'ಹಸಿರು ರಕ್ಷಾ ಬಂಧನ' ಆಚರಿಸಿದ ಅನಂತ್ ಕುಮಾರ್
ಬೆಂಗಳೂರು, ಆಗಸ್ಟ್ 7: ರಕ್ಷಾ ಬಂಧನವನ್ನು ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ವಿಶಿಷ್ಟವಾಗಿ ಆಚರಿಸಿದರು.
'ಹಸಿರು ರಕ್ಷಾ ಬಂಧನ' ಆಚರಿಸಿದ ಅನಂತ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮತ್ತು ಹಲವು ಹೆಂಗಳೆಯರು ರಾಖಿ ಕಟ್ಟಿ ಸಂಭ್ರಮಿಸಿದರು.

ಈ ಸಂದರ್ಭ ಮಾತನಾಡಿದ ಸಂಸದ ಅನಂತ್ ಕುಮಾರ್, "ನಾವು ಹಲವು ವರ್ಷಗಳಿಂದ ರಕ್ಷಾ ಬಂಧನವನ್ನು ಆಚರಿಸುತ್ತಾ ಬಂದಿದ್ದೇವೆ. ರಕ್ಷಾ ಬಂಧನ ಭೂಮಿ, ಪ್ರಕೃತಿಗೆ, ಭಾರತ ಮಾತೆಗೆ ಭಾರವಾಗದಿರಲಿ; ಬದಲಿಗೆ ರಕ್ಷಣೆಯನ್ನು ನೀಡಲಿ. ನಾವೆಲ್ಲಾ ಈ ದಿನ 'ಹಸಿರು ರಕ್ಷಾ ಬಂಧನ' ಆಚರಿಸೋಣ, ಎಂದು ಹೇಳಿದರು.

"ಕಳೆದ 84 ವಾರಗಳಿಂದ ನಾವು ಪ್ರತಿ ಭಾನುವಾರ ಸಸ್ಯಾಗ್ರಹದ ಹೆಸರಿನಲ್ಲಿ ಗಿಡಗಳನ್ನು ನೆಡುತ್ತಾ ಬಂದಿದ್ದೇವೆ. ನಾವು ಈ ಸಂದರ್ಭದಲ್ಲಿ ಪರಿಸರ ರಕ್ಷಣೆ ಮಾಡುವ, ಗಿಡಮರಗಳನ್ನು ಕಡಿಯುವುದಿಲ್ಲ ಎನ್ನುವ ಸಂಕಲ್ಪವನ್ನು ಕೈಗೊಳ್ಳೋಣ," ಎಂದು ಅನಂತ್ ಕುಮಾರ್ ಕರೆ ನೀಡಿದರು.











Click it and Unblock the Notifications