ಮಕ್ಕಳೇ ಜಯನಗರ ನಂದನವನದಲ್ಲಿ ಏನೆಲ್ಲ ಇದೆ ಗೊತ್ತಾ?
ಬೆಂಗಳೂರು, ಡಿ. 29: ಜಯನಗರದ ಮಕ್ಕಳು ನಿಜಕ್ಕೂ ಅದೃಷ್ಟವಂತರೇ! ಏಕೆಂದರೆ ಪಟ್ಟಾಭಿರಾಮನಗರ ವಾರ್ಡಿನ ಕಾರ್ಪೊರೇಟರ್ ಸಿಕೆ ರಾಮಮೂರ್ತಿ ಅವರು ಡಿಸ್ನಿ ಲೋಕವನ್ನೇ ತಂದು ಮಕ್ಕಳ ಅಂಗಳದಲ್ಲಿ ಹರಡಿದ್ದಾರೆ. ಇದರಿಂದ 'ರಾಮಮೂರ್ತಿ ಅಂಕಲ್' ಬಗ್ಗೆ ಮಕ್ಕಳಿಗೂ ಪ್ರೀತಿ-ಅಭಿಮಾನ ಮೂಡಿದೆ.
ಹೌದು, ಎರಡನೆಯ ಬಾರಿಗೆ ಕಾರ್ಪೊರೇಟರ್ ಆಗಿರುವ ರಾಮಮೂರ್ತಿ ಅಂಕಲ್ ಪಾಲಿಕೆಯ ವತಿಯಿಂದ ಸುಮಾರು 1.5 ಕೋಟಿ ರೂಪಾಯಿಯನ್ನು ಮಕ್ಕಳ ಈ 'ನಂದನವನ'ಕ್ಕಾಗಿ ವಿನಿಯೋಗಿಸಿದ್ದಾರೆ. ಕೊರಿಯಾ, ಆಸ್ಟ್ರಿಯಾ, ಹಾಂಕಾಂಗ್ ಮುಂತಾದ ಕಡೆಗಳಿಂದ 14 ಆಟದ ಸಾಮಾನುಗಳು ಮಕ್ಕಳನ್ನು ಕೈಬೀಸಿ ಕರೆಯುತ್ತಿವೆ.
ಮಕ್ಕಳೇ, ಇಲ್ಲಿರುವ ಸಂಗೀತ ಕಾರಂಜಿಯ ಬಗ್ಗೆ ನಿಮಗೆ ಹೇಳಲೇಬೇಕು. ಇದು ನೀರಿನ ಕಾರಂಜಿ ಅಲ್ಲ. ಬದಲಿಗೆ 68 ಬಣ್ಣ ಬಣ್ಣಗಳ ಚಿಲುಮೆ ಇದು. 3 ಲಕ್ಷ ರೂಪಾಯಿ ಕೊಟ್ಟು ಆಸ್ಟ್ರಿಯಾದಿಂದ ಇದನ್ನು ಆಮದು ಮಾಡಿಕೊಳ್ಳಲಾಗಿದೆ.

ಪಾರ್ಕಿನಲ್ಲಿ ಆಟವಾಡುವ ಸಮಯ:
ಪ್ರತಿ ಸಂಜೆ 5.30ರಿಂದ 8.30ರ ವರೆಗೆ. ರಜಾ ದಿನವಾದ ಭಾನುವಾರವಂತೂ ಇಡೀ ದಿನ ಮಕ್ಕಳು ಇಲ್ಲಿ ಆಡಬಹುದು. ಇನ್ನು, ಶೂಟಿಂಗ್ ಲೈಟ್ಸ್ ಕಾರಂಜಿ ಸಮಯ ಪ್ರತಿ ಸಂಜೆ 7 ರಿಂದ 8.30 ರವರೆಗೆ. ನಂದನವನದಲ್ಲಿರುವ ಆಟದ ಸಾಮಾನುಗಳನ್ನು ಕಣ್ತುಂಬಿಸಿಕೊಳ್ಳಲು ಇಲ್ಲಿರುವ ಗ್ಯಾಲರಿಗೆ ಕ್ಲಿಕ್ ಮಾಡಿ.
ಇನ್ನು ನಂದನವನದ ಮರಗಳಿಂದ ಸುತ್ತುವರಿದಿರುವುದು ಮಕ್ಕಳಿಗೆ ಹೇಳಿ ಮಾಡಿಸಿದ ಆಟದ ಮೈದಾನವಾಗಿದೆ. ಒಟ್ಟು 25 ಸಾವಿರ ಚದರ ಅಡಿ ಜಾಗದಲ್ಲಿ ಆಟವಾಡುವ ಮಕ್ಕಳ ಸುರಕ್ಷತೆಗೆ ಹೆಚ್ಚು ಗಮನ ನೀಡಿ, ಈ ಆಟದ ಸಾಮಾನುಗಳನ್ನು ಹಾಕಲಾಗಿದೆ. ಮಂಗಳೂರು ಕಡೆಯಿಂದ ಸಮುದ್ರದ ಮರಳನ್ನು ತಂದು ಇಲ್ಲಿ ಹಾಸಲಾಗಿದೆ. ಸೋ ದಟ್, ಮಕ್ಕಳು ಬಿದ್ದು ಮೈ ತರಚಿಕೊಂಡರೂ ದೊಡ್ಡ ಗಾಯವಾಗಬಾರದು ಎಂಬ ಕಾಳಜಿ!
26 ಕಾರ್ಟೂನ್ ಚಿತ್ರಗಳನ್ನೂ ಬೃಹದಾಕಾರವಾಗಿ ಇಲ್ಲಿ ಬಿಡಿಸಲಾಗಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳಿಗಾಗಿ 'ಚಿಣ್ಣರ ಅಂಗಳ'ವೂ ಇಲ್ಲಿದೆ. ಆಟವಾಡಿ ಸುಸ್ತಾದ ಮಕ್ಕಳಿಗೆ ದಣಿವಾರಿಸಿಕೊಳ್ಳಲು 14 ಬಣ್ಣಗಳ ಬೆಂಚುಗಳೂ ಇಲ್ಲಿವೆ.
ಟಿವಿ, ಕಂಪ್ಯೂಟರುಗಳಿಗೆ ಅಂಟಿಕೊಳ್ಳುವ ಮಕ್ಕಳು ಒಮ್ಮೆ ಈ ಪಾರ್ಕನ್ನು ನೋಡಿದರೆ ಟಿವಿಗೆ ಗುಡ್ ಬೈ ಹೇಳಿ ಖಂಡಿತಾ ದಿನಾ ಇಲ್ಲಿಗೆ ಬಂದು ಆಟವಾಡಲು ಬಯಸುತ್ತಾರೆ. ಇಷ್ಟೆಲ್ಲ ಇದ್ದ ಮೇಲೆ 'ಪಾರ್ಕಿಗೆ ಎಂಟ್ರೀ ಫೀಸೂ ಇರಬೇಕಲ್ಲಾ?' ಎಂದು ಪ್ರಶ್ನಿಸಿದರೆ 'ಛೆ! ಎಲ್ಲಾದರೂ ಉಂಟಾ, ಮಕ್ಕಳಿಂದ ದುಡ್ಡು ತೆಗೆದುಕೊಳ್ಳುವುದಾ? ಇದು ಉಚಿತ ಪಾರ್ಕ್, ಯಾವುದೇ ದುಡ್ಡು ಕಾಸೂ ಇಲ್ಲದೆ ಮಕ್ಕಳು ಇಲ್ಲಿ ನಲಿದಾಡಬಹುದು' ಎನ್ನುತ್ತಾರೆ ರಾಮಮೂರ್ತಿ ಅಂಕಲ್.
ಮಕ್ಕಳೇ ಪಾರ್ಕಿಗೆ ಹೋಗಿಬಂದು ನಿಮ್ಮ ಅನುಭವ ಹೇಗಿತ್ತು ಅಂತ ನಮಗೆ ಹೇಳ್ತೀರಲ್ಲಾ !?
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications