ನೇಪಾಳ ಗಡಿಯಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಸೆರೆಸಿಕ್ಕ
ನವದೆಹಲಿ,
ಆಗಸ್ಟ್ 17: ಭಾರತಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ 20 ಮೋಸ್ಟ್ ವಾಂಟೆಡ್ ಉಗ್ರರ ಪೈಕಿ ಒಬ್ಬ ಸೆರೆಸಿಕಿದ್ದಾನೆ. ಅಲ್ ಖೈದಾ ಸಂಘಟನೆಯ ಭಯೋತ್ಪಾದಕ, ಭೂಹತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಅಬ್ದುಲ್ ಕರೀಂ ತುಂಡಾನನ್ನು ದೆಹಲಿಯ ವಿಶೇಷ ಪೊಲೀಸ್ ದಳ ಭಾರತ-ನೇಪಾಳ ಗಡಿಯಲ್ಲಿ ಶುಕ್ರವಾರ ರಾತ್ರಿ ಬಂಧಿಸಿದೆ. ಬಾಂಬ್ ಸ್ಫೋಟಕಗಳ ತಯಾರಿಕೆಯಲ್ಲಿ ಇವನು ನಿಸ್ಸೀಮ ಎನ್ನಲಾಗಿದೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ಮುಂಬೈ ದಾಳಿ ಸಂಬಂಧ ಪಾಕಿಸ್ತಾನಕ್ಕೆ ಭಾರತ ಸಲ್ಲಿಸಿದ್ದ ಪಟ್ಟಿಯಲ್ಲಿ ಉಗ್ರ ಅಬ್ದುಲ್ ಕರೀಂನದ್ದು 15ನೆಯ ಹೆಸರಾಗಿತ್ತು. ಅದಕ್ಕೂ ಮುನ್ನ 1990ರ ದಶಕದಲ್ಲಿ ಮುಂಬೈ, ದೆಹಲಿ ಮತ್ತು ಹೈದರಾಬಾದ್ ನಗರಗಳಲ್ಲಿ ನಡೆದಿದ್ದ 40ಕ್ಕೂ ಹೆಚ್ಚು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಅಬ್ದುಲ್ ಕರೀಂ ಭಾಗಿಯಾಗಿದ್ದಾನೆ ಎಂದು ಭಾರತ ಆರೋಪಿಸಿದೆ.
ಜೈಶ್
ಎ ಮೊಹಮದ್ ಮತ್ತು ಮರ್ಕಜ್ ಅಲ್ ದವಾ ಜಮಾತ್ ಉದ್ ದವಾ ಮತ್ತು ಲಷ್ಕರೆ ತಯ್ಯಬಾ ಜತೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ. ಅಬ್ದುಲ್ ಕರೀಂ ತುಂಡಾ ಮೂಲತಃ ಉತ್ತರಪ್ರದೇಶದವನು. 1980ರಲ್ಲಿ ಪಾಖಿಸ್ತಾನದ ಐಎಸ್ಐ ಸಂಪರ್ಕಕ್ಕೆ ಬಂದು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ.











Click it and Unblock the Notifications