ನೀರು ಬಿಟ್ಟ ಮುಠ್ಠಾಳ ಮುಖ್ಯಮಂತ್ರಿ ಅಧಿಕಾರನೂ ಬಿಡಲಿ

ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಕರೆದಿರುವ ಬೆಳಗಾವಿ ವಿಶೇಷ ಅಧಿವೇಶನವನ್ನು ಇಂದೂ ಕಾವೇರಿ ವಿವಾದ ಆಪೋಶನ ತೆಗೆದುಕೊಳ್ಳಲಿದೆ. ನ್ಯಾಯಾಂಗ ನಿಂದನೆ ನೆಪವೊಡ್ಡಿ ಅಧಿಕಾರ ಉಳಿಸಿಕೊಳ್ಳುವ ಭರದಲ್ಲಿ ಸಿಎಂ ಶೆಟ್ಟರ್ ನೀರು ಬಿಟ್ಟಿದ್ದಾರೆ ಎಂದು ಪ್ರತಿಪಕ್ಷಗಳು ಈಗಾಗಲೇ ಅವರ ವಿರುದ್ಧ ಸಿಡಿದು ನಿಂತಿದೆ.
ಇನ್ನು ಕಾವೇರಿ ಹಿರತರಕ್ಷಣಾ ವೇದಿಕೆಯ ಜಿ ಮಾದೇಗೌಡರು 'ಕದ್ದುಮುಚ್ಚಿ ನೀರು ಬಿಟ್ಟ ಶೆಟ್ಟರ್' ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯವನ್ನು ಆಳಲು ಯೋಗ್ಯತೆಯಿಲ್ಲದ ಜನ. ಮುಠ್ಠಾಳ ಮುಖ್ಯಮಂತ್ರಿ ಶೆಟ್ಟರ್ ಅಧಿಕಾರದಲ್ಲಿ ಇರಬಾದರು. ನ್ಯಾಯಾಂಗ ನಿಂದನೆಯಾದರೇನಂತೆ? ಮೊದಲು ನಮ್ಮ ರೈತರ ಹಿತ ಮುಖ್ಯ' ಎಂದು ಗುಡುಗಿದ್ದು ಕೆಆರ್ ಎಸ್ ಗೆ ಮುತ್ತಿಗೆ ಹಾಕಲು ರೈತರಿಗೆ ಕರೆ ನೀಡಿದ್ದಾರೆ.
'ಇರುವ ಅಷ್ಟೋ ಇಷ್ಟೋ ನೀರನ್ನಾದರೂ ಉಳಿಸಿಕೊಳ್ಳೋಣ, ತಮಿಳುನಾಡಿಗೆ ನೀರು ಹರಿಸುವುದು ಬೇಡ' ಎಂದು ಪ್ರತಿಜ್ಞೆ ತೊಟ್ಟಿರುವ ಮಂಡ್ಯ ರೈತರು ಭಾರಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇದರಿಂದ ಬೆಂಗಳೂರು- ಮೈಸೂರು ರಸ್ತೆ ಸಂಚಾರ ನಿಂತಿದೆ.












Click it and Unblock the Notifications