ಬಿ. ಶ್ರೀರಾಮುಲು ಬಿಜೆಪಿಯಿಂದ ಉಚ್ಛಾಟನೆ: ಈಶ್ವರಪ್ಪ

ಈ ಭೂಮಿ ಮೇಲೆ ಯಾವುದೇ ಬಿಜೆಪಿ ಕಾರ್ಯಕರ್ತ ಪಕ್ಷವನ್ನು ಧಿಕ್ಕರಿಸಿ, ಚುನಾವಣೆಯಲ್ಲಿ ಪಾಲ್ಗೊಂಡರೆ ಅವರನ್ನು ಮುಲಾಜಿಲ್ಲದೆ ಪಕ್ಷದಿಂದ ಉಚ್ಛಾಟಿಸುವ ಸಂಪ್ರದಾಯವಿದೆ. ಇದಕ್ಕೆ ಶ್ರೀರಾಮುಲು ಸಹ ಹೊರತಲ್ಲ. ಅವರು ನಾಮಪತ್ರ ಸಲ್ಲಿಸುತ್ತಿದ್ದಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಆದರೆ ಈ ಶಿಸ್ತು ಕ್ರಮ ಯಾವ ಪ್ರಮಾಣದ್ದು, ಎಷ್ಟು ವರ್ಷ ಕಾಲ ಅವರನ್ನು ಉಚ್ಛಾಟಿಸಲಾಗುವದು? ಎಂಬೆಲ್ಲ ಪ್ರಶ್ನೆಗಳಿಗೆ ಈಶ್ವರಪ್ಪ ಉತ್ತರಿಸಿಲ್ಲ. ಈ ಮಧ್ಯೆ ಶ್ರೀರಾಮುಲು ತಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಕ್ತಿಗೊಳಿಸುವಂತೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.












Click it and Unblock the Notifications