ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ಆಕ್ರಮ ಆಸ್ತಿ: ಶ್ರೀಲಕ್ಷ್ಮಿಯೂ ವಿಚಾರಣೆಗೆ

By Srinath
|
Google Oneindia Kannada News

jagan-assets-cbi-seeks-court-permittion-grill-srilakshmi
ಹೈದರಾಬಾದ್, ಫೆ. 15: ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಧಿನಾಯಕ ಜಗನ್ ಮೋಹನ್ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಮಾಜಿ ಗಣಿ ಸಚಿವ ವಿಡಿ ರಾಜಗೋಪಾಲ್ ಮತ್ತು ಅಮಾನತುಗೊಂಡ ಹಿರಿಯ ಎಎಸ್ಎಸ್ ಅಧಿಕಾರಿ ವೈ ಶ್ರೀಲಕ್ಷ್ಮಿ ಅವರನ್ನು ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಒಪ್ಪಿಸಿ ಎಂದು ಸಿಬಿಐ ಕೋರ್ಟಿಗೆ ಮೊರೆಹೋಗಿದೆ. ಪ್ರಸ್ತುತ, ಇವರಿಬ್ಬರೂ ಚಂಚಲಗೂಡ ಜೈಲಿನಲ್ಲಿ ವಿಶೇಷ ದರ್ಜೆಯ ವಿಚಾರಧೀನ ಕೈದಿಗಳಾಗಿದ್ದಾರೆ. ಆದರೆ ಅದು ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ್ದು.

ಚಂಚಲಗೂಡ ಜೈಲಿನಲ್ಲೇ ಸಿಬಿಐನ ಮೂವರು ಇನ್ಸ್‌ಪೆಕ್ಟರ್ ಗಳು ಇವರಿಬ್ಬರ ವಿಚಾರಣೆ ನಡೆಸುತ್ತಾರೆ. ಇವರಿಬ್ಬರೂ ಜಗನ್ ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಅಧಿಕಾರದಲ್ಲಿದ್ದಾಗ ಅನೇಕ ಕಡತಗಳಿಗೆ ಸಹಿ ಹಾಕಿದ್ದಾರೆ. ಆದ್ದರಿಂದ ಇವರಿಗೆ ಆ ಪ್ರಕರಣದ ಬಗ್ಗೆ ಮಾಹಿತಿಯಿರುತ್ತದೆ. ಆದ್ದರಿಂದ ಇವರಿಬ್ಬರ ಹೆಚ್ಚಿನ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಸಿಬಿಐ ಕೋರಿದೆ.
ನಾಳೆ (ಫೆ. 16) ಸಿಬಿಐ ಕೋರ್ಟ್ ಈ ಬಗ್ಗೆ ತನ್ನ ತೀರ್ಮಾನ ಹೇಳಲಿದೆ.

English summary
The CBI on Tuesday sought the court’s permission to examine the former mines and geology director V.D. Rajagopal and senior IAS officer, Y. Srilakshmi in the Y.S. Jagan Mohan Reddy disproportionate assets case. The court posted the case for February 16 for further hearing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X