ಇಂದು ಚೆಸ್ ಆಡಲು ಬಿಡಿ! ಮಕ್ಕಳು ಚತುರಮತಿಗಳಾಗಲಿ
ಬೆಂಗಳೂರು, ನ.30: 'ಮಕ್ಕಳಿಗೆ ಏನನ್ನು ಯೋಚಿಸಬೇಕು ಎಂಬುದನ್ನು ಕಲಿಸುವ ಬದಲು ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸಬೇಕು' ಎನ್ನುತ್ತಾರೆ ಮಾರ್ಗರೇಟ್ ಮೀಡ್.
ಕಂಕಣ ತೊಟ್ಟಿರುವ ಶಿಕ್ಷಣ ಇಲಾಖೆ: ಇದು ಯಾರ ideaನೋ ಗೊತ್ತಿಲ್ಲ. ಆದರೆ ಇದಕ್ಕೆ ಕಾರಣಕರ್ತರಾಗಿರುವವರಿಗೆ ಕೋಟಿ ವಂದನೆ ಸಲ್ಲಿಸಬೇಕು. ಏನೆಂದರೆ ಕರ್ನಾಟಕ ಶಿಕ್ಷಣ ಇಲಾಖೆಯು ಚದುರಂಗ ಆಟವನ್ನು ಎಲ್ಲ (ಸುಮಾರು 15 ಸಾವಿರ) ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮಕ್ಕಳಿಗೆ ಕಲಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಶುಕ್ರವಾರ ನವೆಂಬರ್ 30, 2012ರಂದು ಚೆಸ್ ದಿನಾಚರಣೆ ಮೂಲಕ ಚತುರಮತಿಯ ಚದುರಂಗ ಆಟವನ್ನು ಉತ್ತೇಜಿಸಲು ಕಂಕಣ ತೊಟ್ಟಿದೆ.

ಬಹುಶಃ ಇದೇ ಮೊದಲ ಬಾರಿಗೆ ಸರಕಾರ ಇಂತಹ ಪ್ರಯತ್ನಕ್ಕೆ ಕೈಹಾಕಿದಂತಿದೆ. ಈ ಹಿಂದೆ ಶಾಲಾ ಮಟ್ಟದಲ್ಲಿ ಚೆಸ್ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಬುದ್ಧಿಮತ್ತೆಗೆ ಸಾಣೆ ಹಿಡಿಯುತ್ತಿತ್ತು. ಆದರೆ ಚೆಸ್ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಚೆಸ್ ಗಾಗಿಯೇ ಒಂದು ದಿನವನ್ನು ಮುಡಿಪಾಗಿಡುವುದು ನಿಜಕ್ಕೂ ಸ್ತುತ್ಯಾರ್ಹ.
ಒಂದಷ್ಟು ಚೆಸ್ ಪ್ರಯೋಗಗಳು: ಇಂತಹ ಪ್ರಯೋಗಗಳು ಜಗತ್ತಿನ ಬೇರೆಡೆಗಳಲ್ಲಿ ಕಾಲಕಾಲಕ್ಕೆ ನಡೆಯುತ್ತಾ ಬಂದಿದೆ. ಅದರಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗಿ, ಅವರ ಆಲೋಚನಾಕ್ರಮವೇ ಬದಲಾದ ಉದಾಹರಣೆಗಳಿವೆ. ವೆನಿಜುಲಾ, ಐಸ್ ಲ್ಯಾಂಡ್, ರಷ್ಯಾ ಸೇರಿದಂತೆ 30 ಕ್ಕೂ ಹೆಚ್ಚು ರಾಷ್ಟ್ರಗಳು ಚೆಸ್ ಆಟವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಕೊಂಡಿಸಿವೆ.
ಸದ್ಯಕ್ಕೆ ರಾಜ್ಯದಲ್ಲಿ ರಾಜಕೀಯ ಚದುರಂಗದಾಟ ಮೇಲಾಗಿದೆ. ಆದಾಗ್ಯೂ ಶಿಕ್ಷಣ ಇಲಾಖೆಯ ಈ ಪ್ರಯತ್ನಕ್ಕೆ ಸರಕಾರ ನೀರೆರೆದಿದೆ. ಇದರಿಂದ ಮತ್ತಷ್ಟು ಪ್ರೇರಣೆ ಪಡೆದು ಜಗತ್ತಿನ ಇತರೆ ರಾಷ್ಟ್ರಗಳಂತೆ ಚೆಸ್ ಆಟವನ್ನು ಕರ್ನಾಟಕದ ಶಾಲಾ ಪಠ್ಯಕ್ರಮದಲ್ಲಿಯೂ ಅಳವಡಿಸುವಂತಾಗಲಿ. 'ಚೆಸ್ ಗೆ ಕಾಶಿ' ಎನಿಸಿರುವ ನೆರೆಯ ಚೆನ್ನೈನಿಂದಲೂ ಒಂದಷ್ಟು ಸೂಕ್ತ ಸಲಹೆ ಪಡೆಯಲಿ.
ಚದುರಂಗದಾಟದಿಂದ ನಾನಾ ರೀತಿಯ ಮಾನಸಿಕ ಸಾಮರ್ಥ್ಯಗಳಾದ ಶಿಸ್ತು, ತಾಳ್ಮೆ, ಸಹನೆ, ಆತ್ಮವಿಶ್ವಾಸ, ದೃಢತೆ, ನೆನಪಿನ ಶಕ್ತಿ, ತಾರ್ಕಿಕ ಆಲೋಚನೆ ಬೆಳವಣಿಗೆಯಾಗಲಿದೆ. ಅದೂ ಚಿಕ್ಕ ವಯಸ್ಸಿಗೇ ಪ್ರಾಥಮಿಕ ಶಾಲಾ ಹಂತದಲ್ಲಿ ಚೆಸ್ ಆಟಕ್ಕೆ ಮಣೆ ಹಾಕುವುದು ಉತ್ತಮ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಬುದ್ಧಿಶಕ್ತಿಗೆ ಕಾರಣವಾಗುವ 'ಡೆಂಡ್ರೈಟ್ಸ್' ಬೆಳವಣಿಗೆಯು ಚದುರಂಗ ಆಟ ಆಡುವುದರಿಂದ ಚುರುಕಾಗುತ್ತದೆ ಎಂದು ತಿಳಿದುಬಂದಿದೆ.
ಪೋಷಕರಿಗೆ ಚೆಕ್ ಮೇಟ್: 'ಈಗಿನ ಮಕ್ಕಳು ಅದ್ಭುತ ಪ್ರತಿಭೆಗಳು. ಅವರಿಗೆ ಏನಿಷ್ಟವೋ ಅದನ್ನು ಆಡಲು ಬಿಡಬೇಕು' ಎನ್ನುವುದರಿಂದ ಹಿಡಿದು 'ತಮ್ಮ ಮಕ್ಕಳು ಎಲ್ಲ ಕ್ರೀಡೆ/ಸ್ಪರ್ಧೆಗಳಲ್ಲೂ ವಿಜೃಂಭಿಸುವಂತಾಗಲಿ' ಎಂದು ಇದ್ದಬದ್ದದ್ದಕ್ಕೆಲ್ಲ ಪೋಷಕರು ತಮ್ಮ ಮಕ್ಕಳನ್ನು ಹಚ್ಚುತ್ತಾರೆ. ಆದರೆ ಅದು ಸರ್ವಥಾ ಸಾಧುವಲ್ಲ.
ಹಿರಿಯರೆನಿಸಿಕೊಂಡ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿದ್ದು ಯಾವುದಾದರೂ ಒಂದೋ ಎರಡೂ ಕ್ರೀಡೆಗಳನ್ನು ಆರಿಸಿಕೊಂಡು ಮಕ್ಕಳು ದೊಡ್ಡ ಸಾಧನೆ ಮಾಡಲು ಬಿಡಿ. ಅದು ಬಿಟ್ಟು ಸುಖಾಸುಮ್ಮನೆ Jack of all - master of none ಆಗುವುದು ಬೇಡ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications