ಬೆಳಗಾವಿ : ಅರಣ್ಯ ಸಚಿವರ ಮೇಲೆ ಹೆಜ್ಜೇನು ದಾಳಿ
Recommended Video

ಬೆಳಗಾವಿ, ನವೆಂಬರ್ 24 : ವೇದಿಕೆ ಮೇಲೆ ಕೂತು ರಾಜ್ಯದ ಅರಣ್ಯಗಳ ಬಗ್ಗೆ ಪುಂಖಾನು ಪುಂಖಾನವಾಗಿ ಮಾತನಾಡಲು ಸಜ್ಜಾಗಿದ್ದ ಅರಣ್ಯ ಸಚಿವ ರಮಾನಾಥ ರೈ ಮೇಲೆ ಜೇನು ಹುಳುಗಳು ಸಾಮೂಹಿಕವಾಗಿ ದಾಳಿ ನಡೆಸಿ ಸಚಿವರ ಮುಸುಡಿಗೆ ಮುತ್ತಿಕ್ಕಿ ಅವರ ಮುಖಾರವಿಂದ ಇನ್ನಷ್ಟು 'ಅರಳುವಂತೆ' ಮಾಡಿವೆ.
ಜಿಲ್ಲೆಯಲ್ಲಿ ವಿಟಿಯು ಕಾಲೇಜಿನ ಬಳಿಯ ನೂತನ ಉದ್ಯಾನವನ ಉದ್ಘಾಟನಾ ಸಮಾರಂಭಕ್ಕೆ ಹೋಗಿ ವೇದಿಕೆ ಏರಿ ಕೂತಿದ್ದ ಅರಣ್ಯ ಸಚಿವರಿಗೆ ಜೇನು ಹುಳುಗಳು ಕಚ್ಚಿ ಸಚಿವರು ಸ್ಥಳದಿಂದಲೇ ಪೇರಿ ಕೀಳುವಂತೆ ಮಾಡಿವೆ.

ಸಚಿವರಗೆ ಮಾತ್ರವಲ್ಲದೆ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಕಷ್ಟು ಅಧಿಕಾರಿಗಳು, ಸಿಬ್ಬಂದಿಗಳು ಸಹ ಜೇನು ದಾಳಿಯಿಂದ ಮೂಖ ಊದಿಸಿಕೊಂಡು ಹನುಂತನ ಸಹೋದದರಂತಾಗಿದ್ದಾರೆ.
ದಾಳಿ ನಡೆದ ಕೂಡಲೇ ಅರಣ್ಯ ಸಚಿವರನ್ನು ರಕ್ಷಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಸಚಿವರ ಸುತ್ತಲೂ ಮಾನವ ಕೋಟೆ ಕಟ್ಟಿದರೂ ಸಹ, ಕೋಟೆ ಬೇಧಿಸಿ ಬಂದ ಕೆಲವು ಜೇನು ಹುಳುಗಳು ಸಚಿವರಿಗೆ ಕುಟುಕಿ ಹೋಗಿವೆ.
ಅರಣ್ಯ ಸಚಿವರು ಸರಿಯಾಗಿ ಜವಾಬ್ದಾರಿ ನಿರ್ವಹಿಸದೆ ಅರಣ್ಯ ಖಾಲಿಯಾಗುತ್ತಾ ಅಳಿಯುತ್ತಿರುವ ಕೀಟ ಪ್ರಭೇದಗಳ ಪ್ರತಿನಿಧಿಗಳಾಗಿ ಸಚಿವರಿಗೆ ಕುಟುಕುವ ಮೂಲಕ ತಮ್ಮ ಪ್ರತಿಭಟನೆಯನ್ನು ಜೇನು ನೊಣಗಳು ದಾಖಲಿಸಿವೆಯೇ? ಅಥವಾ ಪರಿಸರದ ಮಕ್ಕಳ ಪ್ರತಿನಿಧಿ ಕರ್ವಾಲೊದ ಮಂದಣ್ಣ, ತನ್ನ ಪ್ರೀತಿಯ ಕಾಡಿನ ಮೇಲಾಗುತ್ತಿರುವ ಅತ್ಯಾಚಾರವನ್ನು ಪ್ರತಿಭಟಿಸುವ ಸಲುವಾಗೆ ಸಮಾರಂಭಕ್ಕೆ ಬಂದು ಡ್ರಮ್ ಬಾರಿಸಿ ಜೇನು ನೊಣಗಳಿಗೆ ಪ್ರಚೋದನೆ ನೀಡಿದನೆ?.
ಜೇನು ನೊಣಗಳು ಯಾವ ಕಾರಣಕ್ಕಾಗಿ ಸಚಿವರಿಗೆ ಕಚ್ಚದವೊ ಕಾರಣ ತಿಳಿಯದೆ ಇದ್ದರೂ, ಸಾಹಿತ್ಯಿಕ ಪರಿಭಾಷೆಯಲ್ಲಿ ಘಟನೆಯನ್ನು ನೋಡಿದಾಗ ಮೇಲಿನ ರೀತಿಯ ಹಲವಾರು ಅರ್ಥಗಳು ಹೊಳೆಯದೇ ಇರವು.
ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ವರ್ಷದಿಂದ ವರ್ಷಕ್ಕೆ ಖಾಲಿಯಾಗುತ್ತಿರುವುದು ಕಾಡನ್ನೇ ನಂಬಿಕೊಂಡ ಜೀವಿಗಳು, ಕ್ರಿಮಿಗಳು, ಮನುಷ್ಯರಿಗೆ ದಿಕ್ಕು ದೋಚದಂತಾಗಿರುವುದು ಸತ್ಯ. ಇಂದು (ನವೆಂಬರ್ 24) ನಡೆದ ಘಟನೆ ಪರಿಸರದ ಪ್ರತಿನಿಧಿಗಳ ಪ್ರತಿಭಟನೆ ಎಂದು ಸಚಿವರು ಭಾವಿಸಿ ಅರಣ್ಯ ರಕ್ಷಣೆಗೆ ಮುಂದಾಗುತ್ತಾರೆನೋ ಎಂಬ ಆಸೆ ಪರಿಸರ ಪ್ರಿಯರದ್ದು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications