ರಾಜ್ಯಪಾಲ ರೋಸಯ್ಯ 'ಡಿನೋಟಿಫಿಕೇಶನ್' ಸಾಧ್ಯತೆ

denotifify-tn-governor-rosaiah-telangana-advocates
ಹೈದರಾಬಾದ್, ಫೆ.28: ನಗರದ ಅಮೀರ್ ಪೇಟೆಯಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ನಿವೇಶನದ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯಪಾಲ ಕೆ. ರೋಸಯ್ಯ ಅವರನ್ನು ಹುದ್ದೆಯಿಂದ ಡಿನೋಟಿಫೈ ಮಾಡಿ ಎಂದು ತೆಲಂಗಾಣ ವಕೀಲರ ಸಂಘ ರಾಷ್ಟ್ರಪತಿ ಪ್ರತಿಭಾ ಪಾಟೀಲರಿಗೆ ಮೊರೆಯಿಟ್ಟಿದೆ.

ಅಮೀರಪೇಟೆಯ ಮೈತ್ರಿವನಂನಲ್ಲಿ ನೂರಾರು ಕೋಟ್ಯಂತರ ರು ಮೌಲ್ಯದ 9.14 ಎಕರೆ ಜಾಗದ ಡಿನೋಟಿಫಿಕೇಶನ್ ಹಗರಣದಲ್ಲಿ ಕೆ. ರೋಸಯ್ಯ ಆಪಾದಿತರಾಗಿದ್ದಾರೆ. ಈ ಸಂಬಂಧ ಇಬ್ಬರು ಐಎಎಸ್ ಅಧಿಕಾರಿಗಳು ಸಲ್ಲಿಸಿರುವ ದಾಖಲೆ ಪತ್ರಗಳು ಮತ್ತಿತರ ದಾಖಲೆಗಳನ್ನು ಸಂಘವು ರಾಷ್ಟ್ರಪತಿಗೆ ಸಲ್ಲಿಸಿದೆ.

ಈ ಮಧ್ಯೆ, 2 ಜಿ ಹಗರಣದಲ್ಲಿ ಸುಪ್ರೀಂಕೋರ್ಟ್ ಹೇಳಿರುವಂತೆ ಸಾರ್ವಜನಿಕ ಆಸ್ತಿಪಾಸ್ತಿ ಕಬಳಿಸುವ ಅಧಿಕಾರಸ್ಥ ಮಂದಿಯನ್ನು ವಿಚಾರಣೆಗೊಳಪಡಿಸಲು ರಾಷ್ಟ್ರಪತಿಗಳ ಅನುಮತಿ ಅಗತ್ಯವಿಲ್ಲ ಎಂಬ ವಿಚಾರವನ್ನು ಸಂಘದ ಪರ ವಕೀಲ ಟಿ. ಶ್ರೀರಂಗರಾವ್ ಎಸಿಬಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ವಿಚಾರಣೆಯನ್ನು ಕೋರ್ಟ್ ಮಾರ್ಚ್ 2ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ಐಎಎಸ್ ಅಧಿಕಾರಿಗಳಾದ ಬಿಪಿ ಆಚಾರ್ಯ ಮತ್ತು ಟಿ. ಸನ್ಯಾಸಿ ಅಪ್ಪಾರಾವ್ ಅವರು ನ್ಯಾಯಾಲಯದಲ್ಲಿ ಹಾಜರಾಗಿ, ನಿವೇಶನವನ್ನು ಡಿನೋಟಿಫೈ ಮಾಡಬಾರದು ಎಂದು ಅಂದಿನ ಮುಖ್ಯಮಂತ್ರಿ ರೋಸಯ್ಯ ಅವರಿಗೆ ಸ್ಪಷ್ಟವಾಗಿ ಸಲಹೆ ನೀಡಿದ್ದೆವು ಎಂದು ದಾಖಲೆಗಳ ಸಮೇತ ಕೋರ್ಟಿನಲ್ಲಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+