ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಮೇಲೆ ವಾಮಾಚಾರ!?
ತಮ್ಮ ಮೇಲೆ ವಾಮಾಚಾರ ಮಾಡಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸಂಶಯ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ, ಏಪ್ರಿಲ್ 20: ಉಪಚುನಾವಣೆಯ ಸಮಯದಲ್ಲಿ ಜನರಿಗೆ ದುಡ್ಡು ಹಂಚಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತಮ್ಮ ಮೇಲೆ ವಿರೋಧಿಗಳ್ಯಾರೋ ವಾಮಾಚಾರ ಮಾಡಿಸುತ್ತಿದ್ದಾರೆ ಎಂಬ ಅನುಮಾನ ಅವರಿಗೆ ಶುರುವಾಗಿದೆಯಂತೆ!
ಹೌದು, ಅದಕ್ಕೆ ಪೂರಕವೆಂಬಂತೆ ಅವರ ಕಾರಿನ ಬಳಿ, ಮನೆಯ ಸುತ್ತ ಮುತ್ತ ನಿಂಬೆ ಹಣ್ಣು, ಮೊಟ್ಟೆ, ಮೆಣಸಿನಕಾಯಿ, ಬೂದಗುಂಬಳಕಾಯಿ, ಅರಿಶಿಣ, ಕುಂಕುಮ ಮುಂತಾದ ವಸ್ತುಗಳು ಪದೇ ಪದೇ ಕಾಣಿಸುತ್ತಿವೆ![ಉಪಚುನಾವಣೆಯಲ್ಲಿ 'ಲಕ್ಷ್ಮಿ' ಕಟಾಕ್ಷ: ವಿವಾದದಲ್ಲಿ ಕಾಂಗ್ರೆಸ್ ನಾಯಕಿ!]

'ನಾನೇನು ವಾಮಾಚಾರ, ಮೂಢನಂಬಿಕೆಯನ್ನೆಲ್ಲ ನಂಬೋದಿಲ್ಲ. ಆದರೆ ಪದೇ ಪದೇ ಸಂಭವಿಸುತ್ತಿರುವ ಕೆಲವು ಅಹಿತಕರ ಘಟನೆಗಳಿಂದಾಗಿ ನಾನು ಮಾನಸಿಕವಾಗಿ ನೊಂದಿದ್ದೇನೆ. ಇವೆಲ್ಲ ಯಾರೋ ಬೇಕೆಂದೇ ಮಾಡುತ್ತಿರುವ ಕೃತ್ಯ' ಎಂದು ಬೆಳಗಾವಿಯಲ್ಲಿಂದು ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.












Click it and Unblock the Notifications