ಸರಕಾರಕ್ಕೇನೂ ಧಕ್ಕೆಯಿಲ್ಲ: ರಾಜನಾಥ್ ಗೆ ಮನವರಿಕೆ

'ಕರ್ನಾಕದಲ್ಲಿ ಬಿಜೆಪಿ ಸರಕಾರ ಸುಭದ್ರವಾಗಿದೆ. ಜಗದೀಶ್ ಶೆಟ್ಟರ್ ಒಬ್ಬ ಅನುಭವಿ ರಾಜಕಾರಣಿ. ಈ ಹಂತದಲ್ಲಿ ನಾನು ಅವರಿಗೆ ಸಲಹೆ ನೀಡುವ ಅಗತ್ಯ ಕಂಡುಬರುತ್ತಿಲ್ಲ' ಎಂದು ಶೆಟ್ಟರ್ ಭೇಟಿಯ ಬಳಿಕ ರಾಜನಾಥ್ ಸುದ್ದಿಗಾರರಿಗೆ ತಿಳಿಸಿದರು. ಇದಕ್ಕೆ ಸ್ಥಳದಲ್ಲೇ ಪ್ರತಿಕ್ರಿಯಿಸಿದ ಶೆಟ್ಟರ್ 'ನಮ್ಮ ಸರಕಾರ ಪೂರ್ಣಾವಧಿ ಪೂರೈಸಲಿದೆ. ಯಾವುದೇ ಆತಂಕವಿಲ್ಲ' ಎಂದು ಸಮರ್ಥಿಸಿಕೊಂಡರು.
ಅಕ್ರಮ ಗಣಿಗಾರಿಕೆ ಭ್ರಷ್ಟಾಚಾರದ ಆರೋಪದಲ್ಲಿ ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಿಎಸ್ ಯಡಿಯೂರಪ್ಪ ಅವರು ನಿರಂತರವಾಗಿ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಉರುಳಿಸುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಇದರಿಂದ ರಾಜ್ಯ ಬಿಜೆಪಿ ಆಗಾಗ ಸಂಕಷ್ಟಕ್ಕೀಡಾಗುತ್ತಿದೆ.












Click it and Unblock the Notifications