ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ಡಿ ಹಲಸೂರು ಗೇಟ್ ಠಾಣೆಯಲ್ಲಿ, ಮುಂದೇನು?

By Srinath
|
Google Oneindia Kannada News

reddy-lodged-in-ulsoor-gate-station-what-next
ಬೆಂಗಳೂರು, ಮಾ.2: ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಡ್ಡಿ ರೂಪದಲ್ಲಿ ಮೊದಲ ಬಂಧನವಾಗಿದೆ. ಪ್ರಕರಣದ ಪ್ರಧಾನ ಆರೋಪಿ ಗಣಿಧಣಿ ಜನಾರ್ದನ ರೆಡ್ಡಿ ಸದ್ಯ ರಾಜಧಾನಿಯ ಹೃದಯಭಾಗದಲ್ಲಿ ದಣಿವಾರಿಸಿಕೊಳ್ಳುತ್ತಿದ್ದಾರೆ. ಮುಂದೇನು? ಬೆಂಗಳೂರು ಸಿಬಿಐನ ಮುಖ್ಯಸ್ಥ ಆರ್. ಹಿತೇಂದ್ರ ಕುಮಾರ್ ಮುಂದೇನು ಮಾಡಲಿದ್ದಾರೆ. ಕೋರ್ಟ್ ಗಡುವಿನ ಪ್ರಕಾರ ಬೆಳಗ್ಗೆ 11 ಗಂಟೆಯ ವೇಳೆಗೆ ಪ್ರಕರಣದ ಮೊದಲ ಆರೋಪಿ ರೆಡ್ಡಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾಗಿದೆ. ಅದಕ್ಕಾಗಿ ...

ಸರಿಯಾಗಿ 10 ಗಂಟೆಯ ವೇಳೆಗೆ ಠಾಣೆಯಲ್ಲೇ ಕಾನೂನುಪ್ರಕಾರ ರೆಡ್ಡಿ ಆರೋಗ್ಯ ತಪಾಸಣೆ ನಡೆಯಲಿದೆ. ಅದಾದ ಬಳಿಕ ಕೂಗಳತೆಯಲ್ಲಿರುವ ಬೆಂಗಳೂರಿನ ನೃಪತುಂಗ ರಸ್ತೆಯ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿರುವ ಸಿಬಿಐ ವಿಶೇಷ ಕೋರ್ಟಿಗೆ ಹಾಜರುಪಡಿಸಲಿದ್ದಾರೆ. ಟ್ರಾಫಿಕ್ ರೂಲ್ಸ್ ಅನ್ನು ಅರೆಗಂಟೆ ಪಕ್ಕಕ್ಕಿಟ್ಟು ಪೊಲೀಸ್ ದಂಡಿನೊಂದಿಗೆ ರೆಡ್ಡಿಯನ್ನು ಕಾಲ್ನಡಿಗೆಯಲ್ಲೇ ಕೋರ್ಟಿಗೆ ಕರೆದೊಯ್ಯಲಿದ್ದಾರೆ.

ನ್ಯಾಯಾಧೀಶರು ಯಾರು?:
ಪ್ರಸ್ತುತ, ಬೆಂಗಳೂರು ಸಿಬಿಐ ವಿಶೇಷ ಕೋರ್ಟಿ ನ್ಯಾಯಮೂರ್ತಿಯಾಗಿರುವವರು ಬಿಎ ಅಂಗಡಿ. ಅವರೆದುರು ರೆಡ್ಡಿ ಹಾಜರ್. ಮುಂದ? ರೆಡ್ಡಿ ನ್ಯಾ. ಅಂಗಡಿ ಅವರೆದುರು ಹಾಜರಾಗುತ್ತಿದ್ದಂತೆ ರೆಡ್ಡಿ ಪರ ವಕೀಲರು ಮೊಟ್ಟಮೊದಲನೆಯದಾಗಿ ಜಾಮೀನು ಅರ್ಜಿ ಸಲ್ಲಿಸುತ್ತಾರೆ. ಆಗ ನ್ಯಾ. ಅಂಗಡಿಯವರು ರೆಡ್ಡಿಗೆ ಜೈಲೋ, ಬೇಲೋ ಅಥವಾ ಸಿಬಿಐ ಕಸ್ಟಡಿಯೋ ಎಂಬುದನ್ನು ನಿರ್ಧರಿಸುತ್ತಾರೆ. ಅಥವಾ ರೆಡ್ಡಿ ನಾಟಕಕ್ಕೆ ತಾತ್ಕಾಲಿಕ ತೆರೆ ಎಳೆದು, ವಿಚಾರಣೆಯನ್ನು ಮುಂದೂಡಬಹುದು.

ವಾಹನ ಸವಾರರೇ ಕಾರ್ಪೊರೇಶನ್ ಕಡೆ ಇಂದು ಹೋಗಬೇಡಿ: ಈ ಮಧ್ಯೆ, ಪೊಲೀಸರಿಗೆ ರೆಡ್ಡಿ ಬೆಂಬಲಿಗರನ್ನು ನಿಯಂತ್ರಿಸುವುದು ಹರಸಾಹಸವಾಗಿದೆ. ನ್ಯಾಯಾಲಯದ ಸುತ್ತಮುತ್ತ ರೆಡ್ಡಿ ಬೆಂಬಲಿಗರು ಜಮಾಯಿಸುತ್ತಿದ್ದಾರೆ. ಆದ್ದರಿಂದ ಬೆಂಗಳೂರಿನ ವಾಹನ ಸವಾರರು ಕಾರ್ಪೊರೇಶನ್, ಹಡ್ಸನ್ ಸರ್ಕಲ್ ಕಡೆ ಇಂದು ಹೋಗಬೇಡಿ.

English summary
The Associated Mining Company (AMC) scamster Janardhan Reddy arrives in Bangalore on Mar 3 at 4 am amid tight security. He is lodged in Ulsoor gate station what next?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X