Get Updates
Get notified of breaking news, exclusive insights, and must-see stories!

ಜೆಡಿಎಸ್: ಮಧು ಬಂಗಾರಪ್ಪ ನೇಮಕಕ್ಕೆ ವಿರೋಧ

why-madhu-bangarappa-appointed-jds-youth-chief
ಬೆಂಗಳೂರು, ಜ. 19: ಜೆಡಿಎಸ್‌ ಯುವ ಘಟಕಕ್ಕೆ ದಿಢೀರ್ ಮಧು (ಬಂಗಾರಪ್ಪ) ಸಿಂಚನವಾಗಿದೆ. ಹಳಿಯಾಳದಲ್ಲಿ ಜನವರಿ 28 ರಂದು ನಡೆಯಲಿರುವ ಸಮಾವೇಶದಲ್ಲಿ ಮಧು ಬಂಗಾರಪ್ಪ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಆದರೆ ಇದಕ್ಕೆ ಕಾರಣವಾದರೂ ಏನೆಂದು ಕೆದಕಿದಾಗ ...

ಮಧು ಬಂಗಾರಪ್ಪ ಅವರತ್ತ ಕಾಂಗ್ರೆಸ್‌ ಬಲೆ ಬೀಸಿತ್ತು ಎಂಬ ಮಾತಿತ್ತು. ಹಾಗಾಗಿ ಮಧು ಕಾಂಗ್ರೆಸ್‌ನತ್ತ ಹಾರುವುದನ್ನು ತಡೆಯಲು ದಿಢೀರಾಗಿ ಅವರನ್ನು ಜೆಡಿ ಎಸ್ ಯುವಘಟಕದ ಅಧ್ಯಕ್ಷ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ರಾಜೇಶ್ ಗುಂಡೂರಾವ್ ಈ ನೇಮಕದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುತೂಹಲದ ಸಂಗತಿಯೆಂದರೆ, ಹಳಿಯಾಳ ಶಾಸಕ ಸುನಿಲ್‌ ಹೆಗಡೆ ಅವರನ್ನು ಇತ್ತೀಚೆಗಷ್ಟೇ ಯುವ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು ಇನ್ನೂ ಅಧಿಕಾರವನ್ನೇ ಸ್ವೀಕರಿಸಿಲ್ಲ. ಅಷ್ಟರೊಳಗೆ ಮಧು ಅವರನ್ನು ಯುವ ಘಟಕದ ಅಧ್ಯಕ್ಷರನ್ನಾಗಿಸಲಾಗಿದೆ. ಬಹುಶಃ ಕಾಂಗ್ರೆಸ್ ಭೀತಿ ಇದಕ್ಕೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಪ್ರಸ್ತುತ ಯುವ ಘಟಕದ ಅಧ್ಯಕ್ಷರಾಗಿದ್ದ ಹಳಿಯಾಳ ಶಾಸಕ ಸುನಿಲ್‌ ಹೆಗಡೆ ಉತ್ತರ ಕನ್ನಡ ಭಾಗದ ಸಂಘಟನೆ ಮತ್ತು ಕ್ಷೇತ್ರದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ. ಹೀಗಾಗಿ, ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+