ಮಂಗಳೂರು: ಛೇ, ಸಾವು ಹೀಗೂ ಬರುತ್ತದಾ?

Mangalore- son Dies after Coconut Tree Falls over as Father Climbs up
ಮಂಗಳೂರು, ಫೆ.25: ಛೇ! ಸಾವು ಯಾವ ರೂಪದಲ್ಲಾದರೂ ಬರಬಹುದು ಅನ್ನುವುದಕ್ಕೆ ಇದು ನಿದರ್ಶನ. ಆದರೆ ಅಪ್ಪನ ಎದುರೇ ಆಟವಾಡುತ್ತಿದ್ದ ಮಗು ಸಾವಿಗೀಡಾಗಿರುವುದು ನಿಜಕ್ಕೂ ಹೃದಯಕಲಕುವಂತಿದೆ.

ಕೊಣಾಜೆಯ ಕೈರಂಗಲಾ ಗ್ರಾಮದಲ್ಲಿ ಆನೆಗುಂಡಿ ಸಮೀಪ ಕೃಷಿಕ ಆನಂದ ಮೂಲ್ಯ ಅವರ ತೋಟದಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ಏನಾಯಿತೆಂದರೆ ಆನಂದ್ ತೋಟದಲ್ಲಿ ಹಳೆಯದಾದ ತೆಂಗಿನ ಮರವೊಂದಿತ್ತು. ಅದು ಪೂರ್ತಿ ಒಣಗಿಹೋಗಿತ್ತು.

ಆದರೆ ಆನಂದ್ ಆ ಮರಕ್ಕೆ ಕರಿ ಮೆಣಿಸಿನ ಬಳ್ಳಿಗಳನ್ನು ಹಬ್ಬಿಸಿದ್ದರು. ಸರಿ ನಿನ್ನೆ ಭಾನುವಾರ ಕರಿಮೆಣಸು ಕೀಳೋಣವೆಂದು ಒಣಕಲು ಮರಕ್ಕೆ ಏಣಿ ಹಾಕಿ ಹತ್ತಿದ್ದಾರೆ. ಆದರೆ ಭಾರಕ್ಕೆ ಆ ಮರ ಬಿದ್ದುಹೋಗಿದೆ. ಹಾಗೆ ಬಿದ್ದ ಮರವು ಕೆಳಗೆ ಆಟವಾಡುತ್ತಿದ್ದ ಆನಂದ್ ಅವರ ಆರು ವರ್ಷದ ಪುತ್ರ ವಿಷ್ಣುಪ್ರಸಾದ್ ಮೇಲೆ ಬಿದ್ದಿದೆ. ಮಗುವಿಗೆ ಆ ಹೊಡೆತ ತಾಳಲಾಗಿಲ್ಲ. ಅದು ತೀವ್ರವಾಗಿ ಗಾಯಗೊಂಡಿದೆ.

ತಕ್ಷಣ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆ ವೇಳೆಗಾಗಲೆ ಮಗುವಿನ ಪ್ರಾಣಪಕ್ಷಿ ಹಾರಿಹೋಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+