ಪ್ರಿನ್ಸಿಪಾಲರು ಬುದ್ಧಿ ಹೇಳಿದ್ದಕ್ಕೆ ನೇಣು ಹಾಕಿಕೊಂಡ ವಿದ್ಯಾರ್ಥಿ

ಚೆನ್ನಾಗಿ ಓದುವ ವಿಚಾರದಲ್ಲಿ ಹಾಗೂ ಕಾಲೇಜಿಗೆ ಬರುವ ವಿಚಾರದಲ್ಲಿ ಪ್ರಿನ್ಸಿಪಾಲರೊಬ್ಬರು ವಿದ್ಯಾರ್ಥಿಗೆ ಆತನ ಸ್ನೇಹಿತರ ಎದುರಿಗೆ ಬುದ್ಧಿಮಾತು ಹೇಳಿದ್ದಕ್ಕೆ ಬೇಸರಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಿನ್ಸಿಪಾಲರು ಹೇಳಿದ ಬುದ್ಧಿಮಾತನ್ನು ತಪ್ಪಾಗಿ ತಿಳಿದುಕೊಂಡು ಮನೆಗೆ ಬಂದು ರೂಂನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ. ಈ ಘಟನೆ ಬುಧವಾರ ರಾತ್ರಿ ನಗರದ ಗೋಪಾಲಪುರ ರಸ್ತೆಯ ಪೊಲೀಸ್ ವಸತಿಗೃಹದ ಹಿಂಭಾಗ ಮನೆಯೊಂದರಲ್ಲಿ ನಡೆದಿದೆ.
ಸಿದ್ದಯ್ಯ ಎಂಬುವರ ಮಗ ವರುಣ್ (16) ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಈತನು ಎಸ್ಆರ್ಎಸ್ ಕಾಲೇಜ್ನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿರುತ್ತದೆ. ಈ ಬಗ್ಗೆ ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. (ಒನ್ಇಂಡಿಯಾ ಕನ್ನಡ)











Click it and Unblock the Notifications