ಜನ ಸಾಮಾನ್ಯರಿಗೆ ವಿಮಾನಯಾನ ಬೆಳಗಾವಿ-ಸೂರತ್ ಫ್ಲೈಟ್ ಶುರು
ಬೆಳಗಾವಿ, ಡಿ. 23: ಭಾರತ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆ ದೇಶದ ಸಾಮಾನ್ಯ ನಾಗರಿಕರು ವಾಯುಯಾನ ಮಾಡಿ - ಆರ್.ಸಿ.ಎಸ್.- ಉಡಾನ್ ಅಡಿಯಲ್ಲಿ ಕರ್ನಾಟಕದ ಬೆಳಗಾವಿಯಿಂದ ಗುಜರಾತ್ನ ಸೂರತ್ ಹಾಗೂ ಅಜ್ಮೇರ್ನ ಕಿಶನ್ ಗಢ ನಡುವೆ ಪ್ರಥಮ ವಿಮಾನ ಸಂಚಾರಕ್ಕೆ ಇತ್ತೀಚೆಗೆ ಹಸಿರು ನಿಶಾನೆ ತೋರಲಾಯಿತು.
ನಾಗರಿಕ ವಿಮಾನಯಾನ ಸಚಿವಾಲಯ (ಎಂ.ಓ.ಸಿ.ಎ.) ಅಧಿಕಾರಿಗಳು ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎ.ಎ.ಐ.)ದ ಅಧಿಕಾರಿಗಳು ಈ ಉದ್ಘಾಟನಾ ಹಾರಾಟದ ವೇಳೆ ಹಾಜರಿದ್ದರು. ಸೂರತ್ - ಕಿಶನ್ ಗಢ - ಬೆಳಗಾವಿ ಮಾರ್ಗದಲ್ಲಿ ವಿಮಾನ ಸಂಚಾರದ ಕಾರ್ಯಚರಣೆಯ ಆರಂಭ, ಉಡಾನ್ ಅಡಿಯಲ್ಲಿ ದೇಶದ ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳಿಗೆ ಮಹಾನಗರಗಳೊಂದಿಗೆ ವಾಯು ಸಂಪರ್ಕವನ್ನು ಒದಗಿಸುವ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿದೆ. 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಉಡಾನ್ ಯೋಜನೆ ಅಡಿಯಲ್ಲಿ ವಿಮಾನಗಳ ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ಯೋಜನೆಯ ವ್ಯಾಪ್ತಿಯಲ್ಲಿ ಇದು 303ನೇ ಮಾರ್ಗದ ಉದ್ಘಾಟನೆಯಾಗಿದೆ.

ವಾಯು ಸಂಪರ್ಕವಿಲ್ಲದ ವಲಯಗಳನ್ನು ಸಂಪರ್ಕಿಸುವ ಯತ್ನ
ವಾಯು ಸಂಪರ್ಕವಿಲ್ಲದ ವಲಯಗಳನ್ನು ಸಂಪರ್ಕಿಸುವ ನಿರಂತರ ಪ್ರಯತ್ನದಲ್ಲಿ, ಕಳೆದ ವರ್ಷ ಉಡಾನ್ -3 ಹರಾಜಿನಲ್ಲಿ ಸ್ಟಾರ್ ಏರ್ ಗೆ ಬೆಳಗಾವಿ ಸೂರತ್ - ಕಿಶನ್ ಗಢ ಮಾರ್ಗದ ಕಾರ್ಯಾಚರಣೆಯನ್ನು ನೀಡಲಾಗಿತ್ತು. ವಿಮಾನ ಯಾನ ದರಗಳು ಕೈಗೆಟುಕುವ ಮತ್ತು ಸಾಮಾನ್ಯ ಜನರಿಗೆ ಅನುವಾಗುವಂತೆ ಉಡಾನ್ ಯೋಜನೆಯಡಿ ವಿಮಾನಯಾನ ಸಂಸ್ಥೆಗಳಿಗೆ ಕಾರ್ಯಸಾಧ್ಯತೆ ಅಂತರದ ನಿಧಿ (ವಿಜಿಎಫ್) ನೀಡಲಾಗುತ್ತಿದೆ. ಈ ವಿಮಾನಯಾನ ಸಂಸ್ಥೆ ವಾರದಲ್ಲಿ ಮೂರು ದಿನ ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿದ್ದು, ತನ್ನ 50 ಆಸನಗಳ ಎಂಬ್ರೇರ್ -145 ವಿಮಾನವನ್ನು ನಿಯೋಜಿಸಿದೆ. ಈ ಮಾರ್ಗವು ವಿಮಾನಯಾನ ಸಂಸ್ಥೆಯಿಂದ 20ನೇ ಉಡಾನ್ ಮಾರ್ಗದ ಪ್ರಾರಂಭವನ್ನು ಸೂಚಿಸುತ್ತದೆ.

ಸ್ಥಳೀಯರ ಬಹುನಿರೀಕ್ಷಿತ ಬೇಡಿಕೆ
ಈ ಮಾರ್ಗದ ವೈಮಾನಿಕ ಸಂಪರ್ಕವು ಸ್ಥಳೀಯರ ಬಹುನಿರೀಕ್ಷಿತ ಬೇಡಿಕೆಗಳಲ್ಲಿ ಒಂದಾಗಿತ್ತು. ಕಿಶನ್ಗಢದ ಪ್ರಸಿದ್ಧ ನವಗ್ರಹ ದೇವಸ್ಥಾನ, ಅಜ್ಮೀರ್ ಷರೀಫ್ ದರ್ಗಾ, ಪುಷ್ಕರ್ ಸರೋವರ, ಪುಷ್ಪ ಮಹಲ್ ಅರಮನೆ, ರೂಪಂಗಢ್ ಕೋಟೆ ಇತ್ಯಾದಿಗಳಿಗೆ ಜನರು ಆಗಾಗ್ಗೆ ಭೇಟಿ ನೀಡುತ್ತಾರೆ. ಇದಲ್ಲದೆ, ಕಿಶನ್ ಗಢವನ್ನು ಭಾರತದ ಅಮೃತ ಶಿಲೆಯ ನಗರ ಎಂದೂ ಕರೆಯಲಾಗುತ್ತದೆ ಮತ್ತು ಇದು ಕೆಂಪು ಮೆಣಸಿನಕಾಯಿಯ ದೊಡ್ಡ ಮಾರುಕಟ್ಟೆಯೂ ಆಗಿದೆ. ಇದುವರೆಗೂ ಬೆಳಗಾವಿಯಿಂದ ಕಿಶನ್ ಗಢಕ್ಕೆ ನೇರ ಸಾರಿಗೆ ಸಂಪರ್ಕ ಲಭ್ಯವಿರಲಿಲ್ಲ.

25 ಗಂಟೆ ಬದಲು 3 ಗಂಟೆ 10 ನಿಮಿಷ ಪ್ರಯಾಣ
ಪ್ರಯಾಣಿಕರು ಆಗ್ರಾ ತನಕ ರೈಲಿನಲ್ಲಿ ಪ್ರಯಾಣಿಸಬೇಕಾಗಿತ್ತು ಮತ್ತು ಅಲ್ಲಿಂದ ಅವರು ಕಿಶನ್ ಗಢ ತಲುಪಲು ಬಸ್ ನಲ್ಲಿ ತೆರಳ ಬೇಕಾಗುತ್ತಿತ್ತು. ಅದೇ ರೀತಿ ರಸ್ತೆ ಮೂಲಕ ಇಡೀ ಪ್ರಯಾಣ 25 ಗಂಟೆ ಆಗುತ್ತಿತ್ತು. ಈಗ ಜನರು ಆರಾಮವಾಗಿ 3 ಗಂಟೆ 10 ನಿಮಿಷದಲ್ಲಿ ವಿಮಾನದ ಮೂಲಕ ಪ್ರಯಾಣಿಸಬಹುದಾಗಿದೆ. ಇದು ಬೆಳಗಾವಿ ಮತ್ತು ಕಿಶನ್ ಗಢ ನಡುವೆ ಆಗಾಗ್ಗೆ ಪ್ರಯಾಣಿಸುವ ಜನರ ಹಣ, ಸಮಯ, ಶ್ರಮ ಉಳಿಸುವುದರ ಜೊತೆಗೆ ಈ ಮಾರ್ಗದಲ್ಲಿ ನಿಯಮಿತ ವಿಮಾನ ಹಾರಾಟದ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ ಈ ಪ್ರದೇಶದ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ವೇಗ ದೊರೆಯುತ್ತದೆ.

50 ಗಂಟೆಗಳಿಗಿಂತ 80 ನಿಮಿಷಗಳ ಹಾರಾಟ
ರೇಷ್ಮೆ ನಗರಿ ಮತ್ತು ವಜ್ರಗಳ ನಗರಿ ಸೂರತ್ ನ ಸ್ಥಳೀಯರು ಅಮೃತಶಿಲೆ ನಗರವನ್ನು ತಲುಪಲು ದೀರ್ಘ ರೈಲು ಮತ್ತು ರಸ್ತೆ ಪ್ರಯಾಣವನ್ನು ಮಾಡಬೇಕಾಗುತ್ತಿತ್ತು. ಇಡೀ ಪ್ರಯಾಣವು 50 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಈಗ, ಸ್ಥಳೀಯರು ಕೇವಲ 80 ನಿಮಿಷಗಳ ಹಾರಾಟದ ಆಯ್ಕೆಯೊಂದಿಗೆ ಕಿಶನ್ ಗಢ ತಲುಪುತ್ತಾರೆ.
| ಬೆಳಗಾವಿ-ಸೂರತ್-ಕಿಶನ್ ಗಢ ವಿಮಾನ | ||||
|---|---|---|---|---|
| ವಿಮಾನದ ಸಂಖ್ಯೆ | ವಲಯ | ನಿರ್ಗಮನ | ಆಗಮನ | ಆವರ್ತನ |
| ಓಜಿ-141 | ಬೆಳಗಾವಿ-ಸೂರತ್ | 12:00 | 13:20 | ಸೋಮವಾರ, ಬುಧವಾರ, ಶುಕ್ರವಾರ |
| ಓಜಿ-143 | ಸೂರತ್-ಕಿಶನ್ ಗಢ | 13:50 | 15:10 | ಸೋಮವಾರ, ಬುಧವಾರ, ಶುಕ್ರವಾರ |
| ಓಜಿ-144 | ಕಿಶನ್ ಗಢ-ಸೂರತ್ | 15:40 | 17:00 | ಸೋಮವಾರ, ಬುಧವಾರ, ಶುಕ್ರವಾರ |
| ಓಜಿ-142 | ಸೂರತ್ -ಬೆಳಗಾವಿ | 17:30 | 18:50 | ಸೋಮವಾರ, ಬುಧವಾರ, ಶುಕ್ರವಾರ |
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications