ಗಾಯಕಿ ರಮ್ಯಾ ವಸಿಷ್ಠ ವಿರುದ್ಧ ಎಫ್ಐಆರ್ ದಾಖಲು

ಆದರೆ, ಇದು ಮೇಲ್ನೋಟಕ್ಕೆ ಬೇರೆ ಪ್ರಕರಣದಂತೆ ಕಂಡು ಬಂದರೂ ಈ ಕೇಸಿಗೂ ಕೃಷ್ಣನ್ ಪುರುಷತ್ವ ಕೇಸಿಗೂ ಲಿಂಕ್ ಇದೆ. ರಮ್ಯಾ ಹಾಗೂ ಅವರ ಗೆಳತಿ ಉಷಾ ವಿರುದ್ಧ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದೂರು ದಾಖಲಾಗಿದೆ.
ಏನಿದು ದೂರು ?: ರಮ್ಯಾ ಹಾಗೂ ಅವರ ಗೆಳತಿ ಉಷಾ ಅವರು ನಮ್ಮ ಮನೆಗೆ ನುಗ್ಗಿ ದಾಂಧಲೆ ನಡೆಸಿದರು. ಕೊಲೆ ಬೆದರಿಕೆ ಒಡ್ಡಿದ್ದಾರೆ. ಮನೆಯಲ್ಲಿದ್ದ ನಗ ನಾಣ್ಯ ದೋಚಿದರು. ಬೆದರಿಕೆ ಹಾಕಿ ನನ್ನನ್ನು ಹಾಗೂ ನನ್ನ ಪತ್ನಿಯನ್ನು ರೂಮಿನಲ್ಲಿ ಕೂಡಿ ಹಾಕಿದರು. ಖಾಲಿ ಪೇಪರ್ ಮೇಲೆ ಸಹಿ ಹಾಕುವಂತೆ ಒತ್ತಾಯಿಸಿದರು ಒಪ್ಪದಿದ್ದಾಗ, ಅತ್ಯಾಚಾರ ಯತ್ನ ದೂರು ದಾಖಲಿಸುವ ಬೆದರಿಕೆ ಒಡ್ಡಿದರು. ಸುಮಾರು 3 ಲಕ್ಷ ರು ನಗದು ದೋಚಿಕೊಂಡು ಹೋಗಿದ್ದಾರೆ ಎಂದು ಪ್ರಹ್ಲಾದ್ ಶೆಟ್ಟಿ ದೂರಿನಲ್ಲಿ ಹೇಳಿದ್ದಾರೆ.
ರಾಜೇಶ್ ಅವರಿಗೆ ಪುರುಷತ್ವವಿಲ್ಲ ಎಂದು ನೀವು ವಿವಾಹಕ್ಕೆ ಮೊದಲೇ ಹೇಳಿಲ್ಲ. ಈ ಹಿಂದೆಯೇ ನೀವು ಈ ಬಗ್ಗೆ ನಮಗೆ ತಿಳಿಸಬೇಕಿತ್ತು. ಪುರುಷತ್ವದ ಬಗ್ಗೆ ಅಂದೇ ಹೇಳಿದ್ದರೆ ಇಂದು ನನ್ನ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಇದರ ತಪ್ಪಿಗೆ ನೀವು 10 ಲಕ್ಷ ನೀಡಬೇಕು ಎಂದು ರಮ್ಯಾ ವಸಿಷ್ಠ ಬೆದರಿಕೆ ಹಾಕಿದ್ದಾರೆ ಎಂದು ಪ್ರಹ್ಲಾದ್ ದೂರಿದ್ದಾರೆ.
ಕರಾವಳಿ ಮೂಲದ ಪ್ರಹ್ಲಾದ್ ಶೆಟ್ಟಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಪೊಲೀಸರು ಐಪಿಸಿ ಸೆಕ್ಷನ್ 161,134,448,341,504,342 ಹಾಗೂ 506 ಅನ್ವಯ ಎಫ್ ಐಆರ್ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ರಮ್ಯಾ ಅವರನ್ನು ಬಂಧಿಸುವ ಸಾಧ್ಯತೆಯಿರುವುದರಿಂದ ಆಕೆ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿತ್ತು.
ಪ್ರತ್ಯಕ್ಷವಾದ ರಮ್ಯಾ: ಕ್ರಿಮಿನಲ್ ದೂರು ದಾಖಲಾದ ಸುದ್ದಿ ಹೊರ ಬೀಳುತ್ತಿದ್ದಂತೆ ಸುವರ್ಣ ಸುದ್ದಿ ವಾಹಿನಿ ಸ್ಟುಡಿಯೋದಲ್ಲಿ ಪ್ರತ್ಯಕ್ಷವಾದ ರಮ್ಯಾ ಅವರು, ನಾನು ತಲೆ ಮರೆಸಿಕೊಂಡಿಲ್ಲ. ನಾನು ಪ್ರಹ್ಲಾದ್ ಶೆಟ್ಟಿ ಅವರಿಗೆ ಬೆದರಿಕೆ ಒಡ್ಡಿಲ್ಲ ಅವರ ಹಣ ದೋಚಿಲ್ಲ. ಬದಲಿಗೆ ಅವರೇ ಲಕ್ಷಾಂತರ ರು ವಂಚಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ರಮ್ಯಾ ವಸಿಷ್ಠ ಹಾಗೂ ರಾಜೇಶ್ ವಿವಾಹವಾಗುವುದನ್ನು ನಿಶ್ಚಯ ಮಾಡಿಕೊಂಡ ನಂತರ (2 ವರ್ಷದ ಹಿಂದೆ), ಮಂಜುನಾಥ ನಗರ ನಿವಾಸಿ ಹಾಗೂ ಧಾರ್ಮಿಕ ಸಂಯೋಜಕ ಪ್ರಹ್ಲಾದ್ ಶೆಟ್ಟಿ ಅವರ ಬಳಿ ಹೋಗಿದ್ದರು. ಶಾಸ್ತ್ರ ನೋಡಿ, ಹೋಮ ಮಾಡುವಂತೆ ಮನವಿ ಮಾಡಿದರು. ಅದರಂತೆ ಪ್ರಹ್ಲಾದ್ ಅವರು ತಮಗೆ ಪರಿಚಯವಿದ್ದ ಶೇಷಾದ್ರಿ ಅವರ ಬಳಿ ಕಳುಹಿಸಿದರು. ಶೇಷಾದ್ರಿ ಅವರು ರಾಯಚೂರು ಸಮೀಪದಲ್ಲಿರುವ ಧಾರ್ಮಿಕ ಕೈಂಕರ್ಯಕ್ಕೆಂದೇ ಮೀಸಲಿರುವ ದೇವಸ್ಥಾನವೊಂದರಲ್ಲಿ ಹೋಮ ಮಾಡಿದರು. ನಂತರ ರಮ್ಯಾ-ರಾಜೇಶ್ ಅವರ ವಿವಾಹ ಕೊಲ್ಲೂರಿನಲ್ಲಿ 2011ರಲ್ಲಿ ನೆರವೇರಿತ್ತು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications