ಯಾದಗಿರಿ : ಕೃಷಿ ಇಲಾಖೆಯಿಂದ ರಾಷ್ಟ್ರಧ್ವಜಕ್ಕೆ ಅವಮಾನ

ಯಾದಗಿರಿಯ ಸಹಾಯಕ ಕೃಷಿ ಅಧಿಕಾರಿ ಕಾರ್ಯಲಯದ ಮುಂದೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಧಕ್ಕೆ ರಾಷ್ಟ್ರಧ್ವಜ ಹಾರಾಡುತ್ತಿತ್ತು. ಮೂರು ದಿನಗಳ ಶೋಕಾಚರಣೆ ನಿನ್ನೆನೆ ಮುಕ್ತಾಯವಾಗಿತ್ತು. ಸಾರ್ವಜನಿಕರು ಈ ಸಂಗತಿಯನ್ನು ಸಹಾಯಕ ಕೃಷಿ ಅಧಿಕಾರಿ ರಾಜಣ್ಣ ಗಮನಕ್ಕೆ ತಂಗಾದ ಕಕ್ಕಾಬಿಕ್ಕಿಯಾದ ರಾಜಣ್ಣ ಸಿಬ್ಬಂದಿಗಳ ನೆರವಿನಿಂದ ರಾಷ್ಟ್ರಧ್ವಜವನ್ನು ಕಾಲಲ್ಲಿ ಚಪ್ಪಲಿ ಹಾಕಿಕೊಂಡೇ ಕೆಳಗೆ ಇಳಿಸಿದ್ದಾರೆ.
ರಾಷ್ಟ್ರಧ್ವಜವನ್ನು ಕೆಳಗೆ ಇಳಿಸುವಾಗ ಅದರದೆ ಆದ ಗೌರವ ಮತ್ತು ನೀತಿ ನಿಯಮಗಳು ಇರುತ್ತವೆ. ಆದರೆ, ಬೇಜವಬ್ದಾರಿ ಅಧಿಕಾರಿಗಳು ನಿಯಮಗಳನ್ನು ಪಾಲಿಸದೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇದು ಇಡೀ ನಾಗರಿಕ ಸಮುದಾಯ ತಲೆ ತಗಿಸುವಂತೆ ಮಾಡಿದೆ. ಇನ್ನು ಮುಂದಾದರೂ ಇಂತಹ ಅಚಾತುರ್ಯ ನಡೆಯದಂತೆ ನೋಡಿಕೊಳ್ಳಲಿ ಎಂದು ನಾಗರಿಕರು ಹಿಡಿಶಾಪ ಹಾಕಿದ್ದಾರೆ.











Click it and Unblock the Notifications