ಲಂಚ:ಮಾಜಿ ಮುಖ್ಯಮಂತ್ರಿ, ಪುತ್ರ ನ್ಯಾಯಾಂಗ ಬಂಧನಕ್ಕೆ
ನವದೆಹಲಿ, ಜ. 16: ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಪುತ್ರನನ್ನು ಇಂದು ಬುಧವಾರ ಬಂಧಿಸಲಾಗಿದೆ. ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾ ಮತ್ತು ಅವರ ಪುತ್ರ ಅಜಯ್ ಚೌತಾಲಾ ಬಂಧಿತರು.
ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಇತರೆ 53 ಮಂದಿಯನ್ನೂ ಬಂಧಿಸಲಾಗಿದೆ. ಬಂಧಿತರನ್ನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜನವರಿ 22ರಂದು ದೆಹಲಿ ಕೋರ್ಟ್ನಿಂದ ಇವರಿಗೆ ಶಿಕ್ಷೆಯ ಪ್ರಮಾಣವನ್ನು ನಿಗದಿಪಡಿಸಲಿದೆ.
ಇವರು 1999ರಲ್ಲಿ 3,206 ಮಂದಿ ಕಿರಿಯ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರವೆಸಗಿದ್ದರು. ಆರೋಪಿಗಳು ಅಭ್ಯರ್ಥಿಯಿಂದ ತಲಾ 3-4 ಲಕ್ಷ ರೂ. ಲಂಚ ಪಡೆದಿದ್ದರು. ಈ ಬಗ್ಗೆ ಸಿಬಿಐ 2008 ರಲ್ಲಿ ಜಾರ್ಜ್ ಶೀಟ್ ಸಲ್ಲಿಸಿತ್ತು. ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾರನ್ನು ಬಂಧಿಸುತ್ತಿರುವ ಪೊಲೀಸರು (ಕೆಳಗಿನ ಚಿತ್ರ).













Click it and Unblock the Notifications