ಒಂಬತ್ತು ಒಂಬತ್ತು ಒಂಬತ್ತು ತೋಳ ಹಳ್ಳಕ್ಕೆ ಬಿತ್ತು!

ಮುಖ್ಯಮಂತ್ರಿ ಸದಾನಂದಗೌಡರನ್ನು ಖುರ್ಚಿಯಿಂದ ಕೆಳಗುರುಳಿಸಬೇಕೆಂಬ ಮಾಜಿ ಸಿಎಂ ಯಡಿಯೂರಪ್ಪ ಅವರ ಮಾಸ್ಟರ್ ಪ್ಲಾನಿಗೆ ಹೈಕಮಾಂಡ್ ತೆಗದುಕೊಂಡಿರುವ ನಿರ್ಧಾರ ನೋಡಿದರೆ ಸದ್ಯಕ್ಕೆ ಯಡಿಯೂರಪ್ಪ ಗದ್ದುಗೆಗೇರುವುದು ಅನುಮಾನ ಅನುಮಾನ.
'ತಕ್ಷಣಕ್ಕೆ ಛುಪ್ ಹೋ ಯಡಿಯೂರಪ್ಪ ಜೀ' ಎಂದು ಗಡ್ಕರಿ ಪ್ರೀತಿಯಿಂದ ಗದರಿಕೊಂಡಿರುವುದನ್ನು ಕೇಳಿ ಯಡಿಯೂರಪ್ಪ ಪಟಾಲಂ ನಿಜಕ್ಕೂ ಆನಂದಭರಿತವಾಗಿದೆ. 'ಅತ್ತ constitutional crisis ಸೃಷ್ಟಿಯಾಗಬಾರದು ಎಂದು ಗಡ್ಕರಿ ಗದರಿಕೊಂಡಿದ್ದಾರೆ ಅಷ್ಟೇ' ಎಂದು ಸಮಾಧಾನ ಪಟ್ಟುಕೊಂಡಿದೆ. ಆದರೆ ವರಿಷ್ಠರ ರಾಜಕೀಯ ಸಮೀಕರಣವೇ ಬೇರೆಯಾಗಿದೆ.
ಆಯ್ತು ಬಜೆಟ್ ಮಂಡಿಸಿಕೊಳ್ಳಲಿ. ಆದರೆ ಅದಾಗುತ್ತಿದ್ದಂತೆ ಸಿಎಂ ಕುರ್ಚಿಯಿಂದ ಅವಯ್ಯನನ್ನು ಇಳಿಸಿ ಎನ್ನುತ್ತಿರುವ ಯಡಿಯೂರಪ್ಪಗೆ ಇಂದು (ಮಾರ್ಚ್ 20) ಮತ್ತು ನಾಳೆ (ಮಾರ್ಚ್ 21) ಮಹತ್ವದ ದಿನಗಳಾಗಿವೆ. ಗಣಿ ಅಕ್ರಮದ ಬಗ್ಗೆ ಸಿಇಸಿ ಮುಂದೆ ಯಡಿಯೂರಪ್ಪ ಪರ ಅಡ್ವೊಕೇಟ್ ಅಶೋಕ್ ಹಾರ್ನಳ್ಳಿ ವಕಾಲತ್ತು ವಹಿಸಲಿದ್ದಾರೆ. ಅಲ್ಲೇನಾದರೂ ಎಡವಟ್ಟಾದರೆ... ಹೈಕಮಾಂಡ್ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ.
ನಾಳೆ ಸದಾನಂದಗೆ ಡಬ್ಕುಡಬಲ್?: ಇನ್ನು, ನಾಳೆ ಉಡುಪಿ ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯಲ್ಲಿ ಸದಾನಂದಗೌಡರ candidate ಗೆದ್ದು ಬಿಟ್ಟರೆ ಅದು ಖುದ್ದು ಸದಾನಂದಗೌಡರ ಗೆಲುವಾಗಲಿದೆ. ಈ ಲೆಕ್ಕಾಚಾರದಲ್ಲೇ ಅಂದು ಯಡಿಯೂರಪ್ಪನವರ ಹಿತಶತ್ರು ಅನಂತ್ ಹೀಗೆ ಹೇಳಿದ್ದು - ಸದಾನಂದಗೌಡರ ನಾಯಕತ್ವದಲ್ಲೇ ಉಡುಪಿ ಚಿಕ್ಕಮಗಳೂರು ಉಪಚುನಾವಣೆ ಎದುರಿಸುತ್ತಿದ್ದೇವೆ ಎಂದು ಪಲುಕಿದ್ದು.
ಅತ್ತ, 'ದೂರದೃಷ್ಟಿ'ಯ ಅನಂತು ಹಾಗೆ ಹೇಳುತ್ತಿದ್ದಂತೆ ಇತ್ತ ಸದಾನಂದರೂ 'ಕಳಂಕ ಹೊತ್ತ' ಯಡಿಯೂರಪ್ಪಜೀಗೆ ಛೀ ಹಚ್ಚಾ ಅಂದಿದ್ದು. ಅಲ್ಲಿಗೆ ನಾಳೆಯ ಚುನಾವಣೆ ಫಲಿತಾಂಶ ಬಿಜೆಪಿ ಪರವಾದರೆ ಸದಾನಂದಗೆ ಡಬ್ಕುಡಬಲ್. ಇತ್ತ ಮಹತ್ವಾಕಾಂಕ್ಷಿ ಬಜೆಟ್ ಮಂಡನೆ ಸಾಂಗೋಪಾಂಗವಾಗಿ ನೆರವೇರಲಿದೆ. ಅತ್ತ, ಸುನಿಲ್ ಕುಮಾರ್ ರೂಪದಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಂಗೂ ಆಗುತ್ತದೆ.
ಅದೇ ಧೈರ್ಯದಲ್ಲಿ ವರಿಷ್ಠರ ಮೂಲಕ ಸುಪಾರಿ ನೀಡಿ 'ಯಡಿಯೂರಪ್ಪಗೆ ತೂ ದಾಂಡ್ ತು ಬದ್ ಮೈ ರೆಡಿ' ಎಂದು ಸದಾನಂದರು ಛಂಗನೆ ಹಾರುತ್ತಾರೆ. ಇನ್ನು, ಅಖಂಡ ಮೌನಮುನಿ ಅಡ್ವಾನಿಯೂ ಬೆಂಕಿಯುಗಳಿದರೆ ಯಡಿಯೂರಪ್ಪ ಹಳ್ಳಕ್ಕೆ ಬಿದ್ದಂತೆ...
ಆದರೆ ಲಕ್ಕು ಯಡಿಯೂರಪ್ಪ ಅವರತ್ತ ಗುದ್ದಿಕೊಂಡು ಬಂದರೆ ಗುಲ್ಬರ್ಗಾದ ಮಾಣಿಕೇಶ್ವರಿ ದೇವಿಗೂ ಸದಾನಂದರನ್ನು ಕಾಪಾಡೊಕ್ಕೆ ಅಗೊಲ್ಲ. 'ಈಗಾಗ್ಲೇ ಬಜೆಟ್ ಮಂಡನೆಗೆ ಅವಕಾಶ ನೀಡಿದ್ದೇ ಜಾಸ್ತಿಯಾಯ್ತು. ನಡೀತಿರು ಇನ್ನು' ಎಂದು ಯಡಿಯೂರಪ್ಪ ಘರ್ಜಿಸುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗುತ್ತಾ?
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications