ಮಡೆಸ್ನಾನವನ್ನು ಮಲಹೊರುವ ಪದ್ಧತಿಗೆ ಹೋಲಿಸಿದ ಗೌಡ

ವೀರೇಂದ್ರ ಹೆಗ್ಗಡೆ ಸವಾಲು: ಈ ಮಧ್ಯೆ, ಸರಕಾರವೂ ಮಡೆಸ್ನಾನವನ್ನು ನಿಷೇಧಿಸುವ ಬಗ್ಗೆ ಗಂಭೀರ ಚಿಂತೆ ನಡೆಸಿದೆ. ಇನ್ನು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು 'ಮಡೆ ಸ್ನಾದ ಪದ್ಧತಿ ಅಲ್ಲಿಯ ನಂಬುಗೆ. ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವುದೆಲ್ಲ ಮೂಢನಂಬುಗೆಯೇ. ಸತ್ಯದ ನಂಬುಗೆ ಯಾವುದು ಹುಡುಕಿ ಕೊಡಿ' ಎಂದು ಸವಾಲೆಸೆದಿದ್ದಾರೆ.
ಆದರೆ, ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಅವರು ಮಡೆಸ್ನಾನ ಪದ್ಧತಿಯನ್ನು ಅನಿಷ್ಟ ಪದ್ಧತಿ ಎಂದು ಬಣ್ಣಿಸಿದ್ದಾರೆ. ದೇವನಹಳ್ಳಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ 'ಮಲ ಹೊರುವ ಪದ್ಧತಿ, ದೇವದಾಸಿ ಪದ್ಧತಿಗಳನ್ನು ನಿಷೇಧಿಸಿದಂತೆ ಈ ಮಡೆಸ್ನಾನ ಪದ್ಧತಿಯನ್ನೂ ನಿಷೇಧಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ' ಎಂದು ಅಭಯ ನೀಡಿದ್ದಾರೆ.












Click it and Unblock the Notifications