ಸ್ಟಾರ್ ಬಕ್ಸ್ ಗೆ ಟಾಂಗ್ ಕೊಡಲು ಸಿದ್ಧಾರ್ಥ ಸಿದ್ಧ

ಸ್ಟಾರ್ ಬಕ್ಸ್ ಗೆ ಸಮರ್ಥವಾಗಿ ಪೈಪೋಟಿ ನೀಡಲು ಫೋರ್ಬ್ಸ್ ಪಟ್ಟಿ ಸೇರಿರುವ ಕಾಫಿ ಉದ್ಯಮಿ ವಿಜಿ ಸಿದ್ಧಾರ್ಥ ಅವರ ಎಬಿಸಿಲ್ ಕಂಪನಿಯ ಕಾಫಿಡೇ ಮೂಲಕ ಸಿದ್ಧರಾಗಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 400 ಕೋಟಿ ರು.ಗೂ ಅಧಿಕ ಹೂಡಿಕೆ ಮಾಡಲಾಗುವುದು. ಕೆಫೆ ಕಾಫಿ ಡೇ(CCD)ಮಳಿಗೆಗಳನ್ನು ಸಾಫ್ಟ್ ವೇರ್ ಸಂಸ್ಥೆಗಳ ಆಧಾರಿತ ವಿಶೇಷ ಆರ್ಥಿಕ ವಲಯ (SEZ) ಗಳನ್ನು ಸ್ಥಾಪಿಸು ಉದ್ದೇಶಿಸಲಾಗಿದೆ. ಇದಕ್ಕಾಗಿ 200 ಕೋಟಿ ರು ಮೀಸಲಿಡಲಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಸ್ಥೆ 91 ಎಕರೆ ಭೂಮಿ ಹೊಂದಿದೆ ಹಾಗೂ ಮಂಗಳೂರಿನಲ್ಲಿ 23 ಎಕರೆ ಭೂ ಪ್ರದೇಶದಲ್ಲಿ ಹೊಸ ಸಿಸಿಡಿ ಮಳಿಗೆಗಳು ತಲೆ ಎತ್ತಲಿದೆ. ಎಚ್ ಪಿ ಎಂಫಾಸಿಸ್, ಮೈಂಡ್ ಟ್ರೀ ಹಾಗೂ ಟೆಕ್ಸಾಸ್ ಇನ್ಸ್ ಸ್ಟ್ರೂಮೆಂಟ್ಸ್ ಮುಂತಾದ ಐಟಿ ಕಂಪನಿಳು ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿತವಾಗಿದೆ.
ಸಿದ್ಧಾರ್ಥ ಯೋಜನೆ ಸದಾ ಸಿದ್ಧ : ಸಿಕಲ್ ಲಾಜಿಸ್ಟಿಕ್ಸ್ ಸಂಸ್ಥೆಯನ್ನು ಖರೀದಿಸಿರುವ ಎಬಿಸಿಎಲ್ ತನ್ನ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಸಿದ್ಧಾರ್ಥ ಅವರು ಕೂಡಾ ಸಂಸ್ಥೆಯಲ್ಲಿರುವ ತಮ್ಮ ಶೇ.52ರಷ್ಟು ಪಾಲು ಷೇರುಗಳನ್ನು ಸಾರ್ವಜನಿಕವಾಗಿ ಬಿಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಮೈಂಡ್ ಟ್ರೀ ಕಂಪನಿಯ ಸ್ಥಾಪಕ ಹೂಡಿಕೆದಾರರಾಗಿರುವ ಸಿದ್ಧಾರ್ಥ, ಶೇ.18ರಷ್ಟು ಪಾಲು ಹೊಂದಿದ್ದಾರೆ. ಇದನ್ನು ಗರಿಷ್ಠ ಶೇ.26ಕ್ಕೆ ಏರಿಸಿಕೊಳ್ಳುವ ಸಾಧ್ಯತೆಯಿದೆ. ಕೋಟಕ್ ಮಹೀಂದ್ರಾ ಸೇರಿದಂತೆ ಇತರೆ ಬ್ಯಾಂಕ್ ಗಳಿಂದ 200 ಕೋಟಿ ರು ಸಾಲ ಪಡೆದಿರುವ ಸಿದ್ದಾರ್ಥ, ಎಲ್ಲವನ್ನೂ ಕಾಫಿಡೇ ಮೇಲೆ ಸುರಿಯುವ ಸಾಧ್ಯತೆಯಿದೆ.
ಜೊತೆಗೆ ತಮ್ಮ Way2Wealth(ರೀಟೈಲ್ ಬ್ರೊಕರೇಜ್ ಬಿಸಿನೆಸ್) ಈ ವರ್ಷ ಮತ್ತೊಮ್ಮೆ pan-india ಅನ್ನು 300 ಕೋಟಿ ನೀಡಿ ಖರೀದಿಲು ಯತ್ನಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಒಟ್ಟಾರೆ 200 ರಿಂದ 300 ಹೊಸ ಕೆಫೆಗಳು ತಲೆ ಎತ್ತಲಿದೆ. 1,200 ಸಿಸಿಡಿಗಳು ಈಗಷ್ಟೇ ಮಾರುಕಟ್ಟೆಗೆ ಅಂಬೆಗಾಲಿಡಿತ್ತಿರುವ ಅಮೆರಿಕದ ದೈತ್ಯ ಶಿಶು ಸ್ಟಾರ್ ಬಕ್ಸ್ ಮೇಲೆ ಮುಗಿ ಬೀಳಲಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications