ಸವದಿ 'ಅದನ್ನು' ನೋಡುತ್ತಿದ್ದರು ಅಷ್ಟೆ; ಮಾಡುತ್ತಿರಲಿಲ್ಲ!
ಪಣಜಿ,
ಫೆ.10: ವಿಧಾನಸಭೆಯಲ್ಲೇ ಸಚಿವ ಸವದಿ ಸವಿದ ಬ್ಲೂ ಫಿಲಂ ಪ್ರಕರಣದ ಬಗ್ಗೆ ಒಬ್ಬೊಬ್ಬರೂ ಒಂದೊಂದು ವ್ಯಾಖ್ಯಾನ ಮಾಡುತ್ತಿದ್ದಾರೆ. ಆದರೆ ಅತ್ಯಂತ ಆಘಾತಕಾರಿ ವಿಶ್ಲೇಷಣೆ ಮಾಡಿರುವವರು ಗೋವಾದ ಬಿಜೆಪಿ ಸಾರಥಿ ಮನೋಹರ್ ಪಾರಿಕ್ಕರ್. id="toptextpromo">ಒಬ್ಬ
ಶಾಸಕ 'ಅದನ್ನು' ನೋಡಿ ಮೂರ್ಛೆಯೇ ಹೋಗಿಬಿಟ್ಟ ಎಂದು ರೇಣುಕಾಚಾರ್ಯ ಪಡ್ಡೆ ಹೈಕಳುಗಳಂತೆ ಹೇಳಿದ್ದರೆ ಗೋವಾ ವಿಧಾನಸಭೆಯ ವಿರೋಧಪಕ್ಷದ ನಾಯಕ ಪಾರಿಕ್ಕರ್, ಸಚಿವತ್ರಯರು 'ಅದನ್ನು' ನೋಡುತ್ತಿದ್ದರು ಅಷ್ಟೇ; 'ಅದನ್ನು' ಕ್ರಿಯೆರೂಪದಲ್ಲಿ ಮಾಡುತ್ತಿರಲಿಲ್ಲ! ಎಂದು ಅತ್ಯಂತ ನಿರ್ಲಜ್ಜರಾಗಿ ಹೇಳಿದ್ದಾರೆ. ಜತೆಗೆ ಸಚಿವತ್ರಯರಿಂದ ತಕ್ಷಣ ರಾಜೀನಾಮೆ ಪಡೆದಿರುವುದು ಶ್ಲಾಘನಾರ್ಹ. ಅವರನ್ನು ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೇಶದಲ್ಲಿ
ಇದಕ್ಕಿಂತ ಕೆಟ್ಟದ್ದನ್ನು ಮಾಡುವ ಜನರಿದ್ದಾರೆ. ಈ ಕಾಂಗ್ರೆಸ್ ಮಂದಿಯನ್ನೇ ತೆಗೆದುಕೊಳ್ಳಿ. ರಾಷ್ಟ್ರದ ರಾಜಧಾನಿಯಲ್ಲಿ ಒಬ್ಬ ಮಹಿಳೆಯನ್ನು ಪೀಸ್ ಪೀಸ್ ಮಾಡಿ, ತಂದೂರಿಯಲ್ಲಿ ಬೇಯಿಸಿದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮನುಷ್ಯನೊಬ್ಬ ತನ್ನ ಮಡದಿಯ ರುಂಡವನ್ನು ಕತ್ತರಿಸಿ, ಮೊಸಳೆಗೆ ಹಾಕಿದ. ಇನ್ನು, ತಾಜಾ ಆಗಿ ಭನ್ವರಿ ದೇವಿ ಪ್ರಕರಣ ಎಲ್ಲರಿಗೂ ಗೊತ್ತಿರುವುದೇ ಎಂದು ಕರ್ನಾಟಕ ಬಿಜೆಪಿ ಬ್ಲೂ ಬಾಯ್ಸ್ ಗಳನ್ನು ಪಾರಿಕ್ಕರ್ ಸಮರ್ಥಿಸಿಕೊಂಡರು.











Click it and Unblock the Notifications