ಬಂದ್ ತೀವ್ರತೆ ಕ್ಷೀಣ; ಎಂದಿನಂತೆ ಜನಜೀವನ

ಬಂದ್/ಮುಷ್ಕರದ ಬಿಸಿ ನಿನ್ನೆ ಆರಂಭದಲ್ಲಿತ್ತಾದರೂ ಕ್ರಮೇಣ ಕಡಿಮೆಯಾಗುತ್ತಾ ಯಾರಿಗೂ ಅದರಲ್ಲಿ ಆಸಕ್ತಿಯೇ ಇಲ್ಲವೇನೋ ಎಂಬಂತಾಗಿ ಹೋಗಿದೆ. ನಿನ್ನೆಯೇ ಅನೇಕ ಮಂದಿ ಕೆಲಸಕ್ಕೂ ಮರಳಿದ್ದಾರೆ.
ರಾಜಧಾನಿಯಲ್ಲಿ ನಿನ್ನೆಯಂತೆ ಬಿಎಂಟಿಸಿ, ಕೆಎಸ್ಆರ್ ಟಿಸಿ ಸೇವೆ ಅಬಾಧಿತವಾಗಿ ಮುಂದುವರಿದಿದೆ. ಆಟೋ, ಕ್ಯಾಬ್ ಗಳು ಅಲ್ಲಲ್ಲಿ ಓಡಾಡುತ್ತಿವೆ.
ಶಾಲಾ, ಕಾಲೇಜಿಗೆ ಮಾತ್ರ ಇಂದೂ ರಜೆ ಮುಂದುವರಿದಿದೆ. ಸರಕಾರ ಮಾತ್ರ ತನ್ನ ಶಾಲಾ-ಕಾಲೇಜಿಗೆ ರಜೆಯಿಲ್ಲವೆಂದು ಘೋಷಿಸಿದೆಯಾದರೂ ಇಂದು ವಿದ್ಯಾರ್ಥಿಗಳು ಸರಕಾರಿ ಶಾಲೆಗಳತ್ತ ಹೆಜ್ಜೆ ಹಾಕುವುದು ಅನುಮಾನ. ಅದು ಬಿಟ್ಟರೆ ಬ್ಯಾಂಕ್, ಅಂಚೆ ಕಚೇರಿ, ಸರಕಾರಿ ಕಚೇರಿಗಳೂ ಉಳಿದೆಲ್ಲ ಆಡಳಿತಯಂತ್ರ ಸಹಜವಾಗಿ ಕಾರ್ಯನಿರ್ವಹಿಸಲಿದೆ.












Click it and Unblock the Notifications