ಸಾಫ್ಟ್ ವೇರ್ ಇಂಜಿನಿಯರುಗಳಿಗೆ ಐಟಿ ಕೆಲಸ ಖಾಲಿಯಿಲ್ಲ

ಪರಿಸ್ಥಿತಿ ಹಾಗೇನೂ ಇಲ್ಲ. ಆದರೆ ಆರ್ಥಿಕ ಹಿಂಜರಿತ ಮತ್ತು ತೀವ್ರ ಸ್ಪರ್ಧಾತ್ಮಕತೆಯಿಂದಾಗಿ ಟೆಕ್ಕಿಗಳಿಗೆ ಗಂಭೀರ ಪರಿಸ್ಥಿತಿ ಎದುರಾಗಿದೆ. ಐಟಿ ದಿಗ್ಗಜ ಕಂಪನಿಗಳಾದ TCS ಮತ್ತು Infosys ಪ್ರಸಕ್ತ ಸಾಲಿನಲ್ಲಿ ಕಾಲೇಜು ಕ್ಯಾಂಪಸ್ ಸೆಲೆಕ್ಷನ್ ಅವಕಾಶಗಳನ್ನು ತಗ್ಗಿಸಿದೆ.
ಕಳೆದ ವರ್ಷ ಅನುಕ್ರಮವಾಗಿ 43 ಸಾವಿರ ಮತ್ತು 19 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದ TCS ಮತ್ತು Infosys ಆ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿದ್ದು, 25 ಸಾವಿರ ಮತ್ತು 6 ಸಾವಿರಕ್ಕೆ ಕುಗ್ಗಿಸಿವೆ.
HCL Technologies ಕಂಪನಿಯದ್ದೂ ಇದೇ ಕಥೆ. ಇನ್ನು, ಬಹುರಾಷ್ಟ್ರೀಯ ಕಂಪನಿಗಳು ಡಿಸೆಂಬರ್ ವೇಳೆಗೆ ನೇಮಕಾತಿಗಳನ್ನು ಕಡಿಮೆ ಮಾಡುತ್ತವೆ. ಆದರೆ ಭಾರತೀಯ ಕಂಪನಿಗಳು ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಹಣಕಾಸು ಸ್ಥಿತಿಗಳನ್ನು ನೋಡಿಕೊಂಡು ಮುಂದಿನ ಆರ್ಥಿಕ ವರ್ಷಕ್ಕೆ ಹೊಂದಿಕೊಂಡಂತೆ ನೇಮಕಾತಿಗಳನ್ನು ಮಾಡಿಕೊಳ್ಳುತ್ತವೆ ಎಂದು HeadHunters India ಮಾನವ ಸಂಪನ್ಮೂಲ ಸಂಸ್ಥೆಯ ಕ್ರಿಸ್ ಲಕ್ಷ್ಮಿಕಾಂತ್ ವ್ಯಾಖ್ಯಾನಿಸಿದ್ದಾರೆ.
ಆದರೆ ಈ ಬಾರಿ ಜನವರಿ-ಮಾರ್ಚ್ ತ್ರೈಮಾಸಿಕಕ್ಕೂ ಮೊದಲೇ ನೇಮಕಾತಿ ವಿಚಾರಗಳ ಬಗ್ಗೆ ನಮ್ಮ ಕಂಪನಿಗಳು ಹಿಂಜರಿದಿವೆ ಎನ್ನುತ್ತಾರೆ ಲಕ್ಷ್ಮಿಕಾಂತ್. ಹಾಗಾದರೆ ಮಾಹಿತಿ ತಂತ್ರಜ್ಞಾನದ ಫ್ರೆಷರ್ಸ್ ಗೆ ಉದ್ಯೋಗಾವಕಾಶಗಳೇ ಇಲ್ವಾ ಅಂದರೆ...
IT ಹೊರತಾಗಿ ಇತರೆ ಕ್ಷೇತ್ರಗಳು ನೇಮಕಾತಿಗಳನ್ನು ನಿಲ್ಲಿಸಿಲ್ಲ. ಇತರೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇವೆ. ಆದರೆ IT ಮಂದಿ ಅದಕ್ಕೆ ಹೊಂದಿಕೊಂಡು ಉದ್ಯೋಗಗಳನ್ನು ದಕ್ಕಿಸಿಕೊಳ್ಳಬೇಕಾಗಿದೆ.
ರೀಟೇಲ್, ಹಾಸ್ಪಿಟಲ್, ಹೋಟೆಲ್, ಬ್ಯಾಂಕಿಂಗ್, ಮೂಲಸೌಕರ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇವೆ. ಉದಾಹರಣೆಗೆ State Bank of India ಈ ಬಾರಿ 20 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲು ಸನ್ನದ್ದವಾಗಿದೆ. ಇನ್ನು, ವಾರ್ಷಿಕ ಶೇ. 35ರಷ್ಟು ಪ್ರಗತಿ ಕಾಣುತ್ತಿರುವ ಈ-ಕಾಮರ್ಸ್ ಕ್ಷೇತ್ರದಲ್ಲಿ ಹೇರಳ ಉದ್ಯೋಗಾವಕಾಶಗಳು ಇವೆ.
IT ಹೊರತಾಗಿ ಇತರೆ ಕ್ಷೇತ್ರಗಳಲ್ಲಿ ನೇಮಕಗೊಂಡವರಿಗೆ ಪಗಾರ ಅಷ್ಟೊಂದು ಆಕರ್ಷಕವಾಗಿರುವುದಿಲ್ಲವಾದರೂ ಅಲ್ಲಿ ಗಳಿಸುವ ಅನುಭವ ಅಮೂಲ್ಯವಾಗಿರುತ್ತದೆ ಎಂದು ಹುರಿದುಂಬಿಸುತ್ತಾರೆ ಕ್ರಿಸ್ ಲಕ್ಷ್ಮಿಕಾಂತ್.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications