ಬಿಎಸ್ವೈಗೆ ಟಾಂಗ್ ಕೊಡಲು ಶೋಭಾಗೆ ಕೊಕ್

ಈ ಮಧ್ಯೆ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರೂ ಆಗಿರುವ ಶೋಭಾ ಮೇಡಂ ಅವರಿಂದ ಪುತ್ತೂರು ಜನ ವಿಮುಖಗೊಂಡಿದ್ದಾರೆ. ನಿನ್ನೆ ಇಲ್ಲಿ ನಡೆದ ಒಕ್ಕಲಿಗ ಗೌಡ ಸಮಾವೇಶದಲ್ಲಿ ಸಚಿವೆ ಶೋಭಾರನ್ನು ನೆನಪು ಮಾಡಿಕೊಳ್ಳುವುದಕ್ಕೂ ಸ್ಥಳೀಯ ಆಡಳಿತಕ್ಕೆ ಸಮಯ, ಸಂಯಮ ಇರಲಿಲ್ಲ.
ಶೋಭಾ ಮೇಡಂ ಸಹ ಒಕ್ಕಲಿಗ ಗೌಡರೇ ಆಗಿದ್ದರೂ ಸ್ಥಳೀಯ ನಾಯಕರು ಅವರತ್ತ ತಿರುಗಿ ನೋಡಿಲ್ಲ. ಬದಲಿಗೆ ಒಕ್ಕಲಿಗ ಗೌಡರೇ ಆದ ಸಾಕ್ಷಾತ್ ಮುಖ್ಯಮಂತ್ರಿಯವರನ್ನು ಕರೆಯಿಸಿ, ಉಪಚರಿಸಿದ್ದಾರೆ. ಸಾಲದು ಅಂತ ಮಾಜಿ ಮುಖ್ಯಮಂತ್ರಿಯೊಬ್ಬರನ್ನೂ ಕರೆದು ಸನ್ಮಾನ ಮಾಡಿದ್ದಾರೆ. ಆದರೆ ಪ್ರಭಾವಿ ಸಚಿವೆ ಎನಿಸಿರುವ ಶೋಭಾರನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿದೆ. Thanks to ಮತ್ತೊಬ್ಬ ಮಾಜಿ ಮುಖ್ಯಮಂತ್ರಿ! ಈ ಮಾಜಿ ಸಿಎಂಗೆ ಬರೆ ಹಾಕಲು ಶೋಭಾ ಮೇಡಂರನ್ನು ಹಾಲಿ ಸಿಎಂ ದೂರವಿಟ್ಟರಾ? ಅವರವರೇ ಉತ್ತರಿಸಬೇಕು.












Click it and Unblock the Notifications