ತುಮಕೂರಿಗೆ ಬಂದ ಹೇಮಾ:ಸಂತಸದಲ್ಲಿ ಮಿಂದ ಜನ

ನಗರಾಭಿವೃದ್ಧಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ಅವರ ಭಗೀರತ ಪ್ರಯತ್ನದಿಂದಾಗಿ ಯೋಜನೆ ಸಾಕಾರಗೊಂಡಿದ್ದು, ನರಸಾಪುರದ ಬಳಿ ನಿರ್ಮಿಸಿರುವ ಪಂಪ್ ಹೌಸ್ನಲ್ಲಿ ಬಟನ್ ಒತ್ತುವ ಮೂಲಕ ಅವರು ಯೋಜನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಂದಿನ 20 ವರ್ಷಗಳ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿತವಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಎಲ್ಲಾ ಬಡಾವಣೆಗಳ ಜನರು ಹೇಮಾವತಿ ನೀರನ್ನು ಕುಡಿಯಬಹುದಾಗಿದೆ ಎಂದರು.
47 ಕೋಟಿ ರೂ. ಯೋಜನಾ ವೆಚ್ಚದ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಮಳೆಗಾಲದಲ್ಲಿ ಬುಗಡನಹಳ್ಳಿಯಿಂದ ಹೆಬ್ಬಾಕ ಕೆರೆಗೆ ಹೆಚ್ಚುವರಿಯಾಗಿ ನೀರು ಸಂಗ್ರಹಿಸಿ, ಬೇಸಿಗೆಯಲ್ಲಿ ಅಲ್ಲಿಂದ ತುಮಕೂರು ನಗರಕ್ಕೆ ನೀರು ಬಿಡುವ ಯೋಜನೆಯನ್ನು 2008-09ನೆ ಸಾಲಿನಲ್ಲಿ ಆರಂಭಿಸಲಾಗಿತ್ತು. ಅನೇಕ ಅಡೆತಡೆಗಳನ್ನು ದಾಟಿ ಕಾಮಗಾರಿ ಪೂರ್ಣಗೊಂಡಿದ್ದು, ಏತ ನೀರಾವರಿಯ ಮೂಲಕ ಇದೀಗ ಹೆಬ್ಬಾಕ ಕೆರೆ ತುಂಬಿಸುವ ಕಾರ್ಯ ನಡೆದಿದೆ.












Click it and Unblock the Notifications