ಬಂಡೀಪುರ ಅಭಯಾರಣ್ಯದಲ್ಲಿ ಮಂಗನ ಕಾಯಿಲೆ?

ಕೋತಿಗಳ ಸಾವಿಗೆ ಸಂಬಂಧಿಸಿದಂತೆ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲೊಜಿಗೆ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರಿನರಿ ಬಯೋಲಾಜಿಕಲ್ಸ್ ಮೂಲಕ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.
ಕ್ಯಾಂಪ್ನಲ್ಲಿ ಕೆಲಸ ಮಾಡುತ್ತಿದ್ದ 5 ಅರಣ್ಯ ಸಿಬ್ಬಂದಿ ಅಸ್ವಸ್ಥವಾಗಿರುವ ಹಿನ್ನೆಲೆಯಲ್ಲಿ ಅವರಿಗೂ ಕಾಯಿಲೆ ಹರಡಿರುವ ಶಂಕೆಯಿರುವುದರಿಂದ ಅವರ ರಕ್ತ ಮಾದರಿಗಳನ್ನೂ ಕಳಿಸಲಾಗಿದ್ದು, ಅವರಿಗೆ ಗುಂಡ್ಲಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅರಣ್ಯ ಸಿಬ್ಬಂದಿಗೆ ಉಣ್ಣಿ ಹುಳದಿಂದ ದೂರವಿಡಲು ಡಿಎಂಪಿ ಎಣ್ಣೆ ಹಚ್ಚಿಕೊಳ್ಳುವುದಾಗಿ ಹಾಗೂ ಕೋತಿಗಳು ಸತ್ತ ತಕ್ಷಣ ಮೆಥಲಿನ್ ಸ್ಪ್ರೇ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ. ಈಗಾಗಲೇ ಶಿವಮೊಗ್ಗ ವಿಡಿಎಲ್ನಿಂದ ತಜ್ಞರ ತಂಡ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಣೆ ಮಾಡಿದ್ದು, ಮಂಗನ ಕಾಯಿಲೆ ಹರಡಿರುವುದು ಖಚಿತವಾದಲ್ಲಿ ಅರಣ್ಯ ಸಿಬ್ಬಂದಿಗೆ ಹಾಗೂ ಸ್ಥಳೀಯರಿಗೆ ಚುಚ್ಚುಮದ್ದು ನೀಡಲು ಕ್ರಮ ಕೈಗೊಳ್ಳಲಿದ್ದಾರೆ.












Click it and Unblock the Notifications