ಎರಡು ಕಿ.ಮೀ.ಓಡಿ 600 ಜನರ ಪ್ರಾಣ ಉಳಿಸಿದ್ರು

ಬೆಂಗಳೂರು ವಿಭಾಗದ ಧರ್ಮಪುರಿ ಹಾಗೂ ಸೇಲಂ ಸೆಕ್ಷನ್ ನಡುವಿನ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ ಸುಮಾರು 20 ಮೀಟರ್ ರೇಲ್ವೆ ಹಳಿ ಕೊಚ್ಚಿ ಹೋಗಿತ್ತು. ಈ ಮಾರ್ಗದಲ್ಲಿ ಬರುತ್ತಿದ್ದ ರೈಲನ್ನು ತಡೆಯುವ ಮೂಲಕ ಸಿಬ್ಬಂದಿ ಪ್ರಯಾಣಿಕರನ್ನು ಉಳಿಸಿದ್ದಾರೆ.
ಗ್ಯಾಂಗ್ ಮೇಟ್ ಎಸ್. ಮುರುಗನ್ ಹಾಗೂ ಟ್ರಾಲಿಮ್ಯಾನ್ ಎಂ. ವೇಲು ಕರ್ತವ್ಯ ಪ್ರಜ್ಞೆಯಿಂದಾಗಿ ಮಂಗಳವಾರ ರಾತ್ರಿ ಸಂಭವಿಸಬಹುದಾಗಿದ್ದ ಯಶವಂತಪುರ - ಸೇಲಂ ಪ್ಯಾಸೆಂಜರ್ ರೈಲಿನ ಅಪಘಾತ ತಪ್ಪಿದೆ. ಇದರಲ್ಲಿದ್ದ 600ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.
ಆಗಿದ್ದೇನು : ಮಂಗಳವಾರ ಸಂಜೆ ಮುರುಗನ್ ಮತ್ತು ವೇಲು ಶಿವಾಡಿ - ತೋಪುರ್ ಘಟ್ಟದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು. ಈ ವೇಳೆ ಭಾರಿ ಮಳೆ ಸುರಿಯುತ್ತಿತ್ತು. ತಕ್ಷಣ ಅವರು ರೇಲ್ವೆ ಹಳಿಗಳ ಪರಿಶೀಲನೆ ಮುಂದುವರೆಸಿದರು.
ಘಟ್ಟ ಪ್ರದೇಶದ ನಡುವೆ ಇಬ್ಬರೂ ಕಾಲ್ನಡಿಗೆಯಲ್ಲೇ ಸೇತುವೆಗಳು, ಹಾಗೂ ಎತ್ತರದಲ್ಲಿರುವ ರೇಲ್ವೆ ಹಳಿಗಳ ಪರಿಶೀಲನೆ ನಡೆಸುತ್ತಿರುವಾಗ, ರಾತ್ರಿ 8 ಗಂಟೆ ಸುಮಾರಿಗೆ 44/100 ಕಿಲೋ ಮೀಟರ್ ನಲ್ಲಿ ಹಳಿಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ಹರಿಯುತಿತ್ತು.
ಅದೇ ಹಳಿಯ ಮೇಲೆ ಸ್ಪಲ್ಪ ಸಮಯದಲ್ಲೇ 600ಕ್ಕೂ ಅಧಿಕ ಪ್ರಯಾಣಿಕರಿದ್ದ 56242 ಸಂಖ್ಯೆಯ ಯಶವಂತಪುರ- ಸೇಲಂ ಪ್ಯಾಸೆಂಜರ್ ರೈಲು ಬರಬೇಕಾಗಿತ್ತು. ಕೂಡಲೇ ಎಚ್ಚೆತ್ತ ಮುರುಗನ್ ಹಾಗೂ ವೇಲು ಹತ್ತಿರದ ಸ್ಟೇಷನ್ ಗೆ ಓಡಿದ್ದಾರೆ.
ಸ್ಥಳದಿಂದ 2 ಕಿ.ಮೀ.ದೂರವಿದ್ದ ಮುತ್ತಂಪಟ್ಟಿ ರೇಲ್ವೆ ನಿಲ್ದಾಣಕ್ಕೆ ಬಂದ ಅವರು, ಪ್ಯಾಸೆಂಜರ್ ರೈಲನ್ನು ಮುತ್ತಂಪಟ್ಟಿ ನಿಲ್ದಾಣದಲ್ಲಿ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ಸಿಬ್ಬಂದಿಯೊಂದಿಗೆ ನೀರು ಹರಿಯುತ್ತಿದ್ದ ಸ್ಥಳಕ್ಕೆ ಬಂದವರಿಗೆ ಶಾಕ್ ಕಾದಿತ್ತು.
ಅಲ್ಲಿ ಸುಮಾರು 20 ಮೀಟರ್ ನಷ್ಟು ಹಳಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಒಂದು ವೇಳೆ ರೈಲು ಆ ಮಾರ್ಗದಲ್ಲಿ ಬಂದಿದ್ದರೆ ಭಾರಿ ದುರಂತ ಸಂಭವಿಸುತ್ತಿತ್ತು. ಮುರುಗನ್ ಹಾಗು ವೇಲು ಸಮಯ ಪ್ರಜ್ಞೆಯನ್ನು ಕೊಂಡಾಡಿರುವ ನೈಋತ್ಯ ರೇಲ್ವೆ ವ್ಯವಸ್ಥಾಪಕ ಇಬ್ಬರಿಗೂ 5 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ? -
Rain Alert: ಬೇಸಿಗೆ ಮಳೆಗೆ ಬೆಂಗಳೂರಿನ ಕೆಲವೆಡೆ ಸಂಚಾರ ಅಸ್ತವ್ಯಸ್ತ, ಮಾ.21ರವರೆಗೂ ಮಳೆ -
Bengaluru Airport: ಮಳೆ ಅಬ್ಬರಕ್ಕೆ 30 ವಿಮಾನಗಳ ಮಾರ್ಗ ಬದಲು, ಏರ್ಪೋರ್ಟ್ ಟರ್ಮಿನಲ್ನಲ್ಲಿ ನೀರು ಸೋರಿಕೆ -
ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು, ಹಲಸು, ಕಲ್ಲಂಗಡಿ; ಕೈಗೆ ಬಂದ ತುತ್ತು ಬಾಯಿಗಿಲ್ಲ -
Heavy Rain: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ: ಐಎಂಡಿ -
ಮೊದಲ ಮಳೆಗೆ ಎಚ್ಚೆತ್ತ GBA: 2000 ಕೋಟಿ ರೂ. ವೆಚ್ಚದ ರಾಜಕಾಲುವೆ ಕಾಮಗಾರಿಗಳಿಗೆ ಡೆಡ್ಲೈನ್ -
Bengaluru Rain: ಬೆಂಗಳೂರಿನಲ್ಲಿ ತಾಪಮಾನ ಕುಸಿತ: ಸುಡುಬಿಸಿಲಿಗೆ ಬ್ರೇಕ್ ಹಾಕಿದ ವರ್ಷದ ಮೊದಲ ಮಳೆ, ತಂಪಾದ ಸಿಲಿಕಾನ್ ಸಿಟಿ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್












Click it and Unblock the Notifications