Get Updates
Get notified of breaking news, exclusive insights, and must-see stories!

ಬೆಳಗಾವಿ: ಚರ್ಚ್‌ಗೆ ನುಗ್ಗಿ, ತಲ್ವಾರ್‌ ತೋರಿಸಿ ಪಾದ್ರಿಗೆ ಬೆದರಿಕೆ

ಬೆಳಗಾವಿ, ಡಿಸೆಂಬರ್‌ 12: ತಲ್ವಾರ್‌ ಹಿಡಿದ ಅಪರಿಚಿತ ವ್ಯಕ್ತಿಯೊಬ್ಬ ಬೆಳಗಾವಿಯ ಬಾಕ್ಸೈಟ್‌ ರಸ್ತೆಯ ಸಂತ ಜೋಸೆಫ್‌ ವರ್ಕರ್‌ ಚರ್ಚ್‌ನ ಪಾದ್ರಿ ಫಾ. ಫ್ರಾನ್ಸಿನ್‌ ಡಿಸೋಜ ಅವರ ಮೇಲೆ ದಾಳಿ ನಡೆಸಿದ ಘಟನೆಯು ಶನಿವಾರ ಸಂಜೆ ಸಂಭವಿಸಿದೆ. ಚರ್ಚ್ ಒಳಗೆ ನುಗ್ಗಿದ ಈ ಅಪರಿಚಿತ ವ್ಯಕ್ತಿ ಪಾದ್ರಿ ಮೇಲೆ ದಾಳಿ ನಡೆಸಿದ್ದಾನೆ. ಆದರೆ ಪಾದ್ರಿಗೆ ಯಾವುದೇ ಗಾಯಗಳು ಆಗದೆ, ಪಾರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮೂಲಗಳ ಪ್ರಕಾರ, ತಲ್ವಾರ್‌ ಅನ್ನು ಹಿಡಿದ ವ್ಯಕ್ತಿಯು ಶನಿವಾರ ಸಂಜೆ ಸುಮಾರು 3:15 ರ ವೇಳೆಗೆ ಚರ್ಚಿನ ಗೋಡೆಯನ್ನು ಹಾರಿ ಒಳಗೆ ಬಂದಿದ್ದಾನೆ. ಮೊದಲ ಮಹಡಿಗೆ ಬಂದ ಈ ಅಪರಿಚಿತ ವ್ಯಕ್ತಿಯು ಕೋಣೆಯಲ್ಲಿ ಅಡಗಿ ಕೂತಿದ್ದನು. ಬಳಿಕ ಫಾದರ್‌ ಫ್ರಾನ್ಸಿನ್‌ ಮೇಲೆ ಹಲ್ಲೆ ಮಾಡುವ ಯತ್ನವನ್ನು ಮಾಡಿದ್ದಾನೆ. ಪಾದ್ರಿ ಫ್ರಾನ್ಸಿನ್‌ ಡಿಸೋಜ ಈ ದಾಳಿಯಿಂದ ತಪ್ಪಿಸಿಕೊಂಡಿದ್ದು, ಆ ಕೂಡಲೇ ಈ ವ್ಯಕ್ತಿಯು ಗೋಡೆಯನ್ನು ಹಾರಿ ಹೋಗಿ ತಪ್ಪಿಸಿಕೊಂಡಿದ್ದಾನೆ.

ಇನ್ನು ಈ ವ್ಯಕ್ತಿಯು ಬೆಳಗಾವಿಯ ಬಾಕ್ಸೈಟ್‌ ರಸ್ತೆಯ ಸಂತ ಜೋಸೆಫ್‌ ವರ್ಕರ್‌ ಚರ್ಚ್‌ನ ಪಾದ್ರಿ ಫಾ. ಫ್ರಾನ್ಸಿನ್‌ ಡಿಸೋಜ ಅವರಿಗೆ ಜೀವ ಬೆದರಿಕೆಯನ್ನು ಕೂಡಾ ಹಾಕಿದ್ದಾನೆ ಎಂದು ವರದಿಯು ಉಲ್ಲೇಖ ಮಾಡಿದೆ. ಸ್ಥಳೀಯರು ಆಗಮಿಸುತ್ತಿದ್ದಂತೆ ಅಲ್ಲಿನ ಗೋಡೆಯನ್ನು ಹಾರಿ ಆರೋಪಿ ಪರಾರಿಯಾಗಿದ್ದಾನೆ.

Man Armed With Machete Enters Karnataka Church, Chases Priest

ಈ ವ್ಯಕ್ತಿಯು ಕೌಂಪೌಂಡ್‌ ಗೋಡೆಯನ್ನು ಹಾರಿ ಬಂದು ಕೋಣೆಯಲ್ಲಿ ಪಾದ್ರಿಗೆ ದಾಳಿ ಮಾಡಿದಾಗ ದಾಳಿಯಿಂದ ತಪ್ಪಿಸಿಕೊಂಡ ಪಾದ್ರಿ ಮೊದಲ ಮಹಡಿಯಿಂದ ಕೂಡಲೇ ಕೆಳಕ್ಕೆ ಇಳಿದಿದ್ದಾರೆ. ಈ ಬೆನ್ನಲ್ಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ವ್ಯಕ್ತಿಯೊಬ್ಬ ತಲ್ವಾರ್‌ ಹಿಡಿದು ಚರ್ಚ್‌ಗೆ ನುಗ್ಗಿದ ದೃಶ್ಯ ಸೆರೆ

ಈ ನಡುವೆ ಈ ವ್ಯಕ್ತಿಯು ಚರ್ಚ್ ಗೋಡೆ ಹಾರಿ ಚರ್ಚ್‌ಗೆ ನುಗ್ಗಿದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯದಲ್ಲಿ ತಲ್ವಾರ್‍ ಹಿಡಿದಿರುವ ವ್ಯಕ್ತಿಯು ಚರ್ಚ್‌ಗೆ ನುಗ್ಗಿ ಪಾದ್ರಿ ಫಾ. ಫ್ರಾನ್ಸಿನ್‌ ಡಿಸೋಜರನ್ನು ಹಿಂಬಾಳಿಸಿಕೊಂಡು ಹೋಗುವುದು ಕಂಡು ಬಂದಿದೆ. ಇನ್ನು ಈ ತಲ್ವಾರ್‌ ಹಿಡಿದ ಅಪರಿಚಿತ ವ್ಯಕ್ತಿಯನ್ನು ನೋಡಿ ಪಾದ್ರಿ ಅಲ್ಲಿಂದ ತಪ್ಪಿಸಿಕೊಂಡಿದ್ದು ಕೂಡಾ ಕಂಡು ಬಂದಿದೆ. ಪಾದ್ರಿಯನ್ನು ಹಿಂಬಾಳಿಸಿದ ಈ ಅಪರಿಚಿತ ವ್ಯಕ್ತಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನು ಈ ದೃಶ್ಯದಲ್ಲಿ ಈ ವ್ಯಕ್ತಿಯು ವೈರ್‌ ಅನ್ನು ಹಿಡಿದಿರುವುದು ಕೂಡಾ ಕಂಡು ಬಂದಿದೆ. ಆದರೆ ಈತ ಯಾಕಾಗಿ ವೈರ್‌ ಹಿಡಿದಿದ್ದಾನೆ ಎಂಬುವುದು ಈವರೆಗೂ ಖಚಿತವಾಗಿಲ್ಲ.

ಇನ್ನು ಈ ಆರೋಪಿಯು ಚರ್ಚ್‌ಗೆ ಹೊಂದಿಕೊಂಡೇ ಇರುವ ಮನೆಯಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ಆಗಮಿಸರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಸಿಸಿ ಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದಿದ್ದಾರೆ.

"ನಾವು ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ, ಅಗತ್ಯ ಭದ್ರತೆಯನ್ನು ಈಗ ಒದಗಿಸಲಾಗಿದೆ," ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಆರ್ಚ್‌ಬಿಷಪ್‌ ಕಚೇರಿಯ ವಕ್ತಾರ ಜೆ ಎ ಕಾಂತರಾಜ್‌, "ಇದು ಅತ್ಯಂತ ಅಪಾಯಕಾರಿ ಹಾಗೂ ಆಘಾತಕಾರಿ ಘಟನೆ ಆಗಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಚಳಿಗಾಲದ ಅಧಿವೇಶನಕ್ಕೂ ಮುನ್ನ ನಡೆದ ಘಟನೆ

ಸೋಮವಾರದಿಂದ ಚಳಿಗಾಲ ಅಧಿವೇಶನವು ಬೆಳಗಾವಿಯಲ್ಲಿ ನಡೆಯಲಿದೆ. ಈ ನಡುವೆ ಈ ಘಟನೆಯು ನಡೆದಿದೆ, ಈ ಅಧಿವೇಶನದಲ್ಲಿ ಧಾರ್ಮಿಕ ಮತಾಂತರ ವಿರೋಧಿ ಮಸೂದೆಯು ಮಂಡನೆ ಆಗುವ ಸಾಧ್ಯತೆ ಇದೆ. ಈ ಮಸೂದೆಯನ್ನು ವಿರೋಧ ಪಕ್ಷಗಳು ಹಾಗೂ ಕ್ರೈಸ್ತ ಸಂಘಟನೆಗಳು ವಿರೋಧ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+