ಇನ್ಫಿ ಸುಧಾಮೂರ್ತಿ ವೈಷ್ಣೋದೇವಿ ಟ್ರಸ್ಟ್ ಗೆ ನೇಮಕ

ಮತ್ತೊಬ್ಬ ಕನ್ನಡಿಗ, ದೆಹಲಿ ಮೆಟ್ರೋ ನಿಗಮದ ಮಾಜಿ ಅಧ್ಯಕ್ಷ ಇ. ಶ್ರೀಧರನ್ ಅವರಿಗೂ ಈ ಪ್ರತಿಷ್ಠಿತ ಮಂಡಳಿಯನ್ನು ಅಲಂಕರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಎನ್.ಎನ್. ವೋಹ್ರಾ ಅವರು ವೈಷ್ಣೋದೇವಿ ಧರ್ಮದರ್ಶಿ ಮಂಡಳಿಯನ್ನು ಮಂಗಳವಾರ ಪುನರ್ ರಚನೆ ಮಾಡಿದ್ದಾರೆ.
ಒಟ್ಟು 6 ಸದಸ್ಯರ ಸಮಿತಿಗೆ ನೇಮಗೊಂಡ ಇತರೆ ಖ್ಯಾತನಾಮರು: ಖ್ಯಾತ ಸಂತೂರ್ ವಾದಕ ಶಿವಕುಮಾರ್ ಶರ್ಮಾ, ಜಮ್ಮು ಕೇಂದ್ರೀಯ ವಿವಿ ಕುಲಸಚಿವ ಎಸ್ಎಸ್ ಬೋರಿಯಾ, ಮಾಜಿ ಡಿಜಿಪಿ ಅಶೋಕ್ ಭಾನ್, ಜ-ಕಾ ಲೋಕಸೇವಾ ಆಯೋಗದ ಸದಸ್ಯ ಎಚ್ಎಲ್ ಮಾಯಿನಿ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀ ಮಾತಾ ವೈಷ್ಣೋದೇವಿ ಟ್ರಸ್ಟ್ ಧರ್ಮದರ್ಶಿ ಮಂಡಳಿ (SMVDSB) ಸಿಇಒ ನವೀನ್ ಕುಮಾರ್ ಚೌಧರಿ ತಿಳಿಸಿದ್ದಾರೆ.












Click it and Unblock the Notifications