ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದ ಸದಾನಂದ ಸ್ಥಾನಕ್ಕೆ 'ಅತೃಪ್ತ ಆತ್ಮ' ಸಿಟಿ ರವಿ ಸ್ಪರ್ಧೆ

By Srinath
|
Google Oneindia Kannada News

bjp-may-field-ct-ravi-chikmagalur-lok-sabha
ಬೆಂಗಳೂರು, ಜ.11: ರಾಜ್ಯ ಬಿಜೆಪಿಯಲ್ಲಿ 'ಅತೃಪ್ತ ಆತ್ಮ' ಎಂದು ಕರೆಯಲ್ಪಡುವ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರನ್ನು ಲೋಸಕಭೆಗೆ ಕಳಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಕಳೆದ ಮೂರೂವರೆ ವರ್ಷಗಳಿಂದ ಸಚಿವ ಸ್ಥಾನ ಅಲಂಕರಿಸಲು ಚಾತಕಪಕ್ಷಿಯಂತೆ ಕಾದುಕುಳಿತಿರುವ 'ದತ್ತ ಪೀಠಿ' ರವಿ ಪಕ್ಷದ ವಕ್ತಾರರಾಗಿ ಮಿಂಚಿದ್ದೇ ಬಂತು ಸಚಿವರಾಗುವ ಭಾಗ್ಯ ಒಲಿಯಲೇ ಇಲ್ಲ. ಈ ಬಗ್ಗೆ ಅನೇಕ ಬಾರಿ ಅವರು ತಮ್ಮ ಅತೃಪ್ತಿಯನ್ನು ಪಕ್ಷದ ನೇತಾರರ ಮುಂದೆ ಹೊರಹಾಕಿದ್ದರು.

ಆದರೆ ಇದೀಗ ಡಿವಿ ಸದಾನಂದಗೌಡ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಖಾಲಿಯಾಗಿದೆ. ಈ ಅವಕಾಶ ಬಳಸಿಕೊಂಡು ಸಿಟಿ ರವಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಗೆದ್ದರೆ ರವಿಗೆ ಇದು ಚೊಚ್ಚಲ ಲೋಕಸಭೆ ಪ್ರವೇಶವಾಗಲಿದೆ.

English summary
BJP High command may field CT Ravi in Udupi-Chikmagalur Lok Sabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X