RSS ಹಿಡಿತದಲ್ಲಿರುವ BJPಗೆ ಭವಿಷ್ಯವಿಲ್ಲ: ಸಂಕೇಶ್ವರ ಬಾಂಬ್

15 ವರ್ಷದಿಂದ ಬಿಜೆಪಿಯ ಹೀನಾಯ ಸ್ಥಿತಿ ಬಲ್ಲೆ. ಅದು ಸಂಪೂರ್ಣವಾಗಿ RSS ಹಿಡಿತದಲ್ಲಿದೆ. ಅವಿವಾಹಿತ ಪಡಪೋಶಿ ಸಂಘ ಪರಿವಾರಿಗಳ ಕೈಯಲ್ಲಿ ಬಿಜೆಪಿ ನಲುಗುತ್ತಿದೆ.
ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಹೆಸರಿನಲ್ಲಿ 36 ಬೇನಾಮಿ ಕಂಪನಿಗಳು ಇದ್ದರೂ ಅವರ ವಿರುದ್ಧ ಯಾವೊದೇ ಕ್ರಮ ಕೈಗೊಂಡಿಲ್ಲ. ಇದು ಅತ್ಯಂತ ಬೇಸರದ ಸಂಗತಿ. ನನ್ನಂತಹ ಪ್ರಮಾಣಿಕನಿಗೆ ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ.
ಮಾಜಿ ಸಿಎಂ ಯಡಿಯೂರಪ್ಪ ಅವರ KJP ಜತೆ ನಾನು ಗುರುತಿಸಿಕೊಂಡಿರುವುದು ನಿಜ. ಆದರೆ ನನ್ನದೇ ಆದ ಆದರ್ಶಗಳೊಂದಿಗೆ ರಾಜಕೀಯದಲ್ಲಿ ಮುನ್ನಡೆಯುತ್ತೇನೆ.
ಹತ್ತಾರು ವರ್ಷಗಳಿಂದ RSS ಆಟಗಳನ್ನು ಹತ್ತಿರದಿಂದ ಬಲ್ಲೆ. ಯಡಿಯೂರಪ್ಪನವರಿಗೂ ಇದೆಲ್ಲ ಗೊತ್ತಿದೆ. ನಮ್ಮದೇ ಆದ ರಾಜ್ಯಕ್ಕೆ ಆದ್ಯತೆ ದೊರೆಯುವಂತೆ ಪ್ರಾದೇಶಿಕ ಪಕ್ಷದ ಸ್ಥಾಪನೆ ಅತ್ಯಗತ್ಯವಾಗಿದೆ ಎಂದು ಅವರಿಗೆ ಮನದಟ್ಟುಪಡಿಸಿದೆ. ಹಾಗಾಗಿ ಇಬ್ಬರೂ ಮಾತನಾಡಿಕೊಂಡೇ ಬಿಜೆಪಿಯಿಂದ ಹೊರಬಂದೆವು.
ಬಿಜೆಪಿಗೆ ಭವಿಷ್ಯವಿಲ್ಲ: RSS ಹಿಡಿತ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಜೆಪಿಗೆ ಭವಿಷ್ಯವಿಲ್ಲ. ಕಾರ್ಪೊರೇಶನ್ ಟಿಕೆಟ್ ಗೂ RSS ಸಮ್ಮತಿ ನೀಡಬೇಕು. ಅಂತಹ ಪರಿಸ್ಥಿತಿ ಉದ್ಭವಿಸಿದೆ.
RSS ಮಾಧ್ಯಮಗಳಲ್ಲಿ ತನ್ನ ವಿಚಾರ/ನಿರ್ಣಯಗಳನ್ನು ಬಹಿರಂಗಪಡಿಸಬೇಕು. ತೆರೆಮರೆಯ ಆಟ ಆಡುವುದು ಸರಿಯಿಲ್ಲ. ಇದರಿಂದ ಬಿಜೆಪಿ ವರ್ಚಸ್ಸಿಗೆ ಧಕ್ಕೆ ಬರುತ್ತಿದೆ. RSSನಿಂದ ಬಿಜೆಪಿ ಪಕ್ಷ ಹಾಳಾಗುತ್ತಿದೆ ಎಂದು ಸುದರ್ಶನ್ ಜೀ ಖುದ್ದಾಗಿ ಅವರಿಗೇ ಹೇಳಿದ್ದೆ.
ವಿಜಯ ಸಂಕೇಶ್ವರ ಕದ್ದುಮುಚ್ಚಿ ರಾಜೀನಾಮೆ: ವಿಜಯ ಸಂಕೇಶ್ವರ್ ಅವರು BJP/RSS ವಿರುದ್ಧ ನೇರ ವಾಗ್ದಾಳಿ ನಡೆಸಿರುವುದನ್ನು ಇನ್ನೂ ಕೇಳಿಸಿಕೊಳ್ಳದ ಮಾಜಿ ಸಿಎಂ ಸದಾನಂದ ಗೌಡರು ಸಂಕೇಶ್ವರ ರಾಜೀನಾಮೆ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
'ವಿಜಯ ಸಂಕೇಶ್ವರ್ ಅವರು ಕದ್ದುಮುಚ್ಚಿ ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ. BJP ಅವರಿಗೆ ಎಲ್ಲ ಸ್ಥಾನಮಾನ ನೀಡಿದೆ. ಅವರು ರಾಜೀನಾಮೆ ನೀಡಿರುವ ರೀತಿ ತುಂಬಾ ಬೇಸರ ತಂದಿದೆ. ಆದರೂ ಅವರು ಹೀಗೇಕೆ ಮಾಡಿದರೋ?' ಎಂದು ಸದಾನಂದರು ಹೇಳಿದ್ದಾರೆ.
'ಪಕ್ಷ ಅಶಿಸ್ತನ್ನು ಸಹಿಸುವುದಿಲ್ಲ. ಅಶಿಸ್ತು ತೋರುವ ನಾಯಕರನ್ನು ಒಂದೇ ಪಾತ್ರೆಯಲ್ಲಿ ಸೌಟಿನಿಂದ ತಿರುವು ಹಾಕುತ್ತೇವೆ' ಎಂದೂ ಸದಾನಂದರು ಫರ್ಮಾನು ಹೊರಡಿಸಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications