ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಲೋಕಾ ಚಂದ್ರಶೇಖರಯ್ಯ ನೇಮಕ ಢಮಾರ್

By Srinath
|
Google Oneindia Kannada News

upalokayukta-chandrashekaraiah-appointment-quashed-hc
ಬೆಂಗಳೂರು, ಏ.3: ರಾಜ್ಯದ ಎರಡನೆಯ ಉಪ ಲೋಕಾಯುಕ್ತರಾಗಿ ನ್ಯಾ. ಚಂದ್ರಶೇಖರಯ್ಯ ಮುಂದುವರಿಯುವುದ ಬೇಡ ಎಂದು ನ್ಯಾ. ಎನ್‌. ಕುಮಾರ್‌ ಮತ್ತು ನ್ಯಾ. ಎಚ್‌.ಎಸ್‌. ಕೆಂಪಣ್ಣ ಅವರ ವಿಭಾಗೀಯ ಪೀಠ ಆದೇಶಿಸಿದೆ.

ಇದರಿಂದ ರಾಜ್ಯ ಸರಕಾರಕ್ಕೆ ಮತ್ತೆ ಮುಖಭಂಗವಾಗಿದೆ. ಕಳೆದ ವಾರ ಶಂಕರ ಬಿದರಿ ನೇಮಕದಲ್ಲಿ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದ ಮುಖ್ಯಮಂತ್ರಿ ಸದಾನಂದಗೌಡ ಸರಕಾರಕ್ಕೆ ಹೈಕೋರ್ಟಿನಿಂದ ಮತ್ತೊಮ್ಮೆ ಕಪಾಳಮೋಕ್ಷವಾಗಿದೆ.

ಈಗಾಗಲೇ 7 ತಿಂಗಳಿಂದ ಕರ್ನಾಟಕ ಲೋಕಾಯುಕ್ತ ಸ್ಥಾನ ಖಾಲಿ ಬಿದ್ದಿದೆ. ಇನ್ನು, ಇಬ್ಬರು ಉಪ ಲೋಕಾಯುಕ್ತರ ಪೈಕಿ ಇದೀಗ ನ್ಯಾ. ಚಂದ್ರಶೇಖರಯ್ಯ ಅವರ ನೇಮಕವನ್ನೂ ಕೋರ್ಟ್ ಅನೂರ್ಜಿತಗೊಳಿಸಿದೆ.

ರಾಜ್ಯ ಎರಡನೇ ಉಪಲೋಕಾಯುಕ್ತ ಸ್ಥಾನಕ್ಕೆ ನ್ಯಾ.ಚಂದ್ರಶೇಖರಯ್ಯ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿದ ಆದೇಶ ಪ್ರಶ್ನಿಸಿ, ವಕೀಲ ಆರ್. ಆನಂದ ಮೂರ್ತಿ ಮತ್ತು ಸಿ. ಜಾಣಕೆರೆ ಕೃಷ್ಣ ಅವರು 2 ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

English summary
The Karnataka High Court division bench sets aside the appointment of Justice Chandrashekaraiah as Karnataka's second Upa Lokayukta. Another blow to BJP government which recommended "tainted" judge for the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X