ಖಾಸಗಿ ದೂರಿಗೆ ಇನ್ನಿಲ್ಲ ಮನ್ನಣೆ: ಅಶೋಕ್, ನಿರಾಣಿ ಸೇಫ್

ಇದನ್ನು ಆಲಿಸಿ ಪರಪ್ಪನ ಅಗ್ರಹಾರಕ್ಕೆ ಹೋಗಲು ಸಾಲಿನಲ್ಲಿ ನಿಂತಿರುವ ಅಶೋಕ, ನಿರಾಣಿ ವಗೈರೆಗಳಿಗೆ ಎಲ್ಲಿಂದ ನಗಬೇಕೋ ತಿಳಿಯದಾಗಿದೆ. ತಮ್ಮ ಮಾಜಿ ಅಧಿನಾಯಕರೊಬ್ಬರು ಇದೇ ನೆಪವೊಡ್ಡಿ ಜೈಲಿನಿಂದ ಪಾರಾಗಿ ಬಂದಿರುವುದನ್ನು ಕಣ್ಣಾರೆ ಪರಾಂಬರಿಸಿರುವ ಈ ಧೀಮಂತ ನಾಯಕರು ಒಂದು 'ಪಿಂಟ್' ಹಾಕಿ ಆನಂದ ತುಂದಲಿತರಾದರು ಎಂಬುದು ಶುದ್ಧ ಕುಹಕವಷ್ಟೇ.
ದೇಶದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಾಕ್ಷಾತ್ ಮಾಜಿ ಮುಖ್ಯಮಂತ್ರಿಯೇ ಜೈಲುಪಾಲಾದ ಪ್ರಕರಣ ನಡೆದಿದ್ದು ಘನ ನ್ಯಾಯಾಲಯವನ್ನು ಭಾರಿ ಚಿಂತೆಗೀಡುಮಾಡಿತ್ತು ಎನಿಸುತ್ತದೆ. ಆದ್ದರಿಂದ ಖಾಸಗಿ ದೂರಿಗೆ ಇನ್ನು ಮುಂದೆ ಮನ್ನಣೆ ಬೇಡವೇ ಬೇಡ ಎಂಬರ್ಥದ ತೀರ್ಪು ನೀಡಿ ಕೈತೊಳೆದುಕೊಂಡಿದೆ. ಅಲ್ಲಿಗೆ ಇನ್ನು ಮುಂದೆ ಯಾರಾದರೂ ಖಾಸಗಿ ದೂರು ಹಿಡಿದು ಕೋರ್ಟಿಗೆ ಹೋದರೆ ಆ ಕೇಸು ಬರಕತ್ತಾಗುವುದು ಅನುಮಾನವೇ.
ಆದರೆ ಈ ತೀರ್ಪು ಆರೋಪಿಗಳಿಗೆ ಸಂಜೀವಿನಿಯಾಗುವ ಅಪಾಯವಿದೆ. ಕಾನೂನಿನ ಹಿಡಿತದಿಂದ ಬಚಾವಾಗಲು ಹವಣಿಸುತ್ತಿದ್ದ ಅಶೋಕ, ನಿರಾಣಿ ವಗೈರೆಗಳು ಸದ್ಯದಲ್ಲೇ ತಮ್ಮ ವಿರುದ್ಧ ಲೋಕಾಯುಕ್ತ ಕೋರ್ಟಿನಲ್ಲಿ ಎಫ್ಐಆರ್ ದಾಖಲಾಗಿ ಕೋಳ ತೊಡಿಸುವ ಸಮಯ ಸಮೀಪಿಸುತ್ತಿದ್ದಂತೆ 'ನೋಡಿ, ಖಾಸಗಿ ದೂರಿನ ಬಗ್ಗೆ ಮೊನ್ನೆಯಷ್ಟೇ ನಮ್ಮ ನ್ಯಾಯಾಲಯ ಏನು ಹೇಳಿದೆ ಎಂಬುದನ್ನು ವಸಿ ತಿರುವಿ ಹಾಕಿ ಮೈಲಾರ್ಡ್' ಎಂದು ನ್ಯಾ. ಸುಧೀಂದ್ರರಾವ್ ಅವರಿಗೇ ಕೇಳಿದರೆ ಆಶ್ಚರ್ಯವೇನೂ ಇಲ್ಲ!
ಈ ಗೂಡಾರ್ಥವನ್ನು ಅರಿತೇ ಅಶೋಕ ಮಹಾರಾಜರು ನಿನ್ನೆ ರಾತ್ರಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅರಮನೆಗೆ ಭೇಟಿ ನೀಡಿ, ಮನೆಯ ಯಜಮಾನನನ್ನು ಉದ್ದೇಶಿ 'ನೀವೇ ನಮ್ಮ ನಿಜವಾದ ನಾಯಕರು, ಸೂಕ್ತ ಮಾರ್ಗದರ್ಶಿ' ಎಂದು ಉದ್ದಂಡ ನಮಸ್ಕಾರ ಹಾಕಿ ಬಂದರಂತೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications