊಲೇಟ್, ಬಿಸ್ಕೀಟ್, ಕಡಲೆಕಾಯಿಯನ್ನು ತುಂಬಿಸಿಕೊಂಡು ವಾಕಿಂಗ್ ಹೊರಡುತ್ತಾರೆ. ರಸ್ತೆಯುದ್ದಕ್ಕೂ ಸಿಗೋ ಮಕ್ಕಳಿಗೆ ಚಾಕೊಲೇಟ್, ನಾಯಿಗಳಿಗೆ ಬಿಸ್ಕೆಟ್, ಅಜ್ಜಿ ಜೊತೆ ಪ್ರೀತಿಯಲ್ಲಿ ಮಾತಡೋ ಎಲ್ಲರಿಗೂ ಕಡಲೆಕಾಯಿ ಕೊಡುತ್ತಾರೆ. ಕೋರಮಂಗಲದ ವಿಪ್ರೋ ಪಾರ್ಕ್ನಲ್ಲಿ ವಾಕಿಂಗ್, ವ್ಯಾಯಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ಸದಾ ಖುಷಿಖುಷಿಯಿಂದ ಹತ್ತು ಜನರ ಜೊತೆಗೆ ಮಾತನಾಡುವುದರಿಂದ ಇವರ ಮಾನಸಿಕ ಆರೋಗ್ಯವೂ ಚೆನ್ನಾಗಿಯೇ ಇರುತ್ತೆ.

ಸುಮಾರು 40 ವರ್ಷದಿಂದ ಪ್ರತಿ ದಿನವನ್ನು ಹೀಗೆಯೇ ಕಳೆಯುತ್ತಿರುವ ಈ ಮಕ್ಕಳ ಪ್ರೀತಿಯ ಚಾಕೊಲೇಟ್ ಅಜ್ಜಿಗೆ ಶೀತ, ಕೆಮ್ಮು ಬಿಟ್ಟರೆ ಬೇರೆ ಯಾವ ಕಾಯಿಲೆಯೂ ಹತ್ತಿರ ಬರೋದಿಲ್ಲ. 'ನಾನು ಆಸ್ಪತ್ರೆಯ ಮುಖ ಕಂಡವಳಲ್'ಲ ಅಂತ ಅಜ್ಜಿ ಹೇಳುತ್ತಾರೆ.
ಇವರ ಆರೋಗ್ಯ ಹೀಗೆ ಇರಲಿ ಎಂದು ನಾವು ಆಶಿಸೋಣ. ಇವರ ಚಟುವಟಿಕೆಯ ವಿಡಿಯೊ ಇಲ್ಲಿದೆ. ಸಂಪೂರ್ಣ ವಿಡಿಯೊ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.
-
Love Mocktail 3: ಲವ್ ಮಾಕ್ಟೇಲ್ 3 ಸಿನಿಮಾ ಕದ್ದ ಕಥೆ: ಮಾರಿ ಗೋಲ್ಡ್ ನಿರ್ದೇಶಕ ರಾಘವೇಂದ್ರ ನಾಯ್ಕ್ ಗಂಭೀರ ಆರೋಪ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications