ಕೆಜೆಪಿ ನಾಯಕ ಯಡಿಯೂರಪ್ಪ ಮತ್ತೆ ಬಿಜೆಪಿ ತೆಕ್ಕೆಗೆ

Efforts are on to bring BS Yeddyurappa back into BJP Rajnath Singh
ಬೆಂಗಳೂರು, ಫೆ.18: ಈ ಸುದ್ದಿ ಎಷ್ಟು ನಿಜವೋ, ಸುಳ್ಳೊ ಖುದ್ದು ಆ ರಾಜನಾಥ ಸಿಂಗ್‌ ಅವರೇ ಸ್ಪಷ್ಟಪಡಿಸಬೇಕು. ಆದರೂ ಇಂತಹ ಸುದ್ದಿಗೆ ಅವರು ಚಾಲನೆ ನೀಡಿದ್ದಾರೆ. ಏನಪ್ಪಾ ಅಂದರೆ ಕೆಜೆಪಿ ಅಧಿನಾಯಕ ಯಡಿಯೂರಪ್ಪ ಅವರು ಬಯಸಿದಲ್ಲಿ ಅವರ ಜತೆ ಮತ್ತೆ ಮೈತ್ರಿ ಮಾಡಿಕೊಳ್ಳುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಹೇಳಿರುವುದಂತೂ ನಿಜ.

ಎದುರಿಗೆ ಚುನಾವಣೆಗಳನ್ನಿಟ್ಟುಕೊಂಡು ಈ ಗೊಂದಲಕಾರಿ ಹೇಳಿಕೆಯನ್ನು ಯಾತಕ್ಕಾಗಿ ನೀಡಿದ್ದಾರೋ ಸ್ವತಃ ರಾಜನಾಥರೇ ಬಿಡಿಸಿ ಹೇಳಬೇಕು. ಅದೂ ಈಗ ಎದುರಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಳಿಕ ಯಡಿಯೂರಪ್ಪ ಅವರ ಕೆಜೆಪಿ ಮತ್ತು ತಮ್ಮ ಅಧ್ಯಕ್ಷತೆಯಲ್ಲಿರುವ ಬಿಜೆಪಿ ಒಂದಾಗುತ್ತದೆ ಎಂಬುದು ರಾಜನಾಥರ ಒತ್ತಾಸೆ ಇರುವಂತಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದು ರಾಜನಾಥ್‌ ಸಿಂಗ್‌ ಅವರ ಅನುಭವಕ್ಕೆ ಬಂದಂತಿದ್ದು, 'ಯಡಿಯೂರಪ್ಪ ಅವರಿಗಾಗಿ ನಾವು ಕಾಯುತ್ತೇವೆ. ನಂತರವಷ್ಟೇ ಮುಂದುವರಿಯುತ್ತೇವೆ' ಎಂದು ರಾಜನಾಥ್‌ ಹೇಳಿರುವುದಾಗಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.

ಮಾಜಿ ಸಿಎಂ ಯಡಿಯೂರಪ್ಪ ಜತೆಗೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸುತ್ತಿರುವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸುಳಿವು ನೀಡಿದ್ದಾರಾದರೂ ರಾಜ್ಯ ಮಟ್ಟದಲ್ಲಿ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+