ಸಂಸದ ಸದಾನಂದ ಸ್ಥಾನಕ್ಕೆ 'ಅತೃಪ್ತ ಆತ್ಮ' ಸಿಟಿ ರವಿ ಸ್ಪರ್ಧೆ

ಕಳೆದ ಮೂರೂವರೆ ವರ್ಷಗಳಿಂದ ಸಚಿವ ಸ್ಥಾನ ಅಲಂಕರಿಸಲು ಚಾತಕಪಕ್ಷಿಯಂತೆ ಕಾದುಕುಳಿತಿರುವ 'ದತ್ತ ಪೀಠಿ' ರವಿ ಪಕ್ಷದ ವಕ್ತಾರರಾಗಿ ಮಿಂಚಿದ್ದೇ ಬಂತು ಸಚಿವರಾಗುವ ಭಾಗ್ಯ ಒಲಿಯಲೇ ಇಲ್ಲ. ಈ ಬಗ್ಗೆ ಅನೇಕ ಬಾರಿ ಅವರು ತಮ್ಮ ಅತೃಪ್ತಿಯನ್ನು ಪಕ್ಷದ ನೇತಾರರ ಮುಂದೆ ಹೊರಹಾಕಿದ್ದರು.
ಆದರೆ ಇದೀಗ ಡಿವಿ ಸದಾನಂದಗೌಡ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರ ಖಾಲಿಯಾಗಿದೆ. ಈ ಅವಕಾಶ ಬಳಸಿಕೊಂಡು ಸಿಟಿ ರವಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಗೆದ್ದರೆ ರವಿಗೆ ಇದು ಚೊಚ್ಚಲ ಲೋಕಸಭೆ ಪ್ರವೇಶವಾಗಲಿದೆ.












Click it and Unblock the Notifications