ಹೆಗ್ಡೆ ಮತ್ತೆ ಲೋಕಾಯುಕ್ತ ಆಗೊಲ್ಲ ಅಂದಿದ್ದು ಏಕೆ?

ಇದಕ್ಕೆ ಅವರು ಮೂರು ಸಕಾರಣಗಳನ್ನೂ ನೀಡಿದ್ದಾರೆ: ಮೊದಲನೇಯದಾಗಿ, ಪ್ರಸ್ತುತ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಎರಡನೇಯದಾಗಿ, ಈಗ ನಾನು ಆ ಹುದ್ದೆಗೆ ಅರ್ಹನೂ ಅಲ್ಲ ಮತ್ತು ಕೊನೆಯದಾಗಿ, ನನ್ನ ಮೇಲೆ ಸರ್ಕಾರ ಆಥವಾ ರಾಜಕೀಯ ಪಕ್ಷಗಳಿಗೆ ನಂಬಿಕೆ ಕೂಡ ಇಲ್ಲ. ಎಲ್ಲರಿಗೂ ನಂಬಿಕೆಯಿಲ್ಲದ ವ್ಯಕ್ತಿಯನ್ನು ಲೋಕಾಯುಕ್ತ ಸ್ಥಾನಕ್ಕೆ ನೇಮಕಗೊಳಿಸುವುದು ಸರಿಯಲ್ಲ.
ಆದ್ದರಿಂದ ಎಲ್ಲರಿಗೂ ನಂಬಿಕೆ ಬರುವ ವ್ಯಕ್ತಿ ಆ ಸ್ಥಾನಕ್ಕೆ ನೇಮಕಗೊಳ್ಳಬೇಕು. ಅಂಥವರನ್ನು ಸರ್ಕಾರ ಹುಡುಕಿ ಆಯ್ಕೆ ಮಾಡಲಿ; ಒಂದುವೇಳೆ ಕರ್ನಾಟಕದಲ್ಲಿ ಅಂಥವರು ಇಲ್ಲ ಅಂದರೆ ಹೊರ ರಾಜ್ಯದಿಂದ ಕರೆದುಕೊಂಡು ಬರಲಿ. ಅದುಬಿಟ್ಟು ನಾನು ಆ ಸ್ಥಾನಕ್ಕೆ ಮತ್ತೂಮ್ಮೆ ನೇಮಕಗೊಳ್ಳಲು ಬಯಸುವುದಿಲ್ಲ ಎಂದು ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications