ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಟೋ ಚಾಲಕನ ಪ್ರಾಮಾಣಿಕತೆಗೆ ಏನನ್ನುತ್ತೀರಿ?

By Srinath
|
Google Oneindia Kannada News

auto-driver-returns-5-lakh-what-do-you-say
ಬೆಂಗಳೂರು, ಜ.20: ಸಾರಕ್ಕಿ ಆಟೋ ಚಾಲಕ ಪಾಂಡುರಂಗನೇನೋ ತನ್ನ ಪ್ರಯಾಣಿಕ ಮರೆತು ಬಿಟ್ಟಿದ್ದ 5ಲಕ್ಷ ರು. ಇಡಿಗಂಟನ್ನು ಅವರಿಗೇ ವಾಪಸ್ ನೀಡಿ ಪ್ರಮಾಣಿಕತೆಯ ಶಿಖರ ತಲುಪಿದ್ದಾನೆ. ಆದರೆ ಆತನ ಪ್ರಾಮಾಣಿಕತೆ ಬಗ್ಗೆ ಯಾರು ಏನೆನ್ನುತ್ತಾರೆ!? ಕೇಳೋಣ ಬನ್ನಿ. ನಿಜಕ್ಕೂ interesting ಆಗಿದೆ.

ಹಣ ಕಳೆದುಕೊಂಡ (ಮರಳಿ ಪಡೆದ) ಪ್ರಯಾಣಿಕ ಪವಮಾನಾಚಾರ್ಯರಿಗೆ 'ಪಾಂಡುರಂಗ ಮಹಾತ್ಮೆ'ಯನ್ನು ಬಣ್ಣಿಸಲು ಪದಗಳೇ ಇಲ್ಲ. ಆದರೆ ಕಥಾನಾಯಕ ಪಾಂಡುರಂಗ ಹೇಳುವುದೇನು ಅಂದರೆ ಅವರ ಮಾತುಗಳಲ್ಲೇ ಕೇಳಿ :

'ದುಡಿದು ತಿನ್ನಬೇಕು. ಪರರ ಸೊತ್ತು ಪಾಷಾಣಕ್ಕೆ ಸಮಾನ' ಎಂದು ಬಗೆದು ಹಣ ವಾಪಸ್ ಮಾಡಿದೆ. ಆದರೆ ಅದಕ್ಕೂ ಮುನ್ನ ಎಷ್ಟು ದಿನ ಅಂತ ಆಟೋ ಓಡಿಸ್ತೀಯಾ? ಅನಾಯಾಸಾವಾಗಿ ಸಿಕ್ಕಿದ ಹಣ ತೆಗೆದುಕೊಂಡು ಊರಿಗೆ ಹೋಗಿ ಆರಾಮಾಗಿ ಜೀವನ ನಡೆಸು ಎಂದು 'ಹಿತೈಷಿಗಳು' ಹೇಳಿದರು. ಆದರೆ ಮನಸು ದೃಢವಾಗಿ ನಿರ್ಧರಿಸಿತ್ತು. ಹಣ ಮರಳಿಸು ಎಂದು.

ಆಶ್ಚರ್ಯದ ಸಂಗತಿಯೆಂದರೆ ಒಬ್ಬ ಪೊಲೀಸಪ್ಪ ಹಣ ಯಾಕೆ ವಾಪಸ್ ಕೊಡ್ತೀಯಾ? ನನಗೊಂದು ಲಕ್ಷ ಕೊಟ್ಟು ಉಳಿದಿದ್ದನ್ನು ನೀನೇ ಇಟ್ಕೊಂಡು ಮಜಾ ಮಾಡು' ಎಂದು ಬಿಟ್ಟಿ ಸಲಹೆಯನ್ನೂ ನೀಡಿಬಿಟ್ಟ! ಆದರೆ ನನ್ನ ಮನಸು ಸುತರಾಂ ಒಪ್ಪಲಿಲ್ಲ. ತಾಯಿ ಶಕುಂತಲಾ ಮತ್ತು ಪತ್ನಿ ಪದ್ಮಾ ಸಹ ನನ್ನ ನಿರ್ಧಾರಕ್ಕೆ ಸಾಥ್ ನೀಡಿದರು ಎಂದು ಎದೆಯುಬ್ಬಿಸಿಕೊಂಡು ಪಾಂಡುರಂಗ ಹೇಳುತ್ತಾರೆ.

ಅಷ್ಟೇ ಅಲ್ಲ. ಬೆಳಗ್ಗಿನಿಂದ 'ಪಾಂಡುರಂಗ ಮಹಾತ್ಮೆ' talk of the town ಆಗಿದೆ. ಎಲ್ಲೆಲ್ಲೂ, ಎಲ್ಲರ ಬಾಯಲ್ಲೂ ಪಾಂಡುರಂಗ... ಪಾಂಡುರಂಗ! ಅದೆಲ್ಲ ಸರಿ ನೀವೇನನ್ನುತ್ತೀರಿ !? ವಸಿ ಹೇಳಿ, ಪಾಂಡುರಂಗ ಅಂತಹವರಿಗೆ ಕೇಳಿಸೋಣ. ಇಲ್ಲಿ ಕ್ಲಿಕ್ ಮಾಡಿ

English summary
Bangalore Auto driver returned Rs 5 lakh left behind in his vehicle to the passenger Pavaman Acharya in JP Nagar who left behind the money in his vehicle. The money Panduranga gave back was meant to pay the hospital bill of an accident victim! What do you say about Panduranga's simple honest policy?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X