ಶುರುವಾಯ್ತು ಪಟಾಕಿ ಅನಾಹುತ : ಇಬ್ಬರು ಮಕ್ಕಳ ಕಣ್ಣಿಗೆ ಗಾಯ

ಅದೇ ಪಟಾಕಿಯ ಕಿಡಿ ನಮ್ಮ ನಿರ್ಲಕ್ಷ್ಯದಿಂದಲೋ, ಹುಡುಗಾಟಿಕೆಯಿಂದಲೋ, ಅನಿರೀಕ್ಷಿತವಾಗಿ ಮೈಗೆ ಸಿಡಿದಾಗ ಅಥವಾ ಕಣ್ಣಿಗೆ ನುಗ್ಗಿದಾಗ ಆ ಆನಂದವೆಲ್ಲ ಕ್ಷಣಾರ್ಧದಲ್ಲಿ ಸುಟ್ಟು ಹೋಗಿರುತ್ತದೆ. ಕಣ್ಣಿಗೆ ಮಾಯದಂತಹ ಘಾಸಿ ಮಾಡಿದಾಗ ಬೆಳಕಿನ ಹಬ್ಬ ಆಜನ್ಮಪರ್ಯಂತ ಅಂಧಕಾರವನ್ನು ಕಾಣಿಕೆಯಾಗಿ ನೀಡಿರುತ್ತದೆ. ಈಗ ನೀವೇ ನಿರ್ಧರಿಸಿ ಬೆಳಗಿನ ಹಬ್ಬ ದೀಪಾವಳಿ ಬೆಳಕನ್ನು ಚಿಮ್ಮಿಸಬೇಕೋ, ಅಂಧಕಾರ ತರಬೇಕೋ.
ಪ್ರತಿವರ್ಷ ಇಂತಹ ಅನಾಹುತಗಳು ನಾಡಿನಾದ್ಯಂತ ನಡೆಯುತ್ತಿದ್ದರೂ ಕೆಲವರು ಎಚ್ಚೆತ್ತುಕೊಳ್ಳುವುದೇ ಇಲ್ಲ. ಇಂಥದೇ ಅನಾಹುತಗಳ ಸರಮಾಲೆ ಈಗಾಗಲೆ ಈ ದೀಪಾವಳಿಯಲ್ಲಿಯೂ ಆರಂಭವಾಗಿದೆ. ದೀಪಾವಳಿಯ ಮೊದಲ ದಿನವಾದ ನರಕಚತುರ್ದಶಿಯಂದು ಬೆಳ್ಳಂಬೆಳಿಗ್ಗೆ ಪಟಾಕಿ ಹಚ್ಚುವಾಗ ಬೆಂಗಳೂರಿನ ವಿಜಯನಗರದ ಆಕಾಶ್ (6) ಮತ್ತು ಜಯಂತ್ (10) ಎಂಬಿಬ್ಬ ಬಾಲಕರು ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.
ಈಗ ಅವರಿಬ್ಬರಿಗೆ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಣ್ಣಿಗೆ ಆಗಿರುವ ಗಾಯ ಯಾವ ಮಟ್ಟಿನದೆಂದು ಇನ್ನೂ ತಿಳಿದುಬಂದಿಲ್ಲ. ಕೈಕಾಲಿಗೆ ಸಣ್ಣಪುಟ್ಟ ಗಾಯಗಳಾದರೆ ಸಹಿಸಿಕೊಳ್ಳಬಹುದು, ಆದರೆ, ಅತ್ಯಮೂಲ್ಯವಾದ ಕಣ್ಣಿಗೆ ಗಾಯವಾಗಿ ದೃಷ್ಟಿಯೇ ಶಾಶ್ವತವಾಗಿ ಹೋಗಿಬಿಟ್ಟರೆ, ಮುಂದಿನ ಬಾಳೇ ಅಂಧಕಾರದಲ್ಲಿ ಕಳೆಯಬೇಕಾಗುತ್ತದೆ.
ಪಟಾಕಿ ತರುವ ಅನಾಹುತಗಳು ಎಂಥವು?
* ವಿಪರೀತ ಶಬ್ದ ಮಾಡುವ ಪಟಾಕಿಗಳಿಂದ ಕಿವಿ ಕಿವುಡಾಗಬಹುದು.
* ಪಟಾಕಿ ಉಂಟುಮಾಡುವ ಧೂಳಿನ ಸೇವನೆಯಿಂದ ಆಸ್ತಮಾ ಬರಬಹುದು.
* ಕಣ್ಣಿಗೆ ಗಾಯವಾದರೆ ಶಾಶ್ವತವಾಗಿ ದೃಷ್ಟಿಯನ್ನು ಕಳೆದುಹೋಗಬಹುದು.
* ಗರ್ಭಿಣಿಯರಿಗೆ ಮತ್ತು ಆಗತಾನೆ ಹುಟ್ಟಿದ ಪುಟ್ಟ ಕಂದಮ್ಮಗಳ ಮೇಲೆ ದುಷ್ಪರಿಣಾಮ ಬೀರಬಹುದು.
* ಪಟಾಕಿ ಧೂಳಿನಿಂದ ಕಣ್ಣಿಗೆ ಸೋಂಕಾಗಬಹುದು, ಗಂಟಲು ತುರಿಕೆಯಾಗಬಹುದು.
* ಹೃದಯಬೇನೆ ಇರುವವರ ಎದೆಯ ಬಡಿತ ಇದ್ದಕ್ಕಿದ್ದಂತೆ ಏರುಪೇರಾಗಬಹುದು.
* ಅಟಂ ಬಾಂಬ್ ಅಥವಾ ರಾಕೆಟ್ಗಳಿಂದ ಇತರರಿಗೆ ತೊಂದರೆಯಾಗಬಹುದು.
* ರಾಕೆಟ್ಗಳು ಅಕ್ಕಪಕ್ಕದ ಮನೆ ಅಥವಾ ಹುಲ್ಲಿನ ಬಣಿವೆ ಹೊಕ್ಕು ದೊಡ್ಡ ಅನಾಹುತ ತರಬಹುದು.
ಇಷ್ಟೆಲ್ಲ ಅನಾಹುತಗಳಿಗೆ ಕಾರಣರಾಗುವ ಬದಲು, ಪಟಾಕಿ ಸಿಡಿಸದಿದ್ದರೆ ಪರಿಸರ ಹಾನಿಯನ್ನೂ ತಡೆಗಟ್ಟಬಹುದು, ನಮ್ಮ ಆರೋಗ್ಯವನ್ನೂ ಉತ್ತಮವಾಗಿ ಇಟ್ಟುಕೊಳ್ಳಬಹುದು. ಪಟಾಕಿ ಹಚ್ಚಲಿಲ್ಲ ಎಂಬ ಖೇದ ಆರಂಭದಲ್ಲಿ ಕಾಡಬಹುದು. ಆದರೆ, ಅನಾಹುತಗಳ ಬಗ್ಗೆ ಒಂದು ಬಾರಿ ಯೋಚಿಸಿದಾಗ ಪಟಾಕಿ ಹಾರಿಸುವುದಕ್ಕಿಂತ ಸುಮ್ಮನಿದ್ದು, ಆಕಾಶಬುಟ್ಟಿ, ಸಾಲುಸಾಲು ದೀಪಗಳನ್ನು ಹಚ್ಚಿ ಆನಂದಪಡಬಹುದು. ಏನಂತೀರಿ? ದೀಪಾವಳಿ ಹಬ್ಬದ ಶುಭಾಶಯಗಳು.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications