ರೆಡ್ಡಿ ಹಲಸೂರು ಗೇಟ್ ಠಾಣೆಯಲ್ಲಿ, ಮುಂದೇನು?

ಸರಿಯಾಗಿ 10 ಗಂಟೆಯ ವೇಳೆಗೆ ಠಾಣೆಯಲ್ಲೇ ಕಾನೂನುಪ್ರಕಾರ ರೆಡ್ಡಿ ಆರೋಗ್ಯ ತಪಾಸಣೆ ನಡೆಯಲಿದೆ. ಅದಾದ ಬಳಿಕ ಕೂಗಳತೆಯಲ್ಲಿರುವ ಬೆಂಗಳೂರಿನ ನೃಪತುಂಗ ರಸ್ತೆಯ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟಿಗೆ ಹಾಜರುಪಡಿಸಲಿದ್ದಾರೆ. ಟ್ರಾಫಿಕ್ ರೂಲ್ಸ್ ಅನ್ನು ಅರೆಗಂಟೆ ಪಕ್ಕಕ್ಕಿಟ್ಟು ಪೊಲೀಸ್ ದಂಡಿನೊಂದಿಗೆ ರೆಡ್ಡಿಯನ್ನು ಕಾಲ್ನಡಿಗೆಯಲ್ಲೇ ಕೋರ್ಟಿಗೆ ಕರೆದೊಯ್ಯಲಿದ್ದಾರೆ.
ನ್ಯಾಯಾಧೀಶರು ಯಾರು?: ಪ್ರಸ್ತುತ, ಬೆಂಗಳೂರು ಸಿಬಿಐ ವಿಶೇಷ ಕೋರ್ಟಿ ನ್ಯಾಯಮೂರ್ತಿಯಾಗಿರುವವರು ಬಿಎ ಅಂಗಡಿ. ಅವರೆದುರು ರೆಡ್ಡಿ ಹಾಜರ್. ಮುಂದ? ರೆಡ್ಡಿ ನ್ಯಾ. ಅಂಗಡಿ ಅವರೆದುರು ಹಾಜರಾಗುತ್ತಿದ್ದಂತೆ ರೆಡ್ಡಿ ಪರ ವಕೀಲರು ಮೊಟ್ಟಮೊದಲನೆಯದಾಗಿ ಜಾಮೀನು ಅರ್ಜಿ ಸಲ್ಲಿಸುತ್ತಾರೆ. ಆಗ ನ್ಯಾ. ಅಂಗಡಿಯವರು ರೆಡ್ಡಿಗೆ ಜೈಲೋ, ಬೇಲೋ ಅಥವಾ ಸಿಬಿಐ ಕಸ್ಟಡಿಯೋ ಎಂಬುದನ್ನು ನಿರ್ಧರಿಸುತ್ತಾರೆ. ಅಥವಾ ರೆಡ್ಡಿ ನಾಟಕಕ್ಕೆ ತಾತ್ಕಾಲಿಕ ತೆರೆ ಎಳೆದು, ವಿಚಾರಣೆಯನ್ನು ಮುಂದೂಡಬಹುದು.
ವಾಹನ ಸವಾರರೇ ಕಾರ್ಪೊರೇಶನ್ ಕಡೆ ಇಂದು ಹೋಗಬೇಡಿ: ಈ ಮಧ್ಯೆ, ಪೊಲೀಸರಿಗೆ ರೆಡ್ಡಿ ಬೆಂಬಲಿಗರನ್ನು ನಿಯಂತ್ರಿಸುವುದು ಹರಸಾಹಸವಾಗಿದೆ. ನ್ಯಾಯಾಲಯದ ಸುತ್ತಮುತ್ತ ರೆಡ್ಡಿ ಬೆಂಬಲಿಗರು ಜಮಾಯಿಸುತ್ತಿದ್ದಾರೆ. ಆದ್ದರಿಂದ ಬೆಂಗಳೂರಿನ ವಾಹನ ಸವಾರರು ಕಾರ್ಪೊರೇಶನ್, ಹಡ್ಸನ್ ಸರ್ಕಲ್ ಕಡೆ ಇಂದು ಹೋಗಬೇಡಿ.












Click it and Unblock the Notifications