ಇನ್ಫೋಸಿಸ್ ನಿಂದ 5 ಸಾವಿರ ಮಂದಿ ಔಟ್?

ಆದರೆ, ಸದ್ಯಕ್ಕೆ ಉದ್ಯೋಗ ಕಡಿತ ಸಂಭವವಿಲ್ಲ ಎಂದು ಇನ್ಫೋಸಿಸ್ ವಕ್ತಾರರು ಮಾಧ್ಯಮ ವರದಿಯನ್ನು ಅಲ್ಲಗೆಳೆದಿದ್ದಾರೆ.
ಉದ್ಯೋಗಿಗಳ ಕಡಿತಕ್ಕೆ ಕಾರಣ ಸಿಂಪಲ್, ಖರ್ಚು ವೆಚ್ಚ ಕಡಿಮೆ ಮಾಡಿಕೊಳ್ಳುವುದು, ಸೇಲ್ಸ್ ಗ್ರಾಫ್ ನಲ್ಲಿ ಏರಿಕೆ ಕಾಣುವುದು ಇನ್ಫೋಸಿಸ್ ನ ಉದ್ದೇಶ.
ಇನ್ಫೋಸಿಸ್ ನ ಯಾವ ವಿಭಾಗಗಳಲ್ಲಿ ಉದ್ಯೋಗ ಕಡಿತವಾಗಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟಣೆ ಸಿಕ್ಕಿಲ್ಲ. ಆದರೆ, ಸುಮಾರು 5000 ಉದ್ಯೋಗಿಗಳ ಕಡಿತ ಗ್ಯಾರಂಟಿ ಎಂದು Reuters ವರದಿ ಮಾಡಿದೆ.
ಕಳೆದ ಹಲವು ತ್ರೈಮಾಸಿಕ ಅವಧಿಯಲ್ಲಿ ಇನ್ಫೋಸಿಸ್ ಸಾಧನೆ ನಿರೀಕ್ಷಿತ ಮಟ್ಟ ಮುಟ್ಟಿರಲಿಲ್ಲ. ಅಮೆರಿಕದಲ್ಲಿ ಬರಾಕ್ ಒಬಾಮಾ ಹೊರ ತಂದಿರುವ ಹೊಸ ಉದ್ಯೋಗ ನೇಮಕಾತಿ ನೀತಿ ಕೂಡಾ ಇನ್ಫೋಸಿಸ್ ಗೆ ಮುಳುವಾಗಿದೆ. [ಪಿಂಕ್ ಸ್ಲಿಪ್]
ಇತ್ತೀಚಿನ ಬೆಳವಣಿಗೆಗಳನ್ನು ಮೆಲುಕು ಹಾಕಿದರೆ...
* ಪ್ರತಿಷ್ಠಿತ ನಾಸ್ಡಾಕ್ ನ ಟಾಪ್ 100 ಪಟ್ಟಿಯಿಂದ ಇನ್ಫೋಸಿಸ್ ಹೊರ ಬಿದ್ದಿತ್ತು.
* ನಾಸ್ಡಾಕ್ 100 ನಿಂದ ಹೊರಬಿದ್ದಿರುವುದು ಇನ್ಫೋಸಿಸ್ ಪಾಲಿಗೆ ಭಾರಿ ಹಿನ್ನೆಡೆಯಾಗಿತ್ತು. 13 ವರ್ಷಗಳ ಬಳಿಕ ಇನ್ಫೋಸಿಸ್ ತುಂಬಾ ಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ.
* 1999 ರಲ್ಲಿ 100 ಮಿಲಿಯನ್ ಡಾಲರ್ ಆದಾಯ ಗಳಿಕೆಯೊಂದಿಗೆ ಜಾಗತಿಕ ಮಟ್ಟದ ಷೇರು ಮಾರುಕಟ್ಟೆ ಪ್ರವೇಶಿಸಿದ್ದ ಭಾರತದ ಕಂಪನಿ ಎಂಬ ಹೆಗ್ಗಳಿಕೆಗೆ ಇನ್ಫೋಸಿಸ್ ಪಾತ್ರವಾಗಿತ್ತು.
* ಕ್ಯಾಂಪಸ್ ಸಂದರ್ಶನದ ಮೂಲಕ ನೇಮಕಾತಿಯನ್ನು 27,000ಕ್ಕೆ ಇಳಿಸಿದ್ದ ಇನ್ಫೋಸಿಸ್ ಈಗ ಈ ಪೈಕಿ 17,000 ನೇಮಕಾತಿಯನ್ನು ವಿಳಂಬಗೊಳಿಸಿತ್ತು.
* ಇನ್ಫೋಸಿಸ್ ನಿಂದ ಫೈನಾನ್ಸ್ ಸರ್ವೀಸಸ್ ನ ಶಾಜಿ ಫರೂಖ್ ಇನ್ಫೋಸಿಸ್ ತೊರೆದು ಬದ್ಧವೈರಿ ವಿಪ್ರೋ ಸೇರಿದ್ದರು. ನಂತರ ಬೋರ್ಡ್ ನಿಂದ ಮೋಹನ್ ದಾಸ್ ಪೈ, ಸೇಲ್ಸ್ ವಿಭಾಗದ ಮುಖ್ಯಸ್ಥ ಸುಭಾಷ್ ಧರ್, ಇನ್ಫೋಸಿಸ್ ಬಿಪಿಒ ಸಿಒಒ ರಿತೇಶ್ ಇದ್ನಾನಿ ಹಾಗೂ ಜಾಗತಿಕ ಕಾರ್ಪೊರೇಟ್ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿದ್ದ ವಿನೋದ್ ಹುದ್ದೆ ತೊರೆದಿದ್ದರು.
* Q2 Year-on-Year ನಲ್ಲಿ 7.343 ಬಿಲಿಯನ್ ಡಾಲರ್ ಆದಾಯ ನಿರೀಕ್ಷೆ ಹೊತ್ತಿದ್ದ ಇನ್ಫೋಸಿಸ್ Q2 ತ್ರೈಮಾಸಿಕ ವರದಿ ಹೂಡಿಕೆದಾರರಿಗೆ ನಿರಾಶೆ ಮೂಡಿಸಿತ್ತು.
* 2012ರಲ್ಲಿ ಷೇರುಪೇಟೆಯಲ್ಲಿ ಇನ್ಫೋಸಿಸ್ ಟೆಕ್ನಾಲಜೀಸ್ ಸಾಧನೆ ತೀರಾ ಕಳಪೆಯಾಗಿತ್ತು. ಸೆನ್ಸೆಕ್ಸ್ ಶೇ 26 ರಷ್ಟು ಲಾಭ ಪಡೆದಿತ್ತು. ಷೇರುಗಳ ಹಾವು ಏಣಿಯಾಟ ಹೂಡಿಕೆದಾರರಿಗೆ ತಲೆನೋವಾಗಿತ್ತು.
* ಜ.11 ರಂದು ಇನ್ಫೋಸಿಸ್ ತನ್ನ ಮತ್ತೊಂದು ನಿರಾಶಾದಾಯಕ ತ್ರೈಮಾಸಿಕ ವರದಿ ಪ್ರಕಟಿಸಲು ಸಿದ್ಧತೆ ನಡೆಸಿದೆ. ಮೇಲ್ಕಂಡ ಕಾರಣಗಳೂ ಸೇರಿ ಇನ್ನಷ್ಟು ಪ್ರಮುಖ ಬೆಳವಣಿಗೆಗಳು ಇನ್ಫೋಸಿಸ್ ಸಂಸ್ಥೆಯನ್ನು cost cutting ಮಂತ್ರ ಜಪಿಸುವಂತೆ ಮಾಡಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications