ಯಡಿಯೂರಪ್ಪ ಬರ್ತ್ ಡೆ ಫ್ಲಾಪ್ ಷೊ: ಶ್ರೀರಾಮುಲು

ಯಡಿಯೂರಪ್ಪಗೆ ಬೆಂಬಲಿಗ ಶಾಸಕರ ಸಂಖ್ಯೆ ಕಡಿಮೆಯಾಗುತ್ತಿದೆ. ಜನ ಬೆಂಬಲವೂ ಇಲ್ಲವಾಗುತ್ತಿದೆ. ಅವರಿಂದ ಲಿಂಗಾಯಿತರಿಗೆ ಅನ್ಯಾಯವಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ನಾವು ಪ್ರಯತ್ನಸಿದ್ದೆವು. ಆದರೆ ಯಡಿಯೂರಪ್ಪ ಅದಕ್ಕೆ ಅಡ್ಡಗಾಲು ಹಾಕಿದರು ಎಂದು ರಾಮುಲು ಗಂಭೀರ ಆರೋಪ ಮಾಡಿದರು.
ಹೈದರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ಧಿ ಪಡಿಸುವಲ್ಲಿ ಸರಕಾರಗಳು ವಿಫಲವಾಗಿವೆ. ಹೈದರಾಬಾದ್-ಕರ್ನಾಟಕ ಭಾಗಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ ಮಾರ್ಚ್ 13, 14 ರಂದು ಗದಗದಲ್ಲಿ ಉಪವಾಸ ತಾವು ಉಪವಾಸ ಕೈಗೊಳ್ಳುವುದಾಗಿ ರಾಮುಲು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications