ವಿಟಿಯು ಫಲಿತಾಂಶ ಈಗ ಎಸ್ಎಂಎಸ್ ನಲ್ಲಿ ಲಭ್ಯ
ಬೆಂಗಳೂರು, ಏ.2: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ತನ್ನ ಅಪಾರ ವಿದ್ಯಾರ್ಥಿ ಸಮೂಹಕ್ಕೆ ಶುಭ ಸುದ್ದಿ ನೀಡಿದೆ. ಈ ಬಾರಿ ಪರೀಕ್ಷೆ ಫಲಿತಾಂಶವನ್ನು ಎಸ್ ಎಂಎಸ್ ಮೂಲಕ ಸುಲಭವಾಗಿ ಪಡೆಯಬಹುದು ಎಂದು ವಿಟಿಯು ಪ್ರಕಟಿಸಿದೆ.
ಬಿಇ, ಎಂಬಿಎ, ಎಂ.ಟೆಕ್ ಹಾಗೂ ಎಂಸಿಎ ಕೋರ್ಸ್ ಗಳ ಪರೀಕ್ಷಾ ಫಲಿತಾಂಶ ಇನ್ಮುಂದೆ ಎಸ್ಎಂಎಸ್ ನಲ್ಲಿ ಸಿಗಲಿದೆ. ಫಲಿತಾಂಶ ನಕಲು ಮಾಡಿ ಇಮೇಲ್ ವಿಳಾಸಕ್ಕೆ ಕಳಿಸಬಹುದಾಗಿದೆ.
ಎಸ್ಸೆಂಎಸ್ ಮೂಲಕ ರಿಸಲ್ಟ್ ನೋಡುವುದು ಸುಲಭ ವಿಧಾನವಾಗಿದೆ. USN ಎಂದು ಕೀ ಮಾಡಿ ಸ್ಪೇಸ್ ಬಿಟ್ಟು ನಿಮ್ಮ ಇ ಮೇಲ್ ವಿಳಾಸ ಹಾಕಿ 5424204ಗೆ ಎಸ್ ಎಂಎಸ್ ಕಳಿಸಿ. ಇದೇ ಮಾದರಿಯಲ್ಲಿ ರೀ ವ್ಯಾಲ್ಯೂಯೇಷನ್ ಪೇಪರ್ ಫಲಿತಾಂಶ ಕೂಡಾ ಪಡೆಯಬಹುದು.

ಉದಾ: RESULT USN youEmailID to 5424204.
REVAL 4SH12CS007 [email protected] ಎಂದು ಕೀ ಮಾಡಿ 5424204ಗೆ ಕಳಿಸಿ ಉತ್ತರ ಪಡೆಯಬಹುದು. ಇಮೇಲ್ ವಿಳಾಸ ನೀಡದಿದ್ದರೆ ಎಸ್ ಎಂಎಸ್ ನಲ್ಲಿ ಮಾತ್ರ ಫಲಿತಾಂಶ ನೋಡಬಹುದಾಗಿದೆ.
ಫಲಿತಾಂಶ ಪಠ್ಯ ಕ್ರಮ ಸಂಖ್ಯೆ, external marks, internal marks ಹಾಗೂ ಒಟ್ಟಾರೆ ಅಂಕಗಳನ್ನು ತೋರಿಸಲಿದೆ. ವಿದ್ಯಾರ್ಥಿಗಳು ಬಳಸುವ ಮೊಬೈಲ್ ಆಪರೇಟರ್ ಅನುಗುಣವಾಗಿ ಪ್ರತಿ ಎಸ್ ಎಂಎಸ್ ಗೆ 1 ರಿಂದ 3 ರು ಕಟ್ ಆಗಲಿದೆ.
ವಿದ್ಯಾರ್ಥಿಗಳಿಗೆ ತ್ವರಿತವಾಗಿ ಫಲಿತಾಂಶ ಅಂಗೈನಲ್ಲೇ ಲಭ್ಯವಾಗಲಿದೆ. ವಿಟಿಯು ವೆಬ್ ಸೈಟ್ ಸ್ಲೋ ಡೌನ್ ಎಂಬ ಕೊರಗು ನಿವಾರಣೆಯಾಗಲಿದೆ. ಯಾವುದೇ ಕ್ಷಣದಲ್ಲಾದರೂ ಫಲಿತಾಂಶ ಪಡೆಯಲು ಸಾಧ್ಯ. ಬಿಇ ಅಲ್ಲದೆ ಎಂಬಿಎ ಸೇರಿದಂತೆ ಇತರೆ ಕೋರ್ಸ್ ಗಳ ಫಲಿತಾಂಶ ಕೂಡಾ ಸಿಗಲಿದೆ ಎಂದು ವಿಟಿಯು ಉಪ ಕುಲಪತಿ ಎಚ್ ಮಹೇಶಪ್ಪ ಹೇಳಿದ್ದಾರೆ.
ಸೂಚನೆ: ನೀವು ಕಳುಹಿಸುವ ಎಸ್ಸೆಂಎಸ್ 160 ಅಕ್ಷರಗಳ ಮಿತಿ ಮೀರದಿರಲಿ. ಆದಷ್ಟು ಚುಟುಕಾಗಿ ಎಸ್ ಎಂಎಸ್ ಕಳಿಸಿ. ವಿಟಿಯು 12ನೇ ಕಾನ್ವೋಕೇಷನ್ ಏ.5 ರಂದು ಬೆಳಗಾವಿಯಲ್ಲಿ ನಡೆಯಲಿದ್ದು,ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಉನ್ನತ ಶಿಕ್ಷಣ ಸಚಿವ ಸಿ.ಟಿ ರವಿ, ಅಣುಶಕ್ತಿ ಕಮಿಷನ್ ಮಾಜಿ ಮುಖ್ಯಸ್ಥ ಎಂ.ಆರ್ ಶ್ರೀನಿವಾಸನ್ ಅವರು ಪಾಲ್ಗೊಳ್ಳಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. 48460 ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತದೆ. ಪ್ರತಿ ವರ್ಷ 3.25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಟಿಯು ಪ್ರಕಟಿಸಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications