ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜಾಪುರ ಯುವ ಕಾಂಗ್ರೆಸ್ ಮುಖಂಡನ ಕೈ ತುಂಡು
ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ಅಸಿಫ್ ಇನಾಂದಾರ್ ಎಂಬ ವ್ಯಕ್ತಿ ನಗರ ಬಸ್ ನಿಲ್ದಾಣದಿಂದ ಕೋರ್ಟಿಗೆ ಹೋಗುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಆತನ ಮೇಲೆರೆಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಆತನ ಎಡಮುಂಗೈ ಸಂಪೂರ್ಣ ತುಂಡಾಗಿದ್ದು, ಬಲಗೈಗೂ ಗಂಭೀರ ಗಾಯಗಳಾಗಿವೆ.
ಹಳೆ ವೈಷಮ್ಯವೇ ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಾಗುವ ಬಗ್ಗೆ ಪೊಲೀಸರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದರೂ ಅವರು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಅಸಿಫ್ನ ಸಂಬಂಧಿಗಳು ದೂರಿದ್ದಾರೆ.
Comments
English summary
Miscreants have chopped off hands of youth Congress leader Asif Inamdar in Bijapur in daylight. Police have said that, old rivalry is the main reason behind the crime.
Story first published: Wednesday, February 22, 2012, 14:27 [IST]