Get Updates
Get notified of breaking news, exclusive insights, and must-see stories!

Belagavi: ವಿರೋಧದ ನಡುವೆ ಜಗದೀಶ್ ಶೆಟ್ಟರ್‌ಗೆ ಟಿಕೆಟ್: ಹೆಬ್ಬಾಳ್ಕರ್‌ಗೆ ಸುಗಮವಾಯ್ತಾ ಗೆಲುವಿನ ಹಾದಿ?

ಬೆಂಗಳೂರು, ಮಾರ್ಚ್ 25: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ರಣಕಣ ರಂಗೇರುತ್ತಿದೆ. ಪ್ರಭಾವಿ ನಾಯಕರು ಇರುವ ಗಡಿಜಿಲ್ಲೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ. ಬಿಜೆಪಿ ಟಿಕೆಟ್ ಪಡೆದ ಜಗದೀಶ್ ಶೆಟ್ಟರ್ ಅವರಿಗೆ ಸ್ಥಳೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಗೆಲುವಿನ ಹಾದಿ ಸುಗಮವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಟಿಕೆಟ್ ಏನೋ ಸಿಕ್ಕಿದೆ. ಆದರೆ ಕ್ಷೇತ್ರದಲ್ಲಿನ ಬೆಂಬಲ, ಸ್ಥಳೀಯ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಾಂಗ್ರೆಸ್‌ಗೆ ದಾರಿ ಇನ್ನಷ್ಟು ಸರಳವಾಗಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಪ್ರತಿಸ್ಪರ್ಧಿಯಾಗಿ ಬಿಜೆಪಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಣಕ್ಕಿಳಿದಿರುವುದು.

BJP Jagadish Shettar Face Victory Challenge in Belagavi Lok Sabha not worry for Congress

ವಿಶ್ಲೇಷಕರ ಪ್ರಕಾರ, ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಸ್ಪರ್ಧೆಗೆ ಸ್ವಪಕ್ಷದಿಂದಲೇ ವಿರೋಧ ಕೇಳಿ ಬಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಮಿಸ್ ಆಗಿದ್ದಕ್ಕೆ ಶೆಟ್ಟರ್ ಮನನೊಂದು ಕಾಂಗ್ರೆಸ್ ಸೇರಿಕೊಂಡರು. ಬಳಿಕ ಲೋಕಸಭಾ ಚುನಾವಣೆಯ ಹಿತದೃಷ್ಟಿಯಿಂದ ಕೆಲವೇ ತಿಂಗಳಲ್ಲಿ ಮತ್ತೆ ಬಿಜೆಪಿಗೆ ಮರಳಿದರು.

ಪಕ್ಷಾಂತರದಿಂದ ಹೆಸರು ಹಾಳು

ಬಿಜೆಪಿಗೆ ಬಂದ ಬಳಿಕ ಧಾರವಾಡ ಕ್ಷೇತ್ರದ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಇದರೊಂದಿಗೆ ಹಾವೇರಿ ಕ್ಷೇತ್ರ ಟಿಕೆಟ್ ಕೊಟ್ಟರು ಸ್ಪರ್ಧಿಸುವೆ ಎಂದು ಇಂಗಿತ ಹೊರ ಹಾಕಿದ್ದರು. ಹೀಗೆ ಅವರ ಪಕ್ಷಾಂತರದ ನಿರ್ಧಾರ, ನಿಲುವುಗಳಿಂದ ಹೆಸರು ಹಾಳು ಮಾಡಿಕೊಂಡರು ಎನ್ನಲಾಗಿದೆ.

ಪಕ್ಷ ಸಿದ್ಧಾಂತ ಮರೆತು ಪಕ್ಷಾಂತರ ಮಾಡಿದ್ದ ಜಗದೀಶ್ ಶೆಟ್ಟರ್ ಅವರು ಧಾರವಾಡ ಕ್ಷೇತ್ರದ ಟಿಕೆಟ್ ಕೇಳುವ ಮೂಲಕ ಒಂದಷ್ಟು ವರ್ಗದ ಜನರ ಕೆಂಗಣ್ಣಿಗೆ ಗುರಿಯಾದರು. ಅಲ್ಲದೇ ಅವರಿಗೆ ಲಿಂಗಾಯತ ನಾಯಕ ಎಂಬ ಹೆಸರು ಇದೆ ಹೊರತು ಈ ಭಾಗದಲ್ಲಿ ಅಷ್ಟಾಗಿ ವರ್ಚಸ್ಸು ಇಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಸ್ಥಳಿಯರ ವಿರೋಧ, ಗೋಬ್ಯಾಕ್ ಅಭಿಯಾನ ಮುಳ್ಳು

ಬೆಳಗಾವಿ ಭಾಗದ ನಾಯಕರ ಜೊತೆಗೆ ಅಷ್ಟಾಗಿ ಒಡನಾಟ ಇಟ್ಟುಕೊಳ್ಳದೇ ಹುಬ್ಬಳ್ಳಿಗೆ ಸಿಮೀತವಾಗಿದ್ದಾರೆ ಎಂಬ ಮಾತು ಇದೆ. ಅವರು ಬೆಳಗಾವಿಯಲ್ಲಿ ಸ್ಪರ್ಧಿಸುತ್ತಾರೆ ಎನ್ನುತ್ತಿದ್ದಂತೆ ಪ್ರಭಾಕರ್ ಕೋರೆ, ಈರಣ್ಣ ಕಡಾಡಿಯಂತೆ ಘಟಾನುಘಟಿ ನಾಯಕರು, ಕಾರ್ಯಕರ್ತರು ಸಭೆ ನಡೆಸಿದರು. ಗೋಬ್ಯಾಕ್ ಅಭಿಯಾನ ನಡೆಸಿದರು.

BJP Jagadish Shettar Face Victory Challenge in Belagavi Lok Sabha not worry for Congress

ಹಾಲಿ ಸಚಿವರ ಪ್ರಭಾವ

ಇತ್ತ ಬೆಳಗಾವಿ ಭಾಗದ ಪ್ರಭಾವಿಗಳಲ್ಲಿ ಒಬ್ಬರಾಗಿರುವ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರನ ಪರ ಅಪಾರ ಒಲವು ಇದೆ. ಹಾಲಿ ಸಚಿವರ ಪರ ಕಾಣದ ಕೈಗಳು ಕೆಲಸ ಮಾಡಬಹುದು ಎನ್ನಲಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ವಿರೋಧಿಸಿ ಬಿಜೆಪಿ ನಾಯಕರು ಬಹಿರಂಗವಾಗಿಯೇ ಕಾಂಗ್ರೆಸ್ ಪರ ಕೆಲಸ ಮಾಡಬಹುದು. ಇದು ಶೆಟ್ಟರ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಬಹುದು.

ಏಕೆಂದರೆ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದನ್ನು ನೋಡಿದ್ದೇವೆ. ಅದೇ ರೀತಿ ಬೆಳಗಾವಿಯಲ್ಲಿ ಅದೇ ರೀತಿ ನಡೆಯಲೂಬಹುದು. ಹಾಗಾದಲ್ಲಿ ಇದು ಕಾಂಗ್ರೆಸ್‌ಗೆ ವರದಾನವಾಲಿದೆ.

ಗ್ಯಾರೆಂಟಿಗಳು ಸಚಿವೆ 'ಕೈ' ಹಿಡಿಯುವ ನಿರೀಕ್ಷೆ

ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸಬೇಕು ಎನ್ನುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ತಮ್ಮ ಪಕ್ಷದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ನಿಂತರೂ ಅದು ಅಷ್ಟಾಗಿ ಉಪಯೋಗಕ್ಕೆ ಬಾರದು ಎನ್ನಲಾಗುತ್ತಿದೆ. ಇತ್ತ ಮಹಿಳೆಯರಿಗೆ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳಾ ಸಚಿವೆಯಾಗಿ ಕೆಲವು ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸಕ್ರಿಯವಾಗಿದ್ದರು. ಇದು ಚುನಾವಣೆಯಲ್ಲಿ ಅವರನ್ನು ಕೈ ಹಿಡಿಯುವ ನಿರೀಕ್ಷೆಗಳು ಇವೆ.

ಹೀಗಿ ಹಲವು ಕಾರಣಗಳಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಗೆಲುವು ಸುಲಭವಲ್ಲ, ಕಷ್ಟ ಸಾಧ್ಯ ಎನ್ನುವಂತಾಗಿದೆ. ಲಿಂಗಾಯತ ನಾಯಕರಾದರೂ ಶೆಟ್ಟರ್ ವಿರುದ್ಧದ ನಿಲುವು, ವಿರೋಧಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಗೆಲುವಿನ ದಾರಿ ಸುಗಮವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+