ಸಲ್ಮಾನ್ ರಶ್ದಿ ಮೇಲೆ ಕ್ರಿಮಿನಲ್ ಕೇಸ್, ಜೈಪುರ ಧಗಧಗ

Salman Rushdie
ಜೈಪುರ, ಜ.23: ವಿವಾದಿತ ಲೇಖಕ ಬ್ರಿಟನ್ ಮೂಲದ ಸಲ್ಮಾನ್ ರಶ್ದಿ ಜೈಪುರದ ಅಂತಾರಾಷ್ಟ್ರ್ರೀಯ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳುವುದು ಖಾತ್ರಿಯಾಗಿದೆ. ಸ್ಥಳೀಯ ಪೊಲೀಸರು ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಮುಸ್ಲಿಮರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ರಶ್ದಿ ಭಾರತಕ್ಕೆ ಬರುವ ಧೈರ್ಯ ಮಾಡುತ್ತಾರೆಯೇ? ಎಂಬ ಪ್ರಶ್ನೆ ಉತ್ತರ ಇಲ್ಲಿದೆ.

ವಿಡಿಯೋ ಮೂಲಕ ಸಾಹಿತ್ಯ ಉತ್ಸವದಲ್ಲಿ ಕಾಣಿಸಿಕೊಳ್ಳುವುದಾಗಿ ಸಲ್ಮಾನ್ ರಶ್ದಿ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದಾರೆ.

ಭಾರತ ಮೂಲದ ರಶ್ದಿಗೆ ಭೂಗತ ಜಗತ್ತಿನಿಂದಲೂ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ರಶ್ದಿ ಈ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ರಾಜಸ್ಥಾನ ಸರ್ಕಾರ ರಶ್ದಿ ಅವರ ಆಸೆಗೆ ತಣ್ಣೀರೆರಚಿದೆ.

ವಿಡಿಯೋ ಮೂಲಕವಾಗಲಿ, ಪ್ರತ್ಯಕ್ಷವಾಗಲಿ ರಶ್ದಿ ಅವರ ಭಾಷಣ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ. 'ರಾಜಸ್ಥಾನ ಪೊಲೀಸರು ವಿನಾಕರಣ ಸಾಹಿತ್ಯೋತ್ಸವದಿಂದ ನನ್ನನ್ನು ದೂರ ಇರಿಸಲು ಯತ್ನಿಸಿದ್ದಾರೆ' ಎಂದು ರಶ್ದಿ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇಸ್ಲಾಂ ಸಂಘಟನೆಗಳ ಆಕ್ರೋಶ: ಸತಾನಿಕ್ ವರ್ಸಸ್ ಎಂಬ ವಿವಾದಿತ ಕೃತಿಯ ಬಗ್ಗೆ ಇಸ್ಲಾಂ ಸಂಪ್ರಾದಾಯವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. 1988ರಲ್ಲಿ ರಶ್ದಿ ಬರೆದ ಈ ಕೃತ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಿಷೇಧಗೊಂಡಿತ್ತು. 1989ರಲ್ಲಿ ಇಸ್ಲಾಂ ಗುರು ಅಯಾತುಲ್ಲ ರುಹೊಲ್ಲ ಖೊಮೈನಿ ಅವರು ಫತ್ವಾ ಹೊರಡಿಸಿ, ರಶ್ದಿ ಸಾವನ್ನು ಬಯಸುತ್ತೇವೆ ಎಂದು ಧಾರ್ಮಿಕ ಕಟ್ಟಳೆ ಹೊರಡಿಸಿದ್ದರು.

ರಶ್ದಿ ಅವರ ಸತಾನಿಕ್ ವರ್ಸರ್ ಸಾಲುಗಳನ್ನು ಓದಿದ ನಾಲ್ವರು ಸಾಹಿತಿಗಳ ಮೇಲೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕೋರ್ಟ್ ಮೇಟ್ಟಿಲೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+