ಖತಾರಿಂದ ಬಂದ ವಿವಾಹಿತ ಗುಂಡಿಟ್ಕೊಂಡು ಆತ್ಮಹತ್ಯೆ

ತಾವು ವಾಸವಾಗಿದ್ದ ಅಪಾರ್ಟ್ ಮೆಂಟಿನಲ್ಲೇ ಈ ಕೃತ್ಯವೆಸಗಿದ್ದು, ಘಟನೆಯ ವೇಳೆ ಸಂತೋಷ್ ಅವರ ಪತ್ನಿ ರೇಖಾ ಮತ್ತು ಇಬ್ಬರು ಪುತ್ರರು ಪಕ್ಕದ ಕೋಣೆಯಲ್ಲಿದ್ದರು ಎನ್ನಲಾಗಿದೆ. ಇವರು ಖತಾರ್ ನಲ್ಲಿ ಅನೇಕ ವರ್ಷಗಳ ಕಾಲ ಉದ್ಯೋಗದಲ್ಲಿದ್ದು, 2 ವರ್ಷಗಳ ಹಿಂದೆ ಉಡುಪಿಗೆ ವಾಪಸಾಗಿ, ಇಲ್ಲೇ ಪತ್ನಿ ಮಕ್ಕಳೊಂದಿಗೆ ನೆಲೆಸಿದ್ದರು.
ಸಂತೋಷ್ ಉಡುಪಿಯಲ್ಲಿ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಅವರ ದೇಹದ ಸಮೀಪ ರಿವಾಲ್ವರ್ ಮತ್ತು ಟೇಬಲ್ ಮೇಲೆ ಲ್ಯಾಪ್ ಟಾಪ್, ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಆತ್ಮಹತ್ಯೆಗೆ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕೌಟುಂಬಿಕ ಕಲಹವೋ ಅಥವಾ ಹಣಕಾಸು ಬಿಕ್ಕಟ್ಟು ಅವರನ್ನು ಸಾವಿನ ಮನೆಗೆ ದೂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಂತೋಷ್ ತನ್ನ ಸಾವಿನ ಮುನ್ನ ಪತ್ನಿ ರೇಖಾರ ಸೋದರನಿಗೆ ಒಂದೇ ಸಮನೆ ಎಸ್ಎಂಎಸ್ ಸಮದೇಶಗಳನ್ನು ರವಾನಿಸಿದ್ದಾರೆ ಎಂದು ಎಸ್ಐ ಲಿಂಗರಾಜು ತಿಳಿಸಿದ್ದಾರೆ. ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications