ಸಾಯಿಬಾಬಾ ದೇಗುಲ ಮೊದಲ ಟಾರ್ಗೆಟ್ ಆಗಿತ್ತು

ಆ ಎರಡೂ ಸಿಸಿಟಿವಿಗಳು ಈಗ ನಿರ್ಣಾಯಕವಾಗಿದ್ದು, ಪಾತಕ ಕೃತ್ಯದ ಹೀನಸುಳಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಹೈದರಾಬಾದ್ ಪೊಲೀಸರು ಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಸಿಸಿಟಿವಿಯಲ್ಲಿ ಸ್ಫೋಟದ ಕೆಲವೇ ಕ್ಷಣಗಳ ಮುನ್ನ ದಿಲ್ ಸುಖ್ ನಗರದಲ್ಲಿ ಸೈಕಲ್ ಬಾಂಬ್ ನಿಲ್ಲಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ದಾಖಲಾಗಿವೆ.
ಈ ಮಧ್ಯೆ, ದಿಲ್ ಸುಖ್ ನಗರದಲ್ಲಿರುವ ಶಿರಡಿ ಸಾಯಿ ಬಾಬಾ ದೇಗುಲ ಮೊದಲ ಭಯೋತ್ಪಾದಕರ ಮೂಲ ಟಾರ್ಗೆಟ್ ಆಗಿತ್ತು ಎಂಬ ಆತಂಕಕಾರಿ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಆದರೆ ಅಂತಿಮ ಘಳಿಗೆಯಲ್ಲಿ ಟಾರ್ಗೆಟ್ ಬದಲಾಯಿಸಲಾಗಿದೆ. 2002ರ ನವೆಂಬರಿನಲ್ಲಿ ಇದೇ ಶಿರಡಿ ಸಾಯಿ ಬಾಬಾ ದೇಗುಲದ ಬಳಿ ಚಿಕ್ಕ ಬಾಂಬ್ ದಾಳಿ ನಡೆದಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದರು. 22 ಮಂದಿ ಗಾಯಗೊಂಡಿದ್ದರು.
ಆದರೆ ಇಲ್ಲೊಂದು ಅನುಮಾನ ಕಾಡುತ್ತಿದೆ. ಪೊಲೀಸರು ಈಗ ಹೇಳುತ್ತಿರುವುದು ಉಗ್ರರು ಸಿಸಿಟಿವಿಯನ್ನು ಕಟ್ ಮಾಡಿದ್ದರು ಎಂದು. ಆದರೆ ಸಾಯಿ ಬಾಬಾ ದೇವಸ್ಥಾನದಲ್ಲಿ ಬಿಗಿ ಭದ್ರತೆಯಿದೆ ಎಂದು ಅಷ್ಟೊಂದು ಕ್ಷಿಪ್ರವಾಗಿ ಉಗ್ರರು ಪಕ್ಕದ ಸ್ಥಳಕ್ಕೆ ಬಂದು, ಅಲ್ಲಿ ಸಿಸಿಟಿವಿಗಳನ್ನು ಕಟ್ ಮಾಡಿ, ಬಾಂಬಿಟ್ಟು... ಏನೋ ಇದೆಲ್ಲ ಹೇಗಾಯಿತು ಎಂಬುದು ಅರ್ಥವಾಗುತ್ತಿಲ್ಲ.
ಅದೇನೇ ಇರಲಿ... ಉಗ್ರರು ಯಾಕೆ ಹೀಗೆ ಪ್ಲಾನ್ ಬದಲಿಸಿದ್ದರು ಅಂದರೆ ನಗರದ ಪೊಲೀಸ್ ಆಯುಕ್ತ ಅನುರಾಗ್ ಶರ್ಮಾ ಅವರು ಗುರುವಾರ ಸಂಜೆ ಇದೇ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ದಿಢೀರನೆ ಭೇಟಿ ನೀಡಿದ ವೇಳೆ ಬಂದೋಬಸ್ತ್ ವ್ಯಾಪಕವಾಗಿತ್ತು. ಇದರಿಂದ ಉಗ್ರರು ಕಂಗಾಲಾಗಿದ್ದರು. ಹಾಗಾಗಿ ಕೊನೆಕ್ಷಣದಲ್ಲಿ ಸ್ಫೋಟದ ಸ್ಥಳವನ್ನು ಬದಲಿಸಿದ್ದರು.
ಇಲ್ಲಾಂದಿದ್ರೆ ಸದಾ ಭಕ್ತಾಧಿಗಳಿಂದ ಗಿಜಿಗುಡವ ಸಾಯಿ ಬಾಬಾ ದೇಗುಲದಲ್ಲಿ ದೊಡ್ಡ ರಕ್ತಪಾತವೇ ನಡೆದುಹೋಗುತ್ತಿತ್ತು. ಕನಿಷ್ಠ 50 ಮಂದಿ ಪ್ರಾಣ ತೆರಬೇಕಿತ್ತು. ದೇವಸ್ಥಾನದ ಬಳಿ 3 ಬಾಂಬುಗಳನ್ನು ಸ್ಫೋಟಿಸಲು ಯೋಜಿಸಲಾಗಿತ್ತು.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications