ಕನ್ನಡ ಎಲ್ಲರಿಗೂ ಕಡ್ಡಾಯವಾಗಲಿ: ಇನ್ಫಿ ಮೂರ್ತಿ

ನಗರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಇನ್ಫಿ ಮೂರ್ತಿ, ಒಂದನೇ ತರಗತಿಯಿಂದ ಕನ್ನಡ ಕಲಿಕೆ ಕಡ್ಡಾಯಗೊಳಿಸಬೇಕು. ಅದು ಸಾಧ್ಯವಾಗದಿದ್ದರೆ ಮನೆಯಲ್ಲಿ ಮಕ್ಕಳಿಗೆ ಚಿಕ್ಕಂದಿನಿಂದ ಕನ್ನಡ ಕಲಿಸಿದರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಾಗತೀಕರಣದ ಪ್ರಭಾವದ ಜಗತ್ತು ಇನ್ನಷ್ಟು ಚಿಕ್ಕದಾಗುತ್ತಿದೆ ನಿಜ. ಆದರೆ, ವೃತ್ತಿಪರರಿಗೆ ವ್ಯಕ್ತಿತ್ವ ವಿಕಸನಕ್ಕೆ ಸ್ಥಳೀಯ ಸಂಸ್ಕೃತಿಯ ಬಗ್ಗೆ ಅರಿವಿದ್ದರೆ ಹೆಚ್ಚು ಲಾಭವಾಗುತ್ತದೆ. ವಿಶ್ವದಾದ್ಯಂತ ಪ್ರವಾಸ ಮಾಡಿದ ಮೇಲೆ ನನಗನ್ನಿಸಿದ್ದು, ನಾವು ಕಲಿಯುವುದು ಬಹಳಷ್ಟಿದೆ ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಬೇರೆ ಬೇರೆ ಸಂಸ್ಕೃತಿಯಲ್ಲಿ ಬೆಳೆದ ಜನರಾದರೂ ಒಂದೇ ದೃಷ್ಟಿಕೋನ, ಗುರಿ ಇರುವುದನ್ನು ಕಂಡಿದ್ದೇನೆ, ಅಭಿಪ್ರಾಯ ಮಂಡನೆಯಲ್ಲಿ ವ್ಯತ್ಯಾಸ ಕಂಡು ಬಂದರೂ ಮೂಲ ಆಶಯ ಒಂದೇ ಆಗಿರುತ್ತದೆ. ನಮ್ಮ ಮೂಲ ಸಂಸ್ಕೃತಿ ಉಳಿಸಿಕೊಂಡು ಇತರೆ ಸಂಸ್ಕೃತಿ ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಇನ್ಫಿ ಮೂರ್ತಿ ಹೇಳಿದರು.











Click it and Unblock the Notifications