ಕೆನರಾ ಬ್ಯಾಂಕ್ ಲಾಭ ಶೇ 22 ರಷ್ಟು ಕುಸಿತ

ಸೆಪ್ಟೆಂಬರ್ 30,2012ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 5.52 ಲಕ್ಷ ಕೋಟಿ ರು. ವ್ಯವಹಾರ ನಡೆಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್ 5.27 ಲಕ್ಷ ಕೋಟಿ ರು. ವ್ಯವಹಾರ ನಡೆಸಿತ್ತು.
ಎರಡನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ಒಟ್ಟು ಆದಾಯ 9,204 ಕೋಟಿ ರು. ತಲುಪಿದೆ. ಈ ತ್ರೈಮಾಸಿಕದಲ್ಲಿ ಆದಾಯ ಶೇ 9 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8,437 ಕೋಟಿ ರು ಆದಾಯ ಗಳಿಸಲಾಗಿತ್ತು.
ಸಾಲ ಮತ್ತು ಮುಂಗಡಗಳ ಮೇಲಿನ ವರಮಾನ 6,121 ಕೋಟಿ ರು. ಆಗಿದೆ. ಬ್ಯಾಂಕಿನ ಬಡ್ಡಿಯೇತರ ಆದಾಯ 608 ಕೋಟಿ ರು. ತಲುಪಿದೆ.
ಬ್ಯಾಂಕಿನ ಒಟ್ಟಾರೆ ವೆಚ್ಚ 7992 ಕೋಟಿ ರೂ. ತಲುಪಿದ್ದು, ಬಡ್ಡಿಯೇತರ ವೆಚ್ಚ 1283 ಕೋಟಿ ರು. ಆಗಿದೆ ಎಂದು ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕಿ ಅರ್ಚನಾ ಭಾರ್ಗವ್ ಹೇಳಿದ್ದಾರೆ.
ಬ್ಯಾಂಕಿನ ಚಾಲ್ತಿ ಮತ್ತು ಉಳಿತಾಯ ಠೇವಣಿಗಳ ಮೊತ್ತ 83,556 ಕೋಟಿ ರು. ಆಗಿದೆ. ಬ್ಯಾಂಕಿನ ಒಟ್ಟು ಠೇವಣಿ ಶೇ.25.65 ರಷ್ಟಿದೆ.
ಅದರಲ್ಲಿ ಉಳಿತಾಯ ಠೇವಣಿಗಳು ಆರ್ಥಿಕ ವರ್ಷ ಅಂತ್ಯಕ್ಕೆ 70,494 ಕೋಟಿ ರು. ಏರಿಕೆಯಾಗಲಿದ್ದು, 2013ರ ಮೊದಲಾರ್ಧದಲ್ಲಿ 19.5 ಲಕ್ಷಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಉಳಿತಾಯ ಖಾತೆ ಠೇವಣಿಗಳಾಗಲಿವೆ ಎಂದು ಅರ್ಚನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಡ್ಡಿ ಆದಾಯ 1975 ಕೋಟಿ ರು. ಆರ್ಥಿಕ ವರ್ಷದ ಅಂತ್ಯಕ್ಕೆ ಮುಂಗಡಗಳು 2,15,751 ಕೋಟಿ ರು. ತಲುಪಲಿದ್ದು, ಸಾಲ ಮತ್ತು ಠೇವಣಿಗಳ ಅನುಪಾತ ಶೇ.64 ರಷ್ಟಾಗಿದೆ.
ರೈತರಿಗೆ ಆದ್ಯತೆ: ಕೃಷಿ ಸಾಲದ ಮೊತ್ತ 33,267 ಕೋಟಿ ರೂ. ಆಗಿದ್ದು, ಆರ್ಥಿಕ ವರ್ಷದ ಮೊದಲಾರ್ಧ ವಾರ್ಷಿಕದಲ್ಲಿ 13,944 ಕೋಟಿ ರೂ.ಗಳನ್ನುರೈತರಿಗೆ ಸಾಲ ನೀಡಲಾಗಿದೆ.
ಕಿಸಾನ್ ಕಾರ್ಡು ಗಳಡಿಯಲ್ಲಿ 5,363 ಕೋಟಿ ರೂ. ಬಾಕಿಯಿರುವ ಸಾಲದ ಮೊತ್ತ. ರೈತರ ಅನುಕೂಲಕ್ಕಾಗಿ ನೂತನ ತಂತ್ರಜ್ಞಾನಗಳನ್ನು ಒಳಗೊಂಡ ಎಟಿಎಂಗಳಲ್ಲಿ ಉಪಯೋಗಿಸಲು ಎನ್ಪಿಸಿಐ ಚಿಹ್ನೆವುಳ್ಳ ನೂತನ ಕಿಸಾನ್ ಕಾಡ್ ಗಳನ್ನು ನೀಡಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications