ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಂಸದ ಸದಾನಂದ ಸ್ಥಾನಕ್ಕೆ 'ಅತೃಪ್ತ ಆತ್ಮ' ಸಿಟಿ ರವಿ ಸ್ಪರ್ಧೆ
ಕಳೆದ ಮೂರೂವರೆ ವರ್ಷಗಳಿಂದ ಸಚಿವ ಸ್ಥಾನ ಅಲಂಕರಿಸಲು ಚಾತಕಪಕ್ಷಿಯಂತೆ ಕಾದುಕುಳಿತಿರುವ 'ದತ್ತ ಪೀಠಿ' ರವಿ ಪಕ್ಷದ ವಕ್ತಾರರಾಗಿ ಮಿಂಚಿದ್ದೇ ಬಂತು ಸಚಿವರಾಗುವ ಭಾಗ್ಯ ಒಲಿಯಲೇ ಇಲ್ಲ. ಈ ಬಗ್ಗೆ ಅನೇಕ ಬಾರಿ ಅವರು ತಮ್ಮ ಅತೃಪ್ತಿಯನ್ನು ಪಕ್ಷದ ನೇತಾರರ ಮುಂದೆ ಹೊರಹಾಕಿದ್ದರು.
ಆದರೆ ಇದೀಗ ಡಿವಿ ಸದಾನಂದಗೌಡ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಖಾಲಿಯಾಗಿದೆ. ಈ ಅವಕಾಶ ಬಳಸಿಕೊಂಡು ಸಿಟಿ ರವಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಗೆದ್ದರೆ ರವಿಗೆ ಇದು ಚೊಚ್ಚಲ ಲೋಕಸಭೆ ಪ್ರವೇಶವಾಗಲಿದೆ.
Comments
ಸಿಟಿ ರವಿ ಬಿಜೆಪಿ ಬಿಕ್ಕಟ್ಟು ಭಿನ್ನಮತ ಚಿಕ್ಕಮಗಳೂರು ಆರೆಸ್ಸೆಸ್ ಯಡಿಯೂರಪ್ಪ ಸದಾನಂದ ಗೌಡ ಕೆಎಸ್ ಈಶ್ವರಪ್ಪ ಚುನಾವಣೆ ಬೆಂಗಳೂರು ಬಿಜೆಪಿ ವಿವಾದ ct ravi sadananda gowda rss yediyurappa ks eshwarappa bjp bangalore
English summary
BJP High command may field CT Ravi in Udupi-Chikmagalur Lok Sabha constituency.
Story first published: Wednesday, January 11, 2012, 15:21 [IST]